ಕರೆಂಟ್ ಫ್ರೀ ಕೊಟ್ಟು.. ರೇಟ್ ಜಾಸ್ತಿ ಮಾಡಿತಾ ಕಾಂಗ್ರೆಸ್..?: ಒಂದೇ ತಿಂಗಳ ಅಂತರದಲ್ಲಿ ಆಗಿದ್ದೇನೇನು..?

Jun 6, 2023, 2:22 PM IST

ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳು ಆಲ್ ಮೋಸ್ಟ್ ಅಂತಿಮ ಹಂತಕ್ಕೆ ಬಂದಿದ್ದಾವೆ. ಇನ್ಮುಂದೆ ಒಂದೊಂದಾಗೆ, ಒಂದರ ಬಳಿಕ ಒಂದು ಜಾರಿಯಾಗಲಿದೆ. ಆದ್ರೆ, ಈ ಗ್ಯಾಪ್‌ನಲ್ಲಿ ಸೃಷ್ಟಿಯಾಗಿರೋ ಗೊಂದಲಗಳು, ಅನುಮಾನಗಳು.. ಸಂದೇಹಗಳು.. ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಏನಾದ್ರೂ ಅಧಿಕಾರಕ್ಕೆ ಬಂದ್ರೆ, ಬಂದ ಮರುಕ್ಷಣವೇ ಕರೆಂಟ್ ಫ್ರೀ ಅಂತ ಅವತ್ತು ಸಿದ್ದರಾಮಯ್ಯನೋರು ಘಂಟಾಘೋಷವಾಗಿ ಹೇಳಿದ್ರು.ಇದೇ ಮಾತನ್ನೇ ಆಧಾರವಾಗಿಟ್ಕೊಂಡು ಜನ, ತಮ್ಮ ಊರುಗಳಿಗೆ ವಿದ್ಯುತ್ ಇಲಾಖೆಯ ಜನ ಬಂದ್ರೆ ಬೈತಾ ಇದ್ರು.. ಇನ್ನೂ ಸಿದ್ದರಾಮಯ್ಯನೋರ ಮಾತು ಭರವಸೆಯಾಗೇ ಉಳಿದಿದೆ.. ಅದು ಕಾರ್ಯಗತವಾಗೋ ತನಕ ಬಿಲ್ ಕಟ್ಬೇಕು ಅಂದ್ರೆ, ಬಿಲ್ ಕುಲ್ ಸಾಧ್ಯವಿಲ್ಲ ಅಂತಿದ್ದಾರೆ. ಆದ್ರೆ ಈ ಯೋಜನೆ ಜಾರಿಗೆ ಬರೋದು ಈಗಿಂದ ಅಲ್ಲ, ಜುಲೈನಿಂದ ಅಲ್ಲಿ ತನಕ ಕರೆಂಟ್ ಬಿಲ್ ಕಟ್ಬೇಕು ಅಂದ್ರೆ ಜನ ಕೇಳುತ್ತಿಲ್ಲ. 

ಇದನ್ನೂ ವೀಕ್ಷಿಸಿ: ಹಾಡಿನ ವಿಷ್ಯಕ್ಕೆ ಶುರುವಾದ ಗಲಾಟೆ: ದುಡ್ಡು ಹಾಕಿ ಸಮಾರಂಭ ಆಯೋಜಿಸಿದ್ದವನೇ ಕೊಲೆಯಾದ ..!