ಬಂಡೆಗೆ ಇದೆಂಥಾ ಬ್ಯಾಡ್‌ಲಕ್.. ರಾಹುಲ್‌ ಜೊತೆ ಮಿಂಚಿದ ಟಗರು!

ಬಂಡೆಗೆ ಇದೆಂಥಾ ಬ್ಯಾಡ್‌ಲಕ್.. ರಾಹುಲ್‌ ಜೊತೆ ಮಿಂಚಿದ ಟಗರು!

Published : Oct 08, 2022, 05:10 PM IST

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಡಿಕೆ ಶಿವಕುಮಾರ್‌ ಹಾಗೂ ಸಿದ್ಧರಾಮಯ್ಯ, ಭಾರತ್‌ ಜೋಡೋ ಯಾತ್ರೆಯ ವೇಳೆ ತಮ್ಮ ಬಲ ಪ್ರದರ್ಶನ ಮಾಡಿಕೊಳ್ಳುವ ವೇದಿಕೆಯನ್ನಾಗಿ ಮಾಡುವ ನಿರೀಕ್ಷೆ ಮಾಡಿಕೊಂಡಿದ್ದರು. ಆದರೆ, ಡಿಕೆಶಿ ದುರಾದೃಷ್ಟಕ್ಕೆ ಇಡಿ ಸಮನ್ಸ್‌ ನೀಡಿದ್ದರೆ, ರಾಹುಲ್‌ ಗಾಂಧಿ ಜೊತೆ ಟಗರು ಸಿದ್ಧರಾಮಯ್ಯ ರನ್ನಿಂಗ್‌ ಮಾಡಿ ಸಿಎಂ ಸ್ಥಾನಕ್ಕೆ 'ರೈಟ್‌ ಮ್ಯಾನ್‌' ಎನಿಸಿಕೊಂಡಿದ್ದಾರೆ.

ಬೆಂಗಳೂರು (ಅ.8): ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಸಿದ್ದು ಜೋಡಿ ಓಟ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್'ಗೆ ಇ.ಡಿ ಸಂಕಟ..! ಇಲ್ಲಿ ಸಿದ್ದು-ರಾಹುಲ್ ಓಟದ ಆಟ, ಕನಕಪುರ ಬಂಡೆಗೆ ಇ.ಡಿ ಕಚೇರಿಯಲ್ಲಿ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿತ್ಉತ. ಪ್ಲಾನ್ ಆಫ್ ಆ್ಯಕ್ಷನ್ ಡಿಕೆಯದ್ದು, ಮಿರ ಮಿರ ಮಿಂಚಿಂದ್ದು ಮಾತ್ರ ಟಗರು ಸಿದ್ದು!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಡ್ಯದಲ್ಲಿ ಬೀಸಲಿದೆ ಅಂತ ಹೇಳಿದ್ದು ಅದ್ಯಾವ ಗಾಳಿಯ ಬಗ್ಗೆ..? ಆ ಗಾಳಿಗೂ ರಾಹುಲ್ ಗಾಂಧಿ ಜೊತೆ ಚುಂಚನಗಿರಿ ಮಠಕ್ಕೆ ಹೋಗೋದಕ್ಕೂ ಏನ್ ಸಂಬಂಧ..? ಡಿಕೆ ಶಿವಕುಮಾರ್ ಹೆಣೆದಿದ್ದ ತಂತ್ರಗಾರಿಕೆಗೆ ಕೊನೆಗೂ ಯಶಸ್ಸು ಸಿಕ್ಕಿತಾ ಅನ್ನೋ ಅನುಮಾನ ಕಾಡಿದೆ.

ರಾಜ​ಕೀಯ ಜೀವ​ನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆ​ಶಿ

ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅನ್ನೋ ಮಾತಿದೆ. ಕಾಂಗ್ರೆಸ್ ಕಟ್ಟಪ್ಪ ಡಿಕೆ ಶಿವಕುಮಾರ್ ವಿಚಾರದಲ್ಲಿ ಈ ಮಾತು ಸಾಕಷ್ಟು ಬಾರಿ ನಿಜವೂ ಆಗಿದೆ. ಆಗ ಆಗಿರೋದೂ ಅದೇ... ಡಿಕೆಶಿಗೆ ಇ.ಡಿ ಶಾಕ್ ಕೊಟ್ಟಿದ್ರೆ, ಇತ್ತ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್-ಸಿದ್ದು ಜೋಡಿಯ ಜೋಡಿ ಓಟ ಭರ್ಜರಿ ಸದ್ದು ಮಾಡ್ತಿದೆ. 

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more