News Hour: ಬಿಜೆಪಿ ನೊಗ ಹಿಡಿದ ವಿಜಯೇಂದ್ರಗೆ ಲೋಕಸಭೆ ಎಲೆಕ್ಷನ್ ಟಾಸ್ಕ್!

News Hour: ಬಿಜೆಪಿ ನೊಗ ಹಿಡಿದ ವಿಜಯೇಂದ್ರಗೆ ಲೋಕಸಭೆ ಎಲೆಕ್ಷನ್ ಟಾಸ್ಕ್!

Published : Nov 10, 2023, 11:14 PM IST


BY Vijayendra Karnataka BJP Chief ಬಿಜೆಪಿ ಕೊನೆಗೂ ತನ್ನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಇಂದಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ಬೆಂಗಳೂರು (ನ.10): ಬಿಜೆಪಿ ಹೈಕಮಾಂಡ್‌ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿದೆ.  ದೀಪಾವಳಿ ಸಂಭ್ರಮದಲ್ಲಿ ವಿಜಯೇಂದ್ರಗೆ ರಾಷ್ಟ್ರೀಯ ಬಿಜೆಪಿ ಭರ್ಜರಿ ಗಿಫ್ಟ್‌ ನೀಡಿದೆ. ಇಂದಿನಿಂದ ಜಾರಿಗೆ ಬರುವಂತೆ ಈ ಆದೇಶ ನೀಡಲಾಗಿದೆ.

ಇದರ ಬೆನ್ನಲ್ಲಿಯೇ ಅವರಿಗೆ ಮುಂದಿನ ದಾರಿ ಸದ್ಯಕ್ಕೆ ಅವರಿಲಿಗೆ ಸುಲಭವಾಗೇನೂ ಇಲ್ಲ ಎನ್ನುವ ವಿಶ್ಲೇಷಣೆ ಆರಂಭವಾಗಿದೆ. ವಿಜಯೇಂದ್ರಗೆ ಮೊದಲಿಗೆ ಬರುವುದು ಲೋಕಸಭೆ ಎಲೆಕ್ಷನ್ ಟಾಸ್ಕ್ ಈ ಬಾರಿ 25 ಲೋಕಸಭೆ ಸ್ಥಾನಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಅದರೊಂದಿಗೆ ಜೆಡಿಎಸ್ ಜತೆ ಬಿಜೆಪಿ ಮೈತ್ರಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಣೆ ಮಾಡಬೇಕಿದೆ. ರಾಜ್ಯದಲ್ಲಿ ಗೊಂದಲ ರಹಿತವಾಗಿ ಮೈತ್ರಿ ಮುಂದುವರಿಸುವ ಜವಾಬ್ದಾರಿ ಅವರ ಮೇಲಿರಲಿದೆ.

Breaking: ಬಿಎಸ್‌ವೈ ಪುತ್ರನಿಗೆ ದೀಪಾವಳಿ ಗಿಫ್ಟ್‌, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ!

ಇನ್ನು ಈಗಾಗಲೇ ಪಕ್ಷದೊಳಗಿನ ವಿರೋಧಿ ಪಡೆಯ ವಿಶ್ವಾಸ ಗಳಿಸಬೇಕಿದೆ. ಹಿರಿಯರು- ಕಿರಿಯ ಮಧ್ಯೆಯೂ ಸಮನ್ವಯತೆ ಕಾಪಾಡಬೇಕಾದ ತಲೆನೋವು ಎದುರಾಗಲಿದೆ. ಸೋಲು ಕಂಗಾಲಾಗಿರುವ ಕ್ಷೇತ್ರಗಳಲ್ಲಿ ಉತ್ಸಾಹ ತುಂಬಬೇಕು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿ. ವಿಧಾನಸಭೆಯಲ್ಲಿ ಸೋಲುಂಡ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ವೇಗ ನೀಡುವಂಥ ಕೆಲಸಗಳು ವಿಜಯೇಂದ್ರ ಅವರಿಂದ ಆಗಬೇಕಿದೆ.

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more