ಸಿದ್ದರಾಮಯ್ಯ ಮನೆ, ನನ್ನ ಮನೆ ಸುತ್ತುತ್ತ ಇರಬೇಡಿ: ಡಿಸಿಎಂ ಆಗ್ತಿದ್ದಂತೆ ಡಿಕೆಶಿ ಫುಲ್‌ ವೈಲೆಂಟ್‌ !

May 21, 2023, 3:46 PM IST

ಡಿ.ಕೆ. ಶಿವಕುಮಾರ್‌ ಉಪಮುಖ್ಯಮಂತ್ರಿ ಆಗುತ್ತಿದ್ದಂತೆ ಫುಲ್‌ ಗರಂ ಆಗಿದ್ದಾರೆ. ನನ್ನ ಬಳಿ ಬಂದು ಸಿದ್ದರಾಮಯ್ಯ ಹಾಗಂದ್ರು, ಎಂ.ಬಿ. ಪಾಟೀಲ್‌ ಹೀಗಂದ್ರು ಅಂತ ಚಾಡಿ ಹೇಳಿ ತಂದು ಹಾಕಬೇಡಿ. ಸಿದ್ದರಾಮಯ್ಯ ಮನೆ, ನನ್ನ ಮನೆ ಸುತ್ತುತ್ತ ಇರಬೇಡಿ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಟರಾಗಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸವಿದೆ. ನಿಮ್ಮ ಗುರಿ ಮುಂದಿನ ಚುನಾವಣೆಯಾಗಿರಲಿ. ನನ್ನ ಪ್ರಾಮುಖ್ಯತೆ ಯಾವಾಗಲೂ ಪಕ್ಷಕ್ಕೆ ಇರುತ್ತದೆ. ಈ ಸರ್ಕಾರ ಐದು ವರ್ಷ ಶಾಂತಿಯಿಂದ ನಡೆಯಬೇಕು ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಮುಖಂಡರಿಗೆ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: RADO ವಾಚ್ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ ಪತ್ನಿ: ಡಿಕೆಶಿ, ಎಂ.ಬಿ. ಪಾಟೀಲ್‌ಗೆ ವಾಚ್‌ ತೋರಿಸಿದ ಸಿಎಂ !