ಸುಪಾರಿ ಕೇಸ್: ಉಮಾಪತಿಗೆ ಕರೆ ಮಾಡಿ ಸತ್ಯ ಬಾಯ್ಬಿಟ್ಟಿದ್ದ ಬಾಂಬೆ ರವಿ!

Sep 2, 2021, 11:44 AM IST

ಬೆಂಗಳೂರು (ಸೆ. 02): ನಿರ್ಮಾಪಕ ಉಮಾಪತಿಗೆ ಧಮ್ಕಿ ಹಾಕಿದ್ದ ಬಾಂಬೆ ರವಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾಯುವ ಕೆಲ ದಿನಗಳ ಹಿಂದೆ ಬಾಂಬೆ ರವಿ ಉಮಾಪತಿಗೆ ಕರೆ ಮಾಡಿ ಸತ್ಯ ಹೇಳಿ ಕ್ಷಮೆ ಕೇಳಿದ್ದರು.

ಕೋರಮಂಗಲ ಆಕ್ಸಿಡೆಂಟ್ ಬಗ್ಗೆ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ!

'ಕೆಲವರು ನಮ್ಮ ಮಧ್ಯೆಯೇ ತಂದಿಡುವ ಕೆಲಸ ಮಾಡಿದ್ದಾರೆ. ಅವರ ಹೆಸರು ಈಗ ಬೇಡ. ಗೊತ್ತಿಲ್ಲದೇ ತಪ್ಪಾಗಿದೆ. ನಿಮ್ಮ ಪೋಷಕರಲ್ಲಿ ನಾನು ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ. ಉಮಾಪತಿ- ಬಾಂಬೆ ರವಿ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಬರ್ಟ್ ಸಿನಿಮಾ ವೇಳೆ ಉಮಾಪತಿ ಹತ್ಯೆಗೆ ಬಾಂಬೆ ರವಿಗೆ ಸುಪಾರಿ ಕೊಡಲಾಗಿತ್ತು. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಇತ್ತೀಚಿಗೆ ಬಾಂಬೆ ರವಿ ಆಂಧ್ರ ಪ್ರದೇಶದಲ್ಲಿ ಕೊರೊನಾಗೆ ಬಲಿಯಾಗಿದ್ದರು.