'ಲೋಕ' ಸಮರಕ್ಕೆ ಸೋತವರ ಸರ್ಕಸ್: ಟಿಕೆಟ್‌ ಗಿಟ್ಟಿಸಲು ಬಿಎಸ್‌ವೈ ಮೊರೆ

Aug 28, 2023, 11:54 AM IST

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತವರು ಲೋಕಸಭಾ(Loksabha) ಟಿಕೆಟ್‌ಗಾಗಿ (Ticket) ಕಸರತ್ತು  ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಟಿಕೆಟ್‌ ಗಿಟ್ಟಿಸಲು ಯಡಿಯೂರಪ್ಪ(Yediyurappa) ಅವರ ಮೊರೆ ಹೋಗುತ್ತಿದ್ದಾರೆ. ಚುನಾವಣೆ ಸೋತಿರುವ 9 ಆಕಾಂಕ್ಷಿಗಳು ಯಡಿಯೂರಪ್ಪ ಮನೆಗೆ ಹೋಗಿದ್ದು, ನೀವೇ ನಮಗೆ ಟಿಕೆಟ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಯಡಿಯೂರಪ್ಪ ಹೇಳಿದರೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆ ಅವರದಾಗಿದೆ. ಹೀಗಾಗಿ ಯಡಿಯೂರಪ್ಪ ಬೆನ್ನಿಗೆ  ಮಾಜಿ ಶಾಸಕರು ಬಿದ್ದಿದ್ದಾರೆ. ವಿಧಾನಸಭೆ ಚುನಾವಣೆ ಸೋತ ಅಭ್ಯರ್ಥಿಗಳು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತರಾ ಶಂಕರ ಪಾಟೀಲ್ ಮುನೇನಕೊಪ್ಪ ?