ಹಳೆ ದೋಸ್ತಿ..ಹೊಸ ಸೂತ್ರ..ಯಾರಿಗೆ ಏನು ಲಾಭ..? ದಳದೊಳಗೆ ಸೃಷ್ಟಿಯಾಗಿದೆಯಾ ಕೋಲಾಹಲ!?

ಹಳೆ ದೋಸ್ತಿ..ಹೊಸ ಸೂತ್ರ..ಯಾರಿಗೆ ಏನು ಲಾಭ..? ದಳದೊಳಗೆ ಸೃಷ್ಟಿಯಾಗಿದೆಯಾ ಕೋಲಾಹಲ!?

Published : Sep 25, 2023, 02:35 PM IST

ಲೋಕ ಸಂಗ್ರಾಮಕ್ಕೆ ಸಿದ್ಧವಾಗಿದೆ  ಮೈತ್ರಿ  ವ್ಯೂಹ!
ಕಮಲ ಮುಡಿದಾಯ್ತು ತೆನೆ ಹೊತ್ತ ಮಹಿಳೆ..!
ಯಾರಿಗೆಷ್ಟು ಸೀಟು..? ಲೆಕ್ಕಾಚಾರ ಸ್ಟಾರ್ಟ್‌!

ಕಾಂಗ್ರೆಸ್ ರಾಜ್ಯ ನಾಯಕರ ಕಾನ್ಫಿಡೆನ್ಸ್ ಹೇಗಿದೆ ಅಂತ..? ಕರ್ನಾಟಕ ವಿಧಾನಸಭಾ ಚುನಾವಣೇಲಿ ಅಮೋಘ ಜಯಭೇರಿ ಬಾರಿಸಿರೋ ಕಾಂಗ್ರೆಸ್, ಮುಂದಿನ ಲೋಕಸಭೆಯಲ್ಲಿ ಅದ್ಭುತ ಸೃಷ್ಟಿಸೋ ಕನಸು ಕಾಣ್ತಾ ಇದೆ. ಶತಾಯಗತಾಯ 20 ಕ್ಷೇತ್ರಗಳನ್ನ ಗೆದ್ದುಬೀಗೋಕೆ ಸಜ್ಜಾಗಿದೆ. ಆದ್ರೆ, ಕಾಂಗ್ರೆಸ್‌ನ(Congress) ಈ ಕನಸು ನುಚ್ಚುನೂರು ಮಾಡೋಕೆ, ರಾಷ್ಟ್ರ ರಾಜಧಾನಿಯಲ್ಲೊಂದು ಮೈತ್ರಿ ಯಜ್ಞನವೇ ನಡೆದಿದೆ. ಲೋಕಸಭೆಯಲ್ಲಿ 20ರ ಟಾರ್ಗೆಟ್ ಫಿಕ್ಸ್ ಮಾಡಿ ಮುನ್ನುಗ್ತಾ ಇರೋ ಕಾಂಗ್ರೆಸ್‌ನ ಅಶ್ವಮೇಧದ ಕುದುರೆಯನ್ನ ಕಟ್ಟಿ  ಹಾಕೋಕೆ, ಬಿಜೆಪಿ(BJP) ಜೆಡಿಎಸ್(JDS) ಮೈತ್ರಿ ಮಾಡ್ಕೊಂಡಿದ್ದಾವೆ. ಇದು ಶತ್ರುವಿನ ಶತ್ರು ಮಿತ್ರ ಅನ್ನೋ ಸೂತ್ರದಡಿ ಹೆಣೆಯಲಾಗಿರೋ ರೋಚಕ ಮೈತ್ರಿ ರಣವ್ಯೂಹ. ಈ ಹಿಂದೆ, ಅಂದ್ರೆ 2006ರಲ್ಲಿ ಇದೇ ದೋಸ್ತಿ ಕಾಂಗ್ರೆಸ್‌ಗೆ ದೊಡ್ಡ ಕಂಟಕವಾಗಿತ್ತು. ಆ ಬಳಿಕ ಈಗ  ಮತ್ತೆ ಬಿಜೆಪಿ ಜೊತೆ ದೋಸ್ತಿ ಮಾಡ್ಕೊಂಡಿರೋ ದಳಪತಿಗಳು ಲೋಕಸಭಾ ಚುನಾವಣೆಯನ್ನ(Loksabha Election) ಮೈತ್ರಿಕೂಟದೊಂದಿಗೆ ಎದುರಿಸಲು ರೆಡಿಯಾಗಿದ್ದಾರೆ. ದಳಪತಿಗಳು ಅಧಿಕೃತವಾಗಿ ಎನ್.ಡಿ.ಎ ಮೈತ್ರಿಕೂಟ ಸೇರಿದ್ದಾರೆ. ಆ ಕಡೆ ಕಾಂಗ್ರೆಸ್ ಹಾಗೂ ಉಳಿದ ಪಕ್ಷಗಳು ಮೈತ್ರಿ ಮಾಡ್ಕೊಂಡು. ಕಮಲಪಾಳಯದ ಕೇಸರಿ ಕೋಟೆಗೆ ಮುತ್ತಿಗೆ ಹಾಕೋಕೆ ನೋಡ್ತಿದ್ದಾವೆ. ಆದ್ರೆ ರಾಜ್ಯದಲ್ಲಿ  ಹಸ್ತ ಪಾಳಯದ ಅಶ್ವಮೇಧಕ್ಕೆ ಸಡ್ಡು ಹೊಡೆಯೋಕೆ, ಕಮಲಪಡೆ ಹಾಗೂ ದಳಪತಿಗಳ ಸೇನೆ ನಡುವೆ  ಮಹಾಮೈತ್ರಿ  ಉಂಟಾಹಿದೆ.. ಎನ್.ಡಿ.ಎ ಮೈತ್ರಿಕೂಟದ ಜೊತೆ ಸೇರಿ,  ಜೆಡಿಎಸ್ ಹೊಸ ಆಟ ಶುರು ಮಾಡ್ಕೊಂಡಿದೆ.

ಇದನ್ನೂ ವೀಕ್ಷಿಸಿ:  ಆಪರೇಷನ್ ಲಾಡೆನ್ ಬಗ್ಗೆ ಪ್ರಸ್ತಾಪ ಬಂದಿದ್ದೇಕೆ..? ಅಮೆರಿಕಾದಂತೆ ವರ್ತಿಸಿತಾ ಭಾರತ..?

 

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more