ಈಗ ಬದಲಾಗುತ್ತಾ ರಾಜ್ಯ ರಾಜಕೀಯದ ಲೆಕ್ಕಾಚಾರ..? 28 ಕ್ಷೇತ್ರ ಗೆಲ್ಲಲು ಸಿದ್ಧವಾಗಿದೆ ಪದ್ಮದಳ ವ್ಯೂಹ!

ಈಗ ಬದಲಾಗುತ್ತಾ ರಾಜ್ಯ ರಾಜಕೀಯದ ಲೆಕ್ಕಾಚಾರ..? 28 ಕ್ಷೇತ್ರ ಗೆಲ್ಲಲು ಸಿದ್ಧವಾಗಿದೆ ಪದ್ಮದಳ ವ್ಯೂಹ!

Published : Nov 28, 2023, 03:43 PM IST

ಮೋದಿಗೆ ಪಟ್ಟಕಟ್ಟಿಸಲು ಅಖಾಡಕ್ಕೆ ಹೊಸ ಅಣ್ಣ-ತಮ್ಮ..!
ವಿಜಯ ಪತಾಕೆ ಹಾರಿಸಲು ಇಂದ್ರನ ಜೊತೆ ಸೇರಿದ ದಳಪತಿ!
ಗೆಲ್ಲಿಸಿಕೊಡೊ ಹೊಣೆಗಾರಿಕೆ ಬಿಜೆಪಿ ಯುವನಾಯಕರ ಹೆಗಲಿಗೆ!

ಮೋದಿಗೆ ಪಟ್ಟಕಟ್ಟಿಸಲು ಅಖಾಡಕ್ಕೆ ಕಾಲಿಟ್ಟಿದ್ದಾರೆ ಹೊಸ ಅಣ್ಣ-ತಮ್ಮ..ವಿಜಯ ಪತಾಕೆ ಹಾರಿಸಲು ಇಂದ್ರನ ಜೊತೆ ಸೇರಿ ದಳಪತಿ ನಡೆಸಲಿದ್ದಾರೆ ದಂಡಯಾತ್ರೆ. ಲೋಕಸಭಾ(Loksabha) ಸಂಗ್ರಾಮ ಶುರುವಾಗೋಕೆ ಕ್ಷಣಗಣನೆ ಶುರುವಾಗಿದೆ. ದೇಶದಾದ್ಯಂತ ರಾಜಕೀಯ ಪಕ್ಷಗಳು, ಇನ್ನಿಲ್ಲದಂತೆ ಸಮರಾಭ್ಯಾಸ ನಡೆಸ್ತಾ ಇದಾವೆ. ಒಂದೆಡೆ ಮೂರನೇ ಬಾರಿಗೆ ಅಧಿಕಾರ ಗಳಿಸಬೇಕು ಅಂತ ದಂಡಯಾತ್ರೆ ಹೊರಟಿರೋ ಮೋದಿ(Narendra Modi) ಪಡೆ ಇದೆ. ಇನ್ನೊಂದೆಡೆ ಮೋದಿ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ, ವಿಪಕ್ಷಗಳೆಲ್ಲಾ ಪಣತೊಟ್ಟು ನಿಂತಿದ್ದಾವೆ. ಇದೆಲ್ಲದರ ಮಧ್ಯೆ, ಕರ್ನಾಟಕ ರಾಜಕೀಯ ರಣಾಂಗಣ ಮಾತ್ರ ಕ್ಷಣಕ್ಷಣಕ್ಕೂ ರೋಚಕವಾಗ್ತಾ ಇದೆ. ಕರ್ನಾಟಕದಲ್ಲಿ ಭರ್ಜರಿ ದಿಗ್ವಿಜಯ ಸಾಧಿಸಿರೋ ಹಸ್ತಪಾಳಯ ಮುಂದಿನ ಲೋಕಸಭೆಯಲ್ಲೂ ಕಮಾಲ್ ಮಾಡ್ತೀವಿ.ಅತಿಹೆಚ್ಚು ಕ್ಷೇತ್ರಗಳನ್ನ ಗೆಲ್ಲೋ ಮೂಲಕ ಹೊಸ ಚರಿತ್ರೆ ಬರೀತೀವಿ ಅಂತ ಹೇಳ್ತಾ ಇದೆ. ಕಾಂಗ್ರೆಸ್(Congress) ಭರ್ಜರಿಯಾಗಿ ಗೆದ್ದಿದೆ-ನಿಜ. ಆ ಗೆಲುವು ಕೈಪಾಳಯಕ್ಕೆ ಎಲ್ಲೇ ಹೋದ್ರೂ ಜೈಕಾರ ಸಿಗೋ ಹಾಗೆ ಮಾಡಲಿದೆ ಅನ್ನೋ ನಂಬಿಕೆ ಮೂಡಿರೋದೂ-ನಿಜ.. ಅದೇ ಗೆಲುವಿನ ಹುಮ್ಮಸ್ಸಿನಲ್ಲಿ ಲೋಕಸಭೆಯಲ್ಲೂ ಮ್ಯಾಜಿಕ್ ಮಾಡೋಕೆ ಹೊರಟಿದೆ ಅನ್ನೋದೂ ನಿಜ. ಆದ್ರೆ, ಕಾಂಗ್ರೆಸ್ ಗೆ ವಿಧಾನಸಭೆ ಗೆದ್ದಷ್ಟು ಸುಲಭವಿಲ್ಲ, ಲೋಕಸಭಾ ಸಮರ ಗೆಲ್ಲೋದು, ಅದಕ್ಕೆ ಕಾರಣ, ಮೋದಿ ಅನ್ನೋ ಮೋಡಿಗಾರ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, ಈ ಬಾರಿ ಕರ್ನಾಕವನ್ನ ಸೀರಿಯಸ್ಸಾಗೇ ತಗೊಂಡಿದಾರೆ. ದಕ್ಷಿಣದ ಏಕಮಾತ್ರ ಭದ್ರಕೋಟೆಗೆ ಮತ್ತೊಬ್ಬರು ಲಗ್ಗೆ ಇಡೋಕೆ ಬಡಬಾರದು ಅಂತ ಡಿಸೈಡ್ ಆಗಿದಾರೆ. ಹಾಗಾಗಿನೇ, ರಾಜಕೀಯ ಚತುರತೆ ಮೆರೆಯೋಕೆ ನೋಡ್ತಿದ್ದಾರೆ.. ಕರ್ನಾಟಕ ಬಿಜೆಪಿಲಿ ನಡೀತಿರೋ ಒಂದೊಂದು ಬೆಳವಣಿಗೆ ನೋಡಿದ್ರೂ, ಇದರ ಹಿಂದಿರೋ ಅಸಲಿಯತ್ತು ಅರ್ಥವಾಗುತ್ತೆ.

ಇದನ್ನೂ ವೀಕ್ಷಿಸಿ:  ಕುತೂಹಲ ಮೂಡಿಸಿದ ಕದಂಬರ ಕಾಲದ ಕಥೆ..! ಮತ್ತೆ ಸದ್ದು ಮಾಡುತ್ತಿದೆ ಅಬ್ಬರದ ಕಾಂತಾರ..!

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more