ಬೈ ಎಲೆಕ್ಷನ್ ಅಖಾಡದಲ್ಲಿ 'ಜನನಾಯಕರ' ಬಾಯಲ್ಲಿ ಹಳಿ ತಪ್ಪಿದ ಮಾತುಗಳು!

Oct 21, 2021, 3:25 PM IST

ಬೆಂಗಳೂರು(ಅ.21) ಬೈ ಎಲೆಕ್ಷನ್ ಅಖಾಡದಲ್ಲಿ ಡೊಂಕು ಬಾಲದ ನಾಯಕರ ಲಗಾಮಿಲ್ಲದ ಮಾತುಗಳು. ಸಭ್ಯತೆಯ ಎಲ್ಲೆ ಮೀರಿ ನಾಲಗೆ ಹರಿಬಿಟ್ಟ ರಾಜಕಾರಣಿಗಳು. ಎಲುಬಿಲ್ಲದ ನಾಲಗೆಯಿಂದ ರಾಜ್ಯ ರಾಜಕಾರಣಕ್ಕೆ ಇದೆಂತಹಾ ಅಪಚಾರ?

ಹೌದು ಚುನಾವಣೆಯಲ್ಲಿ ಗೆಲ್ಲಬೇಕೆಂಬ ಭರಾಟೆಯಲ್ಲಿ ಜನನಾಯಕರ ಬಾಯಲ್ಲಿ ಹಳಿ ತಪ್ಪಿದ ಮಾತುಗಳು ಕೇಳಲಾರಂಭಿಸಿವೆ. ಪ್ರತಿಪಕ್ಷ ನಾಯಕರನ್ನು ಹಣಿಯುವ ಭರದಲ್ಲಿ ಈ ನಾಯಕರು ವೈಯುಕ್ತಿಕ ಮಾನಹರಣಕ್ಕೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ವಿವರ ಇಲ್ಲಿದೆ ನೋಡಿ.