ಕಾಂಗ್ರೆಸ್ ಹೈಕಮಾಂಡ್‌ಗೆ ಅಧಿಕಾರ ಹಂಚಿಕೆ ತಲೆಬಿಸಿ:  ಹಠಕ್ಕೆ ಬಿದ್ದ ಸಿದ್ದು.. ಡಿಕೆಶಿ

ಕಾಂಗ್ರೆಸ್ ಹೈಕಮಾಂಡ್‌ಗೆ ಅಧಿಕಾರ ಹಂಚಿಕೆ ತಲೆಬಿಸಿ: ಹಠಕ್ಕೆ ಬಿದ್ದ ಸಿದ್ದು.. ಡಿಕೆಶಿ

Published : May 16, 2023, 01:40 PM IST

ಕಾಂಗ್ರೆಸ್ ಹೈಕಮಾಂಡ್‌ಗೆ ಖುಷಿ ಜೊತೆ ಅಧಿಕಾರ ಹಂಚಿಕೆ ತಲೆಬಿಸಿ
ಸಿಎಂ ಪಟ್ಟಕ್ಕಾಗಿ ನಾನಾ..? ನೀನಾ..? ಹಠಕ್ಕೆ ಬಿದ್ದ ಸಿದ್ದು.. ಡಿಕೆಶಿ
ಮುಂದಿನ ಸಿಎಂ ಯಾರು..? ಏನಿರಲಿದೆ ಹೈಕಮಾಂಡ್ ತೀರ್ಮಾನ ? 

ಬರೋಬ್ಬರಿ 135 ಸೀಟುಗಳನ್ನು ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಅಧಿಕಾರದ ಗದ್ದುಗೆ ತಲೆಬಿಸಿ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಗೆಲುವು ಸಹಜವಾಗಿ ಖುಷಿಯನ್ನೇ ಕೊಟ್ಟಿದೆ. ಆದ್ರೆ ಅಷ್ಟೇ ತಲೆನೋವನ್ನು ಅಧಿಕಾರ ಹಂಚಿಕೆಯಲ್ಲಿ ಆಗುತ್ತಿದೆ. ಅದ್ರಲ್ಲೂ ಈ ಬಾರಿ ಕಾಂಗ್ರೆಸ್ ಗೆಲುವಿನ ಸಾಕ್ಷಿಗಳನ್ನು ಮುಂದಿಟ್ಟು, ತಮ್ಮ ಸಮುದಾಯದ ನಾಯಕರುಗಳಿಗೆ ಸಿಎಂ ಮಾಡಿ, ಡಿಸಿಎಂ ಮಾಡಿ, ಮಂತ್ರಿಗಳನ್ನಾದ್ರು ಮಾಡಬೇಕೆಂದು ಆಯಾ ಧಾರ್ಮಿಕ ಗುರುಗಳು ಹೋರಾಟಕ್ಕೆ ಇಳಿದಿದ್ದಾರೆ. ಈ ಧರ್ಮ ಗುರುಗಳ ಹೋರಾಟ ಕಾಂಗ್ರೆಸ್ ಹೈಕಮಾಂಡ್‌ಗೆ ಇನ್ನಿಲ್ಲದ ತಲೆನೋವು ತಂದಿಟ್ಟಿದೆ. ರಾಜ್ಯದಲ್ಲಿ ಇರುವ ಪ್ರಮುಖ ಒಕ್ಕಲಿಗ ಮುಖಂಡರುಗಳೆಲ್ಲ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ಪಕ್ಷಕ್ಕೆ ಡಿಕೆ ಶಿವಕುಮಾರ್ ಇನ್ನಿಲ್ಲ ಶ್ರಮ ಪಟ್ಟಿದ್ದಾರೆ. ಮುಳುಗುತ್ತಿದ್ದ ಹಡಗನ್ನು ಮತ್ತೆ ವೇಗದಲ್ಲಿ ಓಡುವಂತೆ ಮಾಡಿದ್ದಾರೆ. ಹೀಗಾಗಿ ಅವರ ಶ್ರಮಕ್ಕೆ ಫಲವಾಗಿ ಸಿಎಂ ಸ್ಥಾನ ಕೊಡಲೇಬೇಕು ಅನ್ನೋದು ರಾಜ್ಯ ಒಕ್ಕಲಿಗ ಮತ್ತು ಒಕ್ಕಲಿಗ ಗುರುಗಳ ಆಕಾಂಕ್ಷೆಯಾಗಿದೆ. 

ಇದನ್ನೂ ವೀಕ್ಷಿಸಿ: ಹೈಕಮಾಂಡ್‌ ಸಿಎಂ ಆಗು ಅಂದ್ರೆ ನಾನು ಸಿದ್ಧನಿದ್ದೇನೆ: ಡಾ.ಜಿ. ಪರಮೇಶ್ವರ್‌

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more