ಸಿದ್ದರಾಮಯ್ಯ ಪರ ತಾರೆಯರ ಹಿಂಡು: ಶಿವರಾಜ್‌ ಕುಮಾರ್ ನೋಡಲು ಅಭಿಮಾನಿಗಳ ದಂಡು

ಸಿದ್ದರಾಮಯ್ಯ ಪರ ತಾರೆಯರ ಹಿಂಡು: ಶಿವರಾಜ್‌ ಕುಮಾರ್ ನೋಡಲು ಅಭಿಮಾನಿಗಳ ದಂಡು

Published : May 04, 2023, 10:43 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಲು ವರುಣ ಕ್ಷೇತ್ರದಲ್ಲಿಂದು ತಾರೆಯರ ಹಿಂಡೇ ಆಗಮಿಸಿದೆ.

ಮೈಸೂರು  (ಮೇ.04):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಲು ವರುಣ ಕ್ಷೇತ್ರದಲ್ಲಿಂದು ತಾರೆಯರ ಹಿಂಡೇ ಆಗಮಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯ ಎರಡನೇ ಸುತ್ತಿನ ಮತ ಭೇಟೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮತಯಾಚನೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಸಿದ್ದರಾಮಯ್ಯಗೆ ಸ್ಯಾಂಡಲ್‌ವುಡ್ ನಟ ನಟಿಯರ ಸಾಥ್ ಸಿಕ್ಕಿದೆ. ಡಾ. ಶಿವರಾಜ್ ಕುಮಾರ್, ರಮ್ಯಾ, ದುನಿಯಾ ವಿಜಯ್ ಸೇರಿದಂತೆ ಸ್ಟಾರ್ ಕ್ಯಾಂಪೇನ್ ಶುರುವಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ, ಮಧು ಬಂಗಾರಪ್ಪ, ಜಮೀರ್ ಅಹ್ಮದ್ ಖಾನ್, ಗೀತಾ ಶಿವಕುಮಾರ್ ಕೂಡ ಭಾಗಿಯಾಗಿದ್ದಾರೆ. ಇಂದು ಬೆಳಗ್ಗೆ ಬೆಳಗ್ಗೆ ರಾಂಪುರ, ಗೊದ್ದನಪುರ, ಮರಳೂರು, ತಾಂಡವಪುರದಲ್ಲಿ ಮತಯಾಚನೆ ಮಾಡಿದರು. ಮಧ್ಯಾಹ್ನ ಕೆಂಪಿಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆಯಲ್ಲಿ ಹಾಗೂ ಸಂಜೆ ಸುತ್ತೂರು, ಬಿಳಿಗೆರೆ, ನಗರ್ಲೆ, ಮಲ್ಲೂಪುರದಲ್ಲಿ ಪ್ರಚಾರ ಮಾಡಿದರು.

ಪ್ರಚಾರದ ವೇಳೆ ನಾನೆಂದು ನಿಮ್ಮವನು, ನಿಮಗಾಗಿ ಬಂದವನು ಎಂದು ಸಿಂಹದ ಮರಿ ಹಾಡಿನ ಮೂಲಕ  ಶಿವಣ್ಣ ಮತಯಾಚನೆ ಮಾಡಿದರು. ತಾಂಡವಪುರ ಗ್ರಾಮದಲ್ಲಿ ಹಾಡು ಹಾಡಿದ ಶಿವಣ್ಣ, ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಹೇಳುವುದು ಬೇಡ ಎಲ್ಲ ನಿಮಗೇ ಗೊತ್ತಿದೆ. ಅಪ್ಪಾಜಿ ಯಾವಾಗಲೂ ನಮ್ಮ ಕಾಡಿನವರು ಅನ್ನುತ್ತಿದ್ದರು. ಅಪ್ಪಾಜಿ, ನಮ್ಮ ಜತೆ ಸಿದ್ದರಾಮಯ್ಯ ಅವರಿಗೆ ತುಂಬಾ ಒಡನಾಟ ಇದೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಎಂದು ಮತಯಾಚನೆ ಮಾಡಿದರು. ಇನ್ನು ಶಿವರಾಜ್‌ ಕುಮಾರ್‌ ಅವರನ್ನು ನೋಡಲು ಅಭಿಮಾನಿಗಳ ದಂಡೇ ಸೇರಿತ್ತು.

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more