ಸೊಗಡು ಶಿವಣ್ಣ Vs ಜ್ಯೋತಿ ಗಣೇಶ್‌: ತುಮಕೂರು ಬಿಜೆಪಿಯಲ್ಲಿ ಬಣ ಬಡಿದಾಟ

Mar 22, 2023, 9:30 PM IST

ತುಮಕೂರು(ಮಾ.22): ತುಮಕೂರಿನ ಬಿಜೆಪಿಯಲ್ಲಿ ಬಣ ಬಡಿದಾಟ ಶುರುವಾಗಿದೆ. ಹೌದು, ಬಿಜೆಪಿ ಟಿಕೆಟ್‌ಗಾಗಿ ಜ್ಯೋತಿ ಗಣೇಶ್‌ ಹಾಗೂ ಸೊಗಡು ಶಿವಣ್ಣ ಬಣ ಬಡಿದಾಟ ಆರಂಭವಾಗಿದೆ. ಈ ಇಬ್ಬರೂ ನಾಯಕರ ಬಡಿದಾಟವನ್ನ ತಣಿಸಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ಲಾನ್‌ವೊಂದನ್ನ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಬಿಜೆಪಿ ಯಾತ್ರೆಯಲ್ಲಿ ಹೆಸರು ಹೇಳದೆ ಕೇವಲ ಈ ಬಾರಿ ಬಿಜೆಪಿ ಶಾಸಕರನ್ನ ಆಯ್ಕೆ ಮಾಡಿ ಕಳಿಸಿ ಅಂತ ಹೇಳಿದ್ದರು. ಹೀಗಾಗಿ ರೊಚ್ಚಿಗೆದ್ದ ಸೊಗಡು ಶಿವಣ್ಣ ಅವರ ಅಭಿಮಾಜನಿಗಳು ಬಿಎಸ್‌ವೈ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಸೊಗಡು ಶಿವಣ್ಣ ಅವರಿಗೆ ಟಿಕೆಟ್‌ ಕೊಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. 

ಐತಿಹಾಸಿಕ ವಿಜಯ ಸಂಕಲ್ಪ ಸಮಾರೋಪ ಸಮಾವೇಶಕ್ಕೆ ಪ್ರಧಾನಿ ಮೋದಿ, ಭರ್ಜರಿ ಸಿದ್ಧತೆ