ಕಮಲಕ್ಕೆ ದಳ ಬೇಕೋ..? ದಳಕ್ಕೆ ಕೇಸರಿಯೋ..? ಬಿಜೆಪಿ ಮೇಲೆ ಮೃದುಧೋರಣೆ ತೋರಿದ್ದೇಕೆ ದೊಡ್ಡ ಗೌಡರು..?

ಕಮಲಕ್ಕೆ ದಳ ಬೇಕೋ..? ದಳಕ್ಕೆ ಕೇಸರಿಯೋ..? ಬಿಜೆಪಿ ಮೇಲೆ ಮೃದುಧೋರಣೆ ತೋರಿದ್ದೇಕೆ ದೊಡ್ಡ ಗೌಡರು..?

Published : Sep 09, 2023, 02:06 PM IST

ಬಿಜೆಪಿ - ಜೆಡಿಎಸ್ ಮೈತ್ರಿಗೆ ಮುಹೂರ್ತ ಫಿಕ್ಸ್
ಸೆ.13ರಂದು ಮೈತ್ರಿ ಬಗ್ಗೆ ಅಧಿಕೃತ ಘೋಷಣೆ?
ದೆಹಲಿಯಲ್ಲಿ ಮಹಾಮೈತ್ರಿಗೆ ಸಿದ್ಧವಾಗಿದೆ ವೇದಿಕೆ

ಮುಂದಿನ ಲೋಕಸಭಾ ಚುನಾವಣೆಗೆ (Loksabha) ದಿನಗಳು ಹತ್ತಿರವಾಗ್ತಾ ಇದೆ. ಕಳೆದ ಬಾರಿ ಕರ್ನಾಟಕದಲ್ಲಿ ಕಮಾಲ್ ಮಾಡಿದ್ದ ಭಾರತೀಯ ಜನತಾ ಪಕ್ಷ ಈ ಬಾರಿಯೂ ಕೂಡ ದೊಡ್ಡದೊಂದು ಗುರಿಯನ್ನ ಹಾಕಿಕೊಂಡು ಮೋದಿಯನ್ನ ಗೆಲ್ಲಿಸೋಕೆ ಪಣ ತೊಟ್ಟಿದೆ. ಸ್ಟ್ರಾಟಜಿಯ ಭಾಗವಾಗಿ ಹೊಸದೊಂದು ಸುದ್ದಿ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅದೇ ಬಿಜೆಪಿ(BJP) ಹಾಗೂ ಜೆಡಿಎಸ್(JDS) ಮಹಾಮೈತ್ರಿ ಅನ್ನೋದು. ಮೈತ್ರಿಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ತುಂಬಾ ಹಿಂದೆಯೇ ಸುದ್ದಿ ಬ್ರೇಕ್ ಮಾಡಿತ್ತು. ಈಗ ಇರೋದು ಅದರ ಅಪ್ಡೇಟೆಡ್ ವರ್ಷನ್. ವಿಧಾನಸಭೆಯ ಮಹಾ ಗೆಲುವಿನೊಂದಿಗೆ ಕಾಂಗ್ರೆಸ್ (Congress) ಲೋಕಸಭೆಯನ್ನೂ ಕಬ್ಜ ಮಾಡಿಕೊಳ್ಳೋ ಆಲೋಚನೆಯಲ್ಲಿದೆ. ಆದ್ರೆ ಶಾಕಿಂಗ್ ಅನ್ನೋ ಹಾಗೇ ಕಳೆದ ಬಾರಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಲೋಕಸಭೆಯನ್ನ ಎದುರಿಸಿದ್ದ ಜೆಡಿಎಸ್ ಈ ಬಾರಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳೋದು ಬಹುತೇಕ ಪಕ್ಕಾ. ಈ ನಿಟ್ಟಿನಲ್ಲಿ ಹೈಕಮಾಂಡ್ ಲೆವಲ್ ಮೀಟಿಂಗ್ ಆಗಿರೋದು ವಿಶೇಷ.ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡೆಸಿವೆ. ಸ್ಥಾನ ಹಾಗೂ ಕ್ಷೇತ್ರ ಹೊಂದಾಣಿಕೆ ಅಂತಿಮ ಹಂತಕ್ಕೆ ಬಂದಿದ್ದು ಒಂದೆರಡು ಕ್ಷೇತ್ರದ ಬಗ್ಗೆ ಗೊಂದಲ ಬಗೆಹರಿಯಬೇಕಿದೆ. ಒಂದೆರಡು ದಿನದಲ್ಲಿ ಆ ಗೊಂದಲಗಳೂ ತಿಳಿಯಾಗಿ ಅಧಿಕೃತ ಮೈತ್ರಿ ಘೋಷಣೆಯಾಗಲಿದೆ.

ಇದನ್ನೂ ವೀಕ್ಷಿಸಿ:  ದೇಶ ಕಟ್ಟಲು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ: ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more