ನಾನು ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ, ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ: ಬಿ.ಸಿ.ಪಾಟೀಲ್‌

ನಾನು ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ, ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ: ಬಿ.ಸಿ.ಪಾಟೀಲ್‌

Published : Sep 03, 2023, 12:39 PM IST

ಸೋಮಶೇಖರ್‌ ಮತ್ತು ಶಿವರಾಮ್‌ ಹೆಬ್ಬಾರ್ ತಮ್ಮ ಕ್ಷೇತ್ರದ ಅಭಿವೃದ್ದಿ  ಕೆಲಸಕ್ಕಾಗಿ ಕಾಂಗ್ರೆಸ್ ಭೇಟಿ ಮಾಡಿದ್ದಾರಷ್ಟೆ. ಬಿಜೆಪಿಯಲ್ಲಿ ಬೇಸರವಿಲ್ಲ, ಕಾಂಗ್ರೆಸ್ ನವ್ರು ಯಾರೂ ಕೂಡ ನನ್ನನ್ನು ಮಾತಾಡಿಸಿಲ್ಲ ಎಂದು ಬಿ.ಸಿ. ಪಾಟೀಲ್‌ ಹೇಳಿದ್ದಾರೆ.
 

ರಾಜ್ಯ ರಾಜಕೀಯದಲ್ಲಿ ಆಪರೇಷನ್‌ ಹಸ್ತ ವಿಚಾರ ಭಾರೀ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‌ ಬರ್ತ್‌ ಡೇ ಪಾರ್ಟಿಯಲ್ಲಿ ಡಿ.ಕೆ.ಶಿವಕಮಾರ್‌, ಬಿ.ಸಿ. ಪಾಟೀಲ್‌ ಮತ್ತು ರಾಜೂಗೌಡ ಅವರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಬಿ.ಸಿ. ಪಾಟೀಲ್‌(BC Patil) ಮಾತನಾಡಿ, ನಾನು ಮತ್ತೆ ಕಾಂಗ್ರೆಸ್‌ಗೆ(Congress) ಹೋಗಲ್ಲ ಎಂದಿದ್ದಾರೆ. ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ. ಕಾಂಗ್ರೆಸ್‌ಗೆ ಹೋಗ್ತೇನೆ ಅನ್ನೋದು ಸುಳ್ಳು. ಸುದೀಪ್(Sudeep) ಹುಟ್ಟುಹಬ್ಬ ಹಿನ್ನೆಲೆ ಡಿಕೆಶಿ ಬಂದಿದ್ರು. ನಾನು, ರಾಜೂಗೌಡ ಹೋಗಿದ್ವಿ. ನಾನು ಡಿಕೆಶಿ ಮೊದಲಿನಿಂದಲೂ ಸ್ನೇಹಿತರು, ಚುನಾವಣೆ ಬಳಿಕ ಡಿಕೆಶಿಯನ್ನು ನೋಡಿರಲಿಲ್ಲ. ಸೌಜನ್ಯಕ್ಕೆ ಮಾತನಾಡಿದ್ದೇವೆ ಅಷ್ಟೇ ಎಂದು ಹೇಳಿದರು. ಇದು ಆಕಸ್ಮಿಕ ಭೇಟಿ, ಬೇರೆ ಅರ್ಥ ಕಲ್ಪಿಸೋದು ಬೇಡ. ಡಿಸಿಎಂ ಸಿಕ್ಕಾಗ ಮುಖ ತಿರುಗಿಸಿ ಹೋಗೋದು ಸರಿಯಲ್ಲ. ಕನಸಲ್ಲೂ ಬಿಜೆಪಿ(BJP) ಬಿಡುವ ಬಗ್ಗೆ ಯೋಚಿಸಿಲ್ಲ. ಹಾವೇರಿಯಲ್ಲಿ ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇವೆ. ಅವ್ರು ಯಾವ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅನ್ನೋ ಅನುಮಾನ ಬರ್ತಿದೆ. ನಮ್ಮ ಬೆಂಬಲಿಗರು ಯಾರೂ ಕೂಡ ಕಾಂಗ್ರೆಸ್‌ಗೆ ಹೋಗಿಲ್ಲ, ಊಹಾಪೋಹವಷ್ಟೆ ಎಂದು ಹೇಳಿದರು.

ಇದನ್ನೂ ವೀಕ್ಷಿಸಿ:  ‘ಚಂದು’ ಸಿನಿಮಾದಲ್ಲಿ ‘ಕಿಚ್ಚ’ನ ‘ತುಂಟಾಟ’..! ಕರುನಾಡಿನ ಪಾಲಿಗೆ ‘ಪಾರ್ಥ’ನೆ ‘ಸ್ವಾತಿಮುತ್ತು’..!

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more