'ಗುರುವಾರ ಚಾಮುಂಡಿ ಬೆಟ್ಟಕ್ಕೆ ಬನ್ನಿ, ಜತೆಗೆ ಕೊಂಡುಕೊಂಡವರನ್ನು ಕರೆತನ್ನಿ'

Oct 15, 2019, 8:59 PM IST

ಬೆಂಗಳೂರು(ಅ. 15)  ಸಾರಾ ಮಹೇಶ್ ಮತ್ತು ಎಚ್‌.ವಿಶ್ವನಾಥ್ ಅವರ ನಡುವಿನ ವಾಕ್ಸಮರ ಮತ್ತೆ ಶುರುವಾಗಿದೆ. 25 ಕೋಟಿಗೆ ವಿಶ್ವನಾಥ್ ಸೇಲಾಗಿದ್ದಾರೆ ಎಂದು ಆರೋಪ ಮಾಡಿದ್ದೀರಾ ಅಲ್ಲವೆ? ಗುರುವಾರ ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಿ. ನೀವು ಬರುವುದಲ್ಲದೇ ನಿಮ್ಮ ಜತೆ ನನ್ನನ್ನು ಕೊಂಡುಕೊಂಡವರನ್ನು ಕರೆದುಕೊಂಡು ಬನ್ನಿ ಎಂದು ವಿಶ್ವನಾಥ್ ಬಹಿರಂಗ ಸವಾಲು ಎಸೆದಿದ್ದಾರೆ. 

ವಾಕ್ ಸಮರ ಸಾಕೆಂದ ವಿಶ್ವನಾಥ್-ಮಹೇಶ್

ಬದಲಾದ ರಾಜಕಾರಣದ ವಾತಾವರಣದಲ್ಲಿ ಜೆಡಿಎಸ್ ಎಂಎಲ್ ಎ ಆಗಿದ್ದ  ಎಚ್‌. ವಿಶ್ವನಾಥ್ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಮೇಲೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ವಿಶ್ವನಾಥ್ ಅವರನ್ನು ಅನರ್ಹಗೊಳಿಸಿದ್ದರು.