Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

Suvarna News   | Asianet News
Published : Nov 21, 2021, 01:39 PM IST

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.

ಬೆಂಗಳೂರು: ಕೊರೋನಾ (Coronavirus) ಕಂಟಕ ಕಡಿಮೆಯಾಗುತ್ತಿದ್ದಂತೆಯೇ ಕ್ರೀಡಾ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಐಪಿಎಲ್‌(IPL), ಟಿ20 ವಿಶ್ವಕಪ್ (T20 WorldCup) ಬಳಿಕ ಕ್ರೀಡಾಲೋಕದಲ್ಲಿ ಮಿಂಚಿನ ಸಂಚಾರ ಮೂಡಿಸಲು ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ (ಐಎನ್‌ಬಿಎಲ್) (Indian National Basketball League) ಆರಂಭವಾಗಲಿದೆ. ಈ ಮೂಲಕ ಕರ್ನಾಟಕ ಬಾಸ್ಕೆಟ್‌ಬಾಲ್ ಹಬ್ ಆಗುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. 

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ (Sri Kanteerava Stadium) ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaj Bommai), ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ (Basketball) ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.

ಇನ್ನು ನಟ ಯಶ್‌ (Yash) ಮಾತನಾಡಿ, ನಾವು ಆರೋಗ್ಯವಾಗಿರಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಐಎನ್‌ಬಿಎಲ್‌ ಟೂರ್ನಿಯ ಮೂಲಕ ದೇಶದಲ್ಲಿ ಬಾಸ್ಕೆಟ್‌ಬಾಲ್ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು ಎಂದು ಟೂರ್ನಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಾಸ್ಕೆಟ್‌ಬಾಲ್ ಫೆಡರೇಷನ್ ಆಫ್‌ ಇಂಡಿಯಾದ ಅಧ್ಯಕ್ಷ ಕೆ. ಗೋವಿಂದರಾಜು, ರಾಜ್ಯಪಾಲ ತಾವರ್‌ಚಂದ್ ಗೆಹಲೋತ್, ಕ್ರೀಡಾಸಚಿವ ನಾರಾಯಣ ಗೌಡ ಉಪಸ್ತಿತರಿದ್ದರು.
 

02:50ಗಾಯದ ನಡುವೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಮೊದಲ ಪ್ರತಿಕ್ರಿಯೆ!
18:46‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?
11:33ಮುವಾಯ್ ಥಾಯ್​ ಫೈಟ್‌ನಲ್ಲಿ ಅರುಣ್ ಸಾಗರ್ ಪುತ್ರನ ಅಸಾಮಾನ್ಯ ಸಾಧನೆ..! ಥಾಯ್ಲೆಂಡ್‌ನಲ್ಲಿ ಧೂಳೆಬ್ಬಿಸ್ತಿರೋ ಭಾರತದ ಯಂಗ್​ ಫೈಟರ್​
07:34ನಾಗರೀಕತೆಯ ಪುನರುತ್ಥಾನ, ರಾಮ ಮಂದಿರ ಲೋಕಾರ್ಪಣೆಗೆ ಕೋಚ್ ಪುಲ್ಲೇಲ ಗೋಪಿಚಂದ್ ಸಂತಸ!
19:40ಚಾಂಪಿಯನ್ ಸಾಕ್ಷಿ ಮಲಿಕ್ ಕುಸ್ತಿಗೇ ಗುಡ್‌ಬೈ, ಕಣ್ಣೀರಿನ ಹಿಂದಿದೆಯಾ ರಾಜಕಾರಣ?
25:44Podcast: ಏಷ್ಯಾಡ್‌ನಲ್ಲಿ ಪದಕ ಬೇಟೆಯ ರೋಚಕ ಕಥೆ, ಏಷ್ಯಾನೆಟ್‌ ಜೊತೆ
25:49Exclusive: ಪತ್ನಿ ಜೀವನದಲ್ಲಿ ಬಂದ ಬಳಿಕವೇ ಅದೃಷ್ಟ ಬದಲಾಗಿದೆ ಎಂದ ಪದಕ ವಿಜೇತ ಪ್ರಣಯ್‌!
10:15ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?
04:26ತವರಿನಲ್ಲಿ ಕೊನೆಯ ಟೆನಿಸ್ ಪಂದ್ಯವಾಡಿದ ಸಾನಿಯಾ ಮಿರ್ಜಾ, ಭಾವುಕ ಸಂದೇಶ..!
01:566 ಮಂದಿಗೆ ಕಾಮನ್ವೆಲ್ತ್‌ ಪದಕ, ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಭರ್ಜರಿ ಸ್ವಾಗತ!