ಬಿಎಸ್‌ವೈ ಸರ್ಕಾರಕ್ಕೆ 2 ವರ್ಷ: ಕ್ಯಾಬಿನೆಟ್‌ ವಿಸ್ತರಣೆಗೆ ಕೂಡಿ ಬಂತಾ ಮುಹೂರ್ತ..?

Jul 15, 2021, 10:23 AM IST

ಬೆಂಗಳೂರು(ಜು.15): ಜು.26ಕ್ಕೆ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಎರಡು ವರ್ಷ ಪೂರೈಸಲಿದೆ. ವರ್ಷದ ಬಳಿಕ ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಶುಕ್ರವಾರ ದೆಹಲಿಗೆ ತೆರಳಲಿದ್ದಾರೆ. ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕ್ಯಾಬಿನೆಟ್‌ ವಿಸ್ತರಣೆಗೆ ಮುಹೂರ್ತ ಕೂಡಿ ಬಂತಾ?, ಸಚಿವ ಸಂಪುಟ ವಿಸ್ತರಣೆನಾ? ಅಥವಾ ಪುನರ್‌ ರಚನೆನಾ? ಎಂಬೆಲ್ಲಾ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ. 

ಕರ್ನಾಟಕದಲ್ಲಿ ಅನ್‌ಲಾಕ್‌ 4.0: ಮತ್ತಷ್ಟು ರಿಲೀಫ್‌..!