ರಾಜ್ಯ ಸರ್ಕಾರದಿಂದ ಜಾತಿಗಣತಿ ಜಾರಿಗೆ ಪ್ಲ್ಯಾನ್‌: ವರದಿ ಬಿಡುಗಡೆಗೆ ಬ್ರಾಹ್ಮಣರಿಂದ ವಿರೋಧ !

Jun 8, 2023, 9:26 AM IST

ಕಾಂತರಾಜ್‌ ನೇತೃತ್ವದಲ್ಲಿ 2015ರಲ್ಲಿ ನಡೆಸಿದ್ದ ಜಾತಿ ಗಣತಿ ಅಂಗೀಕಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಬ್ರಾಹ್ಮಣ ಸಮಾಜದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿನ ಬ್ರಾಹ್ಮಣರನ್ನು 42 ಉಪಜಾತಿಗಳಾಗಿ ವಿಂಗಡಿಸಿದ್ದು, ಇದು ತಮ್ಮ ಸಮುದಾಯವನ್ನು ಛಿದ್ರ ಮಾಡುವ ಹುನ್ನಾರ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಆರೋಪ ಮಾಡಿದ್ದಾರೆ. 42.5 ಲಕ್ಷ ಬ್ರಾಹ್ಮಣರಿದ್ದಾರೆ. ಈ ವರದಿಯಿಂದ ನಮಗೆ ತೊಂದರೆ ಆದ್ರೆ, ಉಗ್ರ ಹೋರಾಟ ಮಾಡುವುದಾಗಿ ಅವರು ಹೇಳಿದ್ದಾರೆ. ನಮಗೆ 200 ಎಂದು ಕೋಡ್‌ ನಂಬರ್ ಕೊಟ್ಟಿದ್ದಾರೆ. 42 ಉಪಜಾತಿಗಳನ್ನು ಒಂದೇ ಎಂದು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ವೀಕ್ಷಿಸಿ:Today Horoscope: ಇಂದು ಮಂಗಲ ಕಾರ್ಯಗಳಿಗೆ ಉತ್ತಮ ತಾರಾನುಕೂಲ