Loksabha Election: ಯಾರಿಗೆ ಯಾರು ಪೈಪೋಟಿ ? ಹೇಗಿದೆ ರಣಕಣ ಪರಿಸ್ಥಿತಿ? ಬಿಜೆಪಿಯ ತಂತ್ರಕ್ಕೆ ಟಕ್ಕರ್ ಕೊಡಲಿದೆಯಾ ಕಾಂಗ್ರೆಸ್ ?

Loksabha Election: ಯಾರಿಗೆ ಯಾರು ಪೈಪೋಟಿ ? ಹೇಗಿದೆ ರಣಕಣ ಪರಿಸ್ಥಿತಿ? ಬಿಜೆಪಿಯ ತಂತ್ರಕ್ಕೆ ಟಕ್ಕರ್ ಕೊಡಲಿದೆಯಾ ಕಾಂಗ್ರೆಸ್ ?

Published : Mar 15, 2024, 04:58 PM IST

ಪದ್ಮವ್ಯೂಹ ಬೇಧಿಸೋಕೆ ಸಿದ್ಧವಾಗಿದೆ ನಿಗೂಢ ರಣತಂತ್ರ..?
ಸಮೀಕರಣವನ್ನೆಲ್ಲಾ ಬದಲಾಯಿಸುತ್ತಾ ಟಿಕೆಟ್ ಹಂಚಿಕೆ!
ಚುನಾವಣೆಯ ಹೊತ್ತಲ್ಲಿ ಕದನ ಕುತೂಹಲ ಹೆಚ್ಚಿದ್ದೇಕೆ..?
 

ಯಾವ ಕ್ಷಣದಲ್ಲಿ ಬೇಕಿದ್ರೂ ಚುನಾವಣೆ(Loksabha) ಘೋಷಣೆಯಾಗ್ಬೋದು. ಆದ್ರೆ, ಆ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ರಾಜಕೀಯ ಸಮರಘೋಷ ಮೊಳಗಿದೆ. ಅತ್ತ ಕೇಸರಿ ಪಡೆ, ಇತ್ತ ಹಸ್ತ ಸೇನೆ, ಇಬ್ಬರೂ ಕೂಡ, ಯುದ್ಧ ಸನ್ನದ್ಧರಾಗಿ ರಣಾಂಗಣ ಪ್ರವೇಶಿಸೋಕೆ ಕಾಯ್ತಾ ಇದಾರೆ. ಈಗಾಗಲೇ ಕಾಂಗ್ರೆಸ್(Congress) ಪಾರ್ಟಿ, ತನ್ನ ಅಭ್ಯರ್ಥಿಗಳ ಪಟ್ಟಿನಾ ರಿಲೀಸ್ ಮಾಡಿತ್ತು. ಅದರ ಬೆನ್ನಲ್ಲೆ ಬಿಜೆಪಿಯೂ ಕೂಡ, ತನ್ನ ರಣಕಲಿಗಳ ಎರಡನೇ ಲಿಸ್ಟ್ ರಿಲೀಸ್ ಮಾಡಿದೆ. ಈ ಲಿಸ್ಟ್‌ನಲ್ಲಿ ಕರ್ನಾಟಕದ(Karnataka) ಬರೋಬ್ಬರಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿದೆ. ಅದರ ಜೊತೆಗೆ ಅಚ್ಚರಿಯೂ ಇದೆ. ಬಿಜೆಪಿ(BJP) ಈ ಹಿಂದೆ ಮೊದಲ ಪಟ್ಟಿ ಅನೌನ್ಸ್ ಮಾಡಿದಾಗ, ಅದರಲ್ಲಿ ಕರ್ನಾಟಕದ ಯಾರ ಹೆಸರೂ ಇರಲಿಲ್ಲ. ಆದ್ರೆ ಈಗ, ಎರಡನೇ ಪಟ್ಟಿಯಲ್ಲಿ, ಒಟ್ಟು 20 ಮಂದಿ ಅಭ್ಯರ್ಥಿಗಳ ಹೆಸರಿದೆ. ಆ ಪೈಕಿ, 8 ಮಂದಿ ಲಿಂಗಾಯತರು, ಮೂವರು ಪರಿಶಿಷ್ಟ ಜಾತಿಯವರು, ಇಬ್ಬರು ಒಕ್ಕಲಿಗರು ಹಾಗೂ ಬ್ರಾಹ್ಮಣರು. ಉಳಿದ ಐವರು, ಪರಿಶಿಷ್ಟ ಪಂಗಡ, ಬಂಟ, ಬಿಲ್ಲವ, ಬಲಿಜ ಹಾಗೂ ಕ್ಷತ್ರಿಯ ಸಮುದಾಯಕ್ಕೆ ಸೇರಿದವರು. ಈ ಲಿಸ್ಟ್ ನೋಡಿ ಅಚ್ಚರಿಯಾಗೋದಕ್ಕೂ ಕಾರಣವಿದೆ. ಅಂತೂ 2024ರ ಚುನಾವಣೆಯಲ್ಲಿ ಘಟಾನುಘಟಿಗಳಿಗೆ ಟಿಕೆಟ್ ಮಿಸ್ ಆಗಿದೆ. ವಿಭಿನ್ನ ಪ್ರಯೋಗಕ್ಕೆ, ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ.

ಇದನ್ನೂ ವೀಕ್ಷಿಸಿ:  Narendra Modi:ಮತ್ತೆ ಕರ್ನಾಟಕದಿಂದಲೇ ಮೋದಿ ಚುನಾವಣಾ ಪ್ರಚಾರ: ಈ ಬಾರಿಯೂ ಕಲಬುರಗಿಯಿಂದಲೇ ಎಲೆಕ್ಷನ್ ಕಿಕ್‌ಸ್ಟಾರ್ಟ್!

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!