ರಾಜು ಅನಂತಸ್ವಾಮಿಯವರಿಗೆ 13 ಗಾಯಕರ ಗೀತ ನಮನ.. ಸಂಗೀತ ಲೋಕ ಅಂದ್ರೆ ಇದೆ ತಾನೆ

ರಾಜು ಅನಂತಸ್ವಾಮಿಯವರಿಗೆ 13 ಗಾಯಕರ ಗೀತ ನಮನ.. ಸಂಗೀತ ಲೋಕ ಅಂದ್ರೆ ಇದೆ ತಾನೆ

Published : Apr 19, 2020, 08:31 PM ISTUpdated : Apr 19, 2020, 08:37 PM IST

ಸುಗಮ ಸಂಗೀತ ಲೋಕದ ದಿಗ್ಗಜ ರಾಜು ಅನಂತಸ್ವಾಮಿ ಅವರಿಗೊಂದು ನಮನ/ 13 ಗಾಯಕರು ಅವರಿಗಾಗಿಯೇ ಹಾಡಿರುವ ಗೀತೆ ಕೇಳಿ/ ಇಲ್ಲಿ ಅಕ್ಷರಗಳು ಮಾತಾಡಲ್ಲ ಸಂಗೀತ ತಂಪೆರೆಯುತ್ತದೆ.

ಬೆಂಗಳೂರು(ಏ. 19)  13 ಗಾಯಕರು… 3 ವಾದ್ಯಸಂಗೀತಗಾರರು… 2 ಸಂಕಲನಕಾರರು… 50 ಗಂಟೆಗಳು.....ಹೌದು ಇದೊಂದು ಸಂಗೀತದ ರಸದೌತಣ

ತಮ್ಮ ತಮ್ಮ ಮನೆಯ ನಾಲ್ಕು ಗೋಡೆಗಳ ನಡುವೆಯೇ ಇದ್ದು ಇಂಥದ್ದೊಂದು ಸಂಗೀತ ಆಸ್ವಾದಿಸಲು ಸಿಗುತ್ತದೆ ಎಂದು ಯಾರೂ ಭಾವಿಸಿರಲೂ ಅಸಾಧ್ಯ. ಅಕ್ಷರಗಳಲ್ಲಿ ಇದನ್ನು ಕಟ್ಟಿಕೊಡಲಾಗುವುದಿಲ್ಲ ಕೇಳಿಯೇ ಆಸ್ವಾದಿಸಬೇಕು.  ಸಮರ್ಪಣಾ ಭಾವದಿಂದ ಅಲಂಕೃತಗೊಳಿಸಿರುವ ಸಂಗೀತಗುಚ್ಛವನ್ನು ನಾವೆಲ್ಲರೂ ಒಮ್ಮೆ ಕೇಳಲೇಬೇಕು. 

ಸಂಗೀತ ಸಂಯೋಜಕ  ರಾಜು ಅನಂತಸ್ವಾಮಿಯವರ ಅದ್ಭುತ ಸಂಗೀತ ಸಂಯೋಜನೆಲ್ಲಿ ಮೂಡಿಬಂದರುವ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ‘ಮಳೆ ಬರಲಿ ಪ್ರೀತಿಯ ಬನಕೆ’ ಎಂಬ ಸಂಯೋಜನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.. ಕೇಳಿ ಆಸ್ವಾದಿಸಿ ...ಮತ್ತೊಂದು ವಿಚಾರ  ಏ.19 ರಾಜು ಅನಂತಸ್ವಾಮಿ ಯವರ ಜನ್ಮದಿನ. ಸಂಗೀತ ಪ್ರೇಮಿಗಳ ಕಡೆಯಿಂದ ಅವರಿಗೆ ಒಂದು ನಮನ..

ಕುಲುಮೆ ಮುಂದೆ ಕುಳಿತು 35 ರೂ . ಸಂಪಾದಿಸಿದ ಕನ್ನಡದ ಸಂಗೀತ ನಿರ್ದೇಶಕ

ರಾಜು ಅನಂತಸ್ವಾಮಿ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಮೈಸೂರು ಅನಂತಸ್ವಾಮಿಯವರ ಮಗ. ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಯನ್ನು ಕೂಡ ಮಾಡಿದ್ದರು.

 ಏಪ್ರಿಲ್ 19, 1972. ಮೈಸೂರು ಅನಂತಸ್ವಾಮಿಗಳ ಮಗನಾಗಿ ರಾಜು ಅನಂತಸ್ವಾಮಿ ಜನಿಸಿದರು.  9ನೇ ವಯಸ್ಸಿನಲ್ಲೇ ತಮ್ಮ ತಂದೆಯವರ ಕಛೇರಿಗೆ ತಬಲಾ ನುಡಿಸಿದ ಈ ಹುಡುಗ, ಮುಂದೆ ಹಾರ್ಮೋನಿಯಂ ಹಿಡಿದು ಅನಂತಸ್ವಾಮಿಗಳಂತೆ ತಾನೂ ಹಾಡುತ್ತಾ, ಸಂಗೀತ ಸಂಯೋಜನೆ ಮಾಡುತ್ತಾ ಬೆಳೆದರು. 

ಫಯಾಜ್ ಸಾರಂಗಿ ಕಲಿತ ಕತೆ

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರ ಹೆಸರು ಎಂದಿಗೂ ಚಿರಸ್ಥಾಯಿ. ಈ ಸಂಗೀತ ಮಾಂತ್ರಿಕನ ಶಿಷ್ಯರಾಗಿ ಬೆಳೆದವರು ಅದೆಷ್ಟೋ ಗಾಯಕರು. ಅವರು ಹೊರತಂದ ಧ್ವನಿಮುದ್ರಿಕೆಗಳು ಇಂದಿಗೂ ಸಂಗೀತ ಇಂಪು ಹರಿಸುತ್ತಲೇ ಇವೆ.

ಕನ್ನಡ ಸಂಗೀತ ಲೋಕಕ್ಕೆ  ಜನವರಿ 17, 2009 ಕರಾಳ ದಿನ.  ರಾಜು ಅನಂತಸ್ವಾಮಿ ಕನ್ನಡ ಸಂಗೀತ ಲೋಕ ಅಗಲಿದ ದಿನ.   ಏನೇ ಆಗಲಿ..ಏನೇ ಹೋಗಲಿ... ರಾಜು ಅನಂತಸ್ವಾಮಿಯವರ ಸಂಯೋಜನೆ ಎಂದಿಗೂ ಶಾಶ್ವತ. ರಿಯಾಲಿಟಿ ಶೋಗಳಲ್ಲಿ ಸುಗಮ ಸಂಗೀತ ಲೋಕದಲ್ಲಿ ಅವರ ಸಂಯೋಜನೆ ಹಾಡಿಗೆ ಪ್ರತ್ಯೇಕ ಸ್ಥಾನವೇ ಇದೆ.

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!