'ಕೈ' ಸನ್ನೆಯಲ್ಲೇ ಕಮಿಷನ್..ಏನಿದರ ಮರ್ಮ..? ಗುತ್ತಿಗೆದಾರರ ಬಲೆಯಲ್ಲಿ ಡಿಸಿಎಂ !

'ಕೈ' ಸನ್ನೆಯಲ್ಲೇ ಕಮಿಷನ್..ಏನಿದರ ಮರ್ಮ..? ಗುತ್ತಿಗೆದಾರರ ಬಲೆಯಲ್ಲಿ ಡಿಸಿಎಂ !

Published : Aug 11, 2023, 01:40 PM IST

ಡಿಸಿಎಂ ಕೊರಳಿಗೆ ಸುತ್ತಿಕೊಳ್ಳುತ್ತಾ ಕಮಿಷನ್ ಉರುಳು..?
ಬಾಣಲೆಯಿಂದಬೆಂಕಿಗೆ ಬಿದ್ದಿದ್ದೇವೆ ಅಂದಿದ್ದೇಕೆ ಕೆಂಪಣ್ಣ..!?
ಪೇಸಿಎಂ Vs ಪೇಸಿಎಸ್,ಕಮಿಷನ್ ಕಾಳಗ..ಏನಿದರ ಮರ್ಮ..?
 

ಅದು ಕಳೆದ ಬಿಜೆಪಿ(BJP) ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ತೂಫಾನ್. ಅದು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದ ಸುನಾಮಿ. ಅದೇ ತೂಫಾನ್, ಅದೇ ಸುನಾಮಿಯೀಗ ಕಾಂಗ್ರೆಸ್ ಸರ್ಕಾರದ ಮೇಲೆ ಅಪ್ಪಳಿಸಿದೆ. ಸಿದ್ದು ಸರ್ಕಾರಕ್ಕೆ ಕಮಿಷನ್(Commission) ಕಂಟಕ ಶುರುವಾಗಿದೆ. ಅವತ್ತು 40% ಅಸ್ತ್ರ, ಇವತ್ತು 15% ರಿವರ್ಸ್ ಅಸ್ತ್ರ. ಕಮಿಷನ್ ಅಂದಾಕ್ಷಣ ಕಣ್ಮುಂದೆ ಬರೋದು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದ್ದು ಮಾಡಿದ್ದ 40% ಕಮಿಷನ್ ಮ್ಯಾಟರ್. ಅವತ್ತು ಇಡೀ ಕೇಸರಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದದ್ದು ಇದೇ 40% ಆರೋಪ. ರಾಜ್ಯ ಗುತ್ತಿಗೆದಾರರ ಸಂಘ ಸ್ಫೋಟಿಸಿದ್ದ 40% ಬಾಂಬ್, ಬಿಜೆಪಿ ಸರ್ಕಾರವನ್ನು ಪೀಸ್ ಪೀಸ್ ಮಾಡಿ ಬಿಟ್ಟಿತ್ತು. ಅದೇ ಗುತ್ತಿಗೆದಾರರೀಗ ಕಾಂಗ್ರೆಸ್(Congress) ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಅದ್ರಲ್ಲೂ ಬಿಬಿಎಂಪಿ (BBMP)ವ್ಯಾಪ್ತಿಯ ಕಾಂಟ್ರಾಕ್ಟರ್‌ಗಳು ಕೈ ಸರ್ಕಾರದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದಾರೆ. ಕಾರಣ, ಕಮಿಷನ್ ರಹಸ್ಯ. ಕಳೆದ 2 ವರ್ಷಗಳಲ್ಲಿ ಆಗಿರೋ ಕಾಮಗಾರಿಗಳ ಬಿಲ್ ಅನ್ನು ಬಿಬಿಎಂಪಿ ತಡೆ ಹಿಡಿದದ್ದೇ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣ. ಕೆಲ ಕಾಮಗಾರಿಗಳ ಮೇಲೆ ಅನುಮಾನವಿದ್ದು, ಕಾಮಗಾರಿ ನಡೆಸದೇನೇ ಬೋಗಸ್ ಬಿಲ್ ಸೃಷ್ಟಿಸಲಾಗಿದೆ ಅನ್ನೋ ದೂರುಗಳು ಸರ್ಕಾರಕ್ಕೆ ಬಂದಿವೆಯಂತೆ. ಹೀಗಾಗಿ ಕಾಮಗಾರಿಗಳ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಆದೇಶ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಕೊಲೆಗಾರನನ್ನ ಬೇಟೆಯಾಡಿತ್ತು ನಿಯತ್ತಿನ ಶ್ವಾನ: ಬರ್ಬರ ಕೊಲೆ ಕೇಸ್ ಬೇಧಿಸಿದ ಲೇಡಿ ಸಿಂಗಂ..!

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?