ಹಳ್ಳಿಯಿಂದ ದಿಲ್ಲಿಗೆ; ಕಂಬಳ ವೀರನಿಗೆ ಟಿಕೆಟ್ ಬುಕ್ ಮಾಡಿದ ಕ್ರೀಡಾ ಪ್ರಾಧಿಕಾರ!

Feb 16, 2020, 5:47 PM IST

ನವದೆಹಲಿ(ಫೆ.15): ದಕ್ಷಿಣ ಕನ್ನಡದ ಪ್ರಖ್ಯಾತ ಕಂಬಳ ಕ್ರೀಡೆಯಲ್ಲಿ ಮಿಂಚಿನ ಓಟದ ಮೂಲಕ, ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ದಾಖಲೆಯನ್ನೇ ಮುರಿದ ಶ್ರೀನಿವಾಸ್ ಗೌಡ ಇದೀಗ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಶ್ರೀನಿವಾಸ್ ಗೌಡ ಒಲಿಂಪಿಕ್ಸ್ ಆಡಲು ಅರ್ಹ ಅನ್ನೋ ಮಾತು ಕೇಳಿ ಬಂದ ಬೆನ್ನಲ್ಲೇ, ಭಾರತೀಯ ಕ್ರೀಡಾ ಪ್ರಾಧಿಕಾರ ಕಂಬಳ ವೀರನಿಗೆ ಟಿಕೆಟ್ ಬುಕ್ ಮಾಡಿದೆ.