Narendra Modi: ಮೋದಿ ‘ಗುರು’ ಮಂತ್ರ ಲೆಕ್ಕಾಚಾರ: ಅಂತಿಮ ಹಂತದಲ್ಲಿ ಯಾರ ಕೈ ಹಿಡಿಯಲಿದ್ದಾರೆ ಬಿಲ್ಲವರು ?

Apr 16, 2024, 11:17 AM IST

ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ ದಕ್ಷಿಣ ಕನ್ನಡ(Dakshina Kannada) ಅಖಾಡದಲ್ಲಿ ಬಿಲ್ಲವ ಮತಗಳೇ(Billava Vote) ನಿರ್ಣಾಯಕವಾಗಿದ್ದು, ಬಿಲ್ಲವ ವೋಟ್ ಛಿದ್ರವಾಗದಂತೆ ಮತಗಳನ್ನು ಭದ್ರಪಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ(Narendra Modi) ರೋಡ್ ಶೋನಲ್ಲಿ ನಾರಾಯಣ ಗುರುಗಳಿಗೆ ಗೌರವ ಸಹ ನೀಡಲಾಗಿದೆ. ಬಿಲ್ಲವ ಸಮಾಜದ ಪ್ರಭಾವಿ ನಾಯಕ ಪದ್ಮರಾಜ್ ಕಾಂಗ್ರೆಸ್(Congress) ಅಭ್ಯರ್ಥಿಯಾಗಿದ್ದು, ಇದರಿಂದಾಗಿ 4.5 ಲಕ್ಷ ಬಿಲ್ಲವ ವೋಟ್ ಛಿದ್ರವಾಗೋ ಭೀತಿಯಲ್ಲಿ ಬಿಜೆಪಿ ಇದೆ. ಇದರಿಂದಾಗಿ ನರೇಂದ್ರ ಮೋದಿ ಭೇಟಿ ಬಳಿಕ ಜಾತಿ ಲೆಕ್ಕಾಚಾರ ಬದಲಾಗುತ್ತದೆಯೇ ಎನ್ನುವ ಚರ್ಚೆ ನಡೆಯುತ್ತಿದೆ. ಇನ್ನು 2014 ಮತ್ತು 2019ರ ಚುನಾವಣೆ ಗಮನಿಸಿದ್ರೆ ಕಾಂಗ್ರೆಸ್ ಸೋಲಿನ ಅಂತರದಲ್ಲಿ ವ್ಯತ್ಯಾಸ ಆಗುತ್ತಿದೆ. ಕಳೆದ ಬಾರಿ ಬಂಟ ಅಭ್ಯರ್ಥಿ ಕಟೀಲ್ ವಿರುದ್ದ ಪೂಜಾರಿ ಸೋಲುಂಡಿದ್ದರು. ಬಂಟ ಅಭ್ಯರ್ಥಿಗಳೇ ಸ್ಪರ್ಧೆ ಮಾಡುತ್ತಿರುವುದರಿಂದ ಬಿಲ್ಲವ ವೋಟ್ ಬ್ಯಾಂಕ್ ನಲ್ಲಿ ಒಡಕು ಹೆಚ್ಚಾಗುತ್ತಲೇ ಬಂದಿದೆ.

ಇದನ್ನೂ ವೀಕ್ಷಿಸಿ:  KS Eshwarappa: ಈಶ್ವರಪ್ಪಗೆ ಖಡಕ್ ಸಂದೇಶ ಕೊಟ್ಟ ಬಿಜೆಪಿ ಹೈಕಮಾಂಡ್! ಮೋದಿ ಹೇಳಿದ್ರೂ ಬಗ್ಗಲ್ಲ ಅಂದಿದ್ಯಾಕೆ ಮಾಜಿ ಸಚಿವ ?