ಸಿದ್ದು ರಣವ್ಯೂಹ ರೆಡಿ, ಕುರ್ಚಿ ಉಳಿಸಿಕೊಳ್ಳಲು ದೆಹಲಿ ಚದುರಂಗ: ಗಟ್ಟಿಯಾಗುತ್ತಾ ಸಿಂಹಾಸನ..?

Aug 24, 2024, 1:01 PM IST

ಬೆಂಗಳೂರು(ಆ.24):  ಚುಚ್ಚುತ್ತಿದೆ ಮುಡಾ ಮುಳ್ಳು.. ಹೊತ್ತಿ ಉರಿಯುತ್ತಿದೆ ರಾಜಕೀಯ ದಳ್ಳುರಿ..! ರಾಜ್ಯಪಾಲರ ವಿರುದ್ಧ ಸಿದ್ದರಾಮಯ್ಯ ಸಮರ, ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾದ ಬಲರಾಮಯ್ಯ..! ಸಿಎಂ ಸಿದ್ದರಾಮಯ್ಯನ ಸಿಂಹಾಸನಕ್ಕೆ ಸಿಕ್ಕಿತಾ ಕಾಂಗ್ರೆಸ್ ಹೈಕಮಾಂಡ್'ನ ಶ್ರೀರಕ್ಷೆ..? ಡಿಸಿಎಂ ಡಿಕೆಶಿ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇಕೆ ಮುಖ್ಯಮಂತ್ರಿ..? ಕುರ್ಚಿ ಉಳಿಸಿಕೊಳ್ಳುವ ಕಸರತ್ತಾ..? ಸಿಂಹಾಸನ ಗಟ್ಟಿಗೊಳಿಸುವ ಸಾಹಸನಾ..? ಯಶಸ್ವಿಯಾಯ್ತಾ ಸಿದ್ದರಾಮಯ್ಯ ಉರುಳಿಸಿದ ದೆಹಲಿ ದಾಳ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿದ್ದು ದೆಹಲಿ ಚದುರಂಗ.

ಹಾಗಾದ್ರೆ ದೆಹಲಿ ಚದುರಂಗದಲ್ಲಿ ಸಿದ್ದರಾಮಯ್ಯವರು ನಡೆಸಿದ ನಡೆ ಯಶಸ್ವಿಯಾಯ್ತಾ..? ಏನೇ ಸಂದರ್ಭ ಎದುರಾದ್ರೂ, ನಿಮ್ಮ ಹಿಂದೆ ನಾವಿದ್ದೇವೆ ಅನ್ನೋ ಅಭಯವನ್ನು ಹೈಕಮಾಂಡ್'ನಿಂದ ಪಡೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದ್ರಾ..? ಸಿಎಂಗೆ ಸಿಗ್ತಾ ಹೈಕಮಾಂಡ್ ಶ್ರೀರಕ್ಷೆ..? ರಾಷ್ಟ್ರಪತಿಗಳ ಮುಂದೆ ನಡೆಯಲಿದ್ಯಾ ಕಾಂಗ್ರೆಸ್ ಶಾಸಕರ ಪರೇಡ್..? 

ಕಪ್ಪು ಚುಕ್ಕೆಯೇ ಇಲ್ಲ ಎಂದಿದ್ದ ಸಿಎಂಗೆ 'ಕಪ್ಪು ಕಾಗೆ' ಎಂದ ಛಲವಾದಿ ನಾರಾಯಣಸ್ವಾಮಿ!

ಸಿಂಹಾಸನದ ಬುಡ ಅಲುಗಾಡ್ತಾ ಇರೋ ಹೊತ್ತಲ್ಲೇ, ದೆಹಲಿಯಲ್ಲಿ ದಾಳ ಉರುಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಹಾಗಾದ್ರೆ ಸಿದ್ದು ಉರುಳಿಸಿದ ದೆಹಲಿ ದಾಳ ಯಶಸ್ವಿಯಾಯ್ತಾ..? ನಿಮ್ಮ ಹಿಂದೆ ನಾವಿದ್ದೇವೆ ಅನ್ನೋ ಅಭಯವನ್ನು ಹೈಕಮಾಂಡ್'ನಿಂದ ಪಡೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದ್ರಾ..? ಸಿಎಂಗೆ ಸಿಗ್ತಾ ಹೈಕಮಾಂಡ್ ಶ್ರೀರಕ್ಷೆ..? ರಾಷ್ಟ್ರಪತಿಗಳ ಮುಂದೆ ನಡೆಯಲಿದ್ಯಾ ಕಾಂಗ್ರೆಸ್ ಶಾಸಕರ ಪರೇಡ್..? 

ಸಿದ್ದರಾಮಯ್ಯನವಿಗೆ ಹೈಕಮಾಂಡ್ ಬಲವೂ ಸಿಕ್ಕಿದೆ, ಅಭಯವೂ ದಕ್ಕಿದೆ. ಇದ್ರ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿರೋ ಕಂಟಕ.. ಏನದು ಕಂಟಕ ನೋಡೋಣ, 

ಪ್ರಾಸಿಕ್ಯೂಷನ್ ಪಂಜರದಲ್ಲಿ ಸಿಲುಕಿರೋ ಸಿದ್ದರಾಮಯ್ಯನವಿಗೆ ಹೈಕಮಾಂಡ್ ಬಲವೂ ಸಿಕ್ಕಿದೆ, ಅಭಯವೂ ದಕ್ಕಿದೆ. ಇದ್ರ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿರೋ ಕಂಟಕ.. ಅಷ್ಟಕ್ಕೂ ಏನದು ಕಂಟಕ ಗೊತ್ತಾ..?