News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

Oct 16, 2024, 11:22 PM IST

ಬೆಂಗಳೂರು (ಅ.16): ಚುನಾವಣೆಗೆ ದಿನ ನಿಗದಿಯಾಗ್ತಿದ್ದಂತೆ ಉಪಸಮರ ರಂಗೇರಿದೆ. ಮೂರು ಪಕ್ಷದಲ್ಲೂ ಅಭ್ಯರ್ಥಿಗಳ ಆಯ್ಕೆಯದ್ದೇ ಟೆನ್ಷನ್​ ಶುರುವಾಗಿದೆ. ಸಿಎಂ, ಡಿಸಿಎಂ ಜತೆ ವೇಣುಗೋಪಾಲ್ ಮೀಟಿಂಗ್ ನಡೆಸಿದ್ದಾರೆ.

ಮೂರು ಕ್ಷೇತ್ರಗಳೂ ಮೂರು ಪಕ್ಷಕ್ಕೂ ಪ್ರತಿಷ್ಠೆ ಕಣವಾಗಿದೆ. ಶಿಗ್ಗಾಂವಿಯಲ್ಲಿ ಈ ಹಿಂದೆ ಬಿಜೆಪಿ ಗೆದ್ದಿತ್ತು. ಸಂಡೂರಿನಲ್ಲಿ ಕಾಂಗ್ರೆಸ್​. ಚನ್ನಪಟ್ಟಣದಲ್ಲಿ ಜೆಡಿಎಸ್​ ಗೆದ್ದಿತ್ತು.. ಹೀಗಾಗಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಕ್ಷೇತ್ರ ಉಳಿಸಿಕೊಳ್ಳಲೂ ಮೂರು ಪಕ್ಷಗಳೂ ರಣತಂತ್ರ ಹೆಣೆಯುತ್ತಿವೆ.

ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್‌ ಕಾದಂಬರಿಗಳು!

ಜೆಡಿಎಸ್​- ಬಿಜೆಪಿ ಮೈತ್ರಿ ಪಾಳಯದಲ್ಲಿ ಚನ್ನಪಟ್ಟಣ ಟಿಕೆಟ್​ ಹಂಚಿಕೆ ಕಗ್ಗಂಟಾಗಿದೆ. ನಾವು ಗೆದ್ದ ಕ್ಷೇತ್ರ ನಾವೇ ಸ್ಪರ್ಧೆ ಮಾಡ್ತೀವಿ ಎಂದು ಜೆಡಿಎಸ್​ ಪಟ್ಟು ಹಿಡಿದಿದೆ. ಆದ್ರೆ ನಾವು ಗೆದ್ದ ಕೋಲಾರ ಲೋಕಸಭಾ ಕ್ಷೇತ್ರ ನಿಮಗೆ ಬಿಟ್ಟು ಕೊಟ್ಟಿಲ್ವಾ. ಹೀಗಾಗಿ ಚನ್ನಪಟ್ಟಣ ನಮಗೆ ಬಿಟ್ಟುಕೊಡಿ ಎಂಬುದು ಬಿಜೆಪಿ ವಾದ. ಈ ನಡುವೆ ಇಂದು ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ನನಗೆ ಟಿಕೆಟ್​ ತಪ್ಪುವುದು ಹೊಸದೇನಲ್ಲ ಅನ್ನುತ್ತಲೇ ನಾನೇ ಚನ್ನಪಟ್ಟಣಕ್ಕೆ ಅಭ್ಯರ್ಥಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.