ರಾಜು ಅನಂತಸ್ವಾಮಿಯವರಿಗೆ 13 ಗಾಯಕರ ಗೀತ ನಮನ.. ಸಂಗೀತ ಲೋಕ ಅಂದ್ರೆ ಇದೆ ತಾನೆ

ರಾಜು ಅನಂತಸ್ವಾಮಿಯವರಿಗೆ 13 ಗಾಯಕರ ಗೀತ ನಮನ.. ಸಂಗೀತ ಲೋಕ ಅಂದ್ರೆ ಇದೆ ತಾನೆ

Published : Apr 19, 2020, 08:31 PM ISTUpdated : Apr 19, 2020, 08:37 PM IST

ಸುಗಮ ಸಂಗೀತ ಲೋಕದ ದಿಗ್ಗಜ ರಾಜು ಅನಂತಸ್ವಾಮಿ ಅವರಿಗೊಂದು ನಮನ/ 13 ಗಾಯಕರು ಅವರಿಗಾಗಿಯೇ ಹಾಡಿರುವ ಗೀತೆ ಕೇಳಿ/ ಇಲ್ಲಿ ಅಕ್ಷರಗಳು ಮಾತಾಡಲ್ಲ ಸಂಗೀತ ತಂಪೆರೆಯುತ್ತದೆ.

ಬೆಂಗಳೂರು(ಏ. 19)  13 ಗಾಯಕರು… 3 ವಾದ್ಯಸಂಗೀತಗಾರರು… 2 ಸಂಕಲನಕಾರರು… 50 ಗಂಟೆಗಳು.....ಹೌದು ಇದೊಂದು ಸಂಗೀತದ ರಸದೌತಣ

ತಮ್ಮ ತಮ್ಮ ಮನೆಯ ನಾಲ್ಕು ಗೋಡೆಗಳ ನಡುವೆಯೇ ಇದ್ದು ಇಂಥದ್ದೊಂದು ಸಂಗೀತ ಆಸ್ವಾದಿಸಲು ಸಿಗುತ್ತದೆ ಎಂದು ಯಾರೂ ಭಾವಿಸಿರಲೂ ಅಸಾಧ್ಯ. ಅಕ್ಷರಗಳಲ್ಲಿ ಇದನ್ನು ಕಟ್ಟಿಕೊಡಲಾಗುವುದಿಲ್ಲ ಕೇಳಿಯೇ ಆಸ್ವಾದಿಸಬೇಕು.  ಸಮರ್ಪಣಾ ಭಾವದಿಂದ ಅಲಂಕೃತಗೊಳಿಸಿರುವ ಸಂಗೀತಗುಚ್ಛವನ್ನು ನಾವೆಲ್ಲರೂ ಒಮ್ಮೆ ಕೇಳಲೇಬೇಕು. 

ಸಂಗೀತ ಸಂಯೋಜಕ  ರಾಜು ಅನಂತಸ್ವಾಮಿಯವರ ಅದ್ಭುತ ಸಂಗೀತ ಸಂಯೋಜನೆಲ್ಲಿ ಮೂಡಿಬಂದರುವ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ‘ಮಳೆ ಬರಲಿ ಪ್ರೀತಿಯ ಬನಕೆ’ ಎಂಬ ಸಂಯೋಜನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.. ಕೇಳಿ ಆಸ್ವಾದಿಸಿ ...ಮತ್ತೊಂದು ವಿಚಾರ  ಏ.19 ರಾಜು ಅನಂತಸ್ವಾಮಿ ಯವರ ಜನ್ಮದಿನ. ಸಂಗೀತ ಪ್ರೇಮಿಗಳ ಕಡೆಯಿಂದ ಅವರಿಗೆ ಒಂದು ನಮನ..

ಕುಲುಮೆ ಮುಂದೆ ಕುಳಿತು 35 ರೂ . ಸಂಪಾದಿಸಿದ ಕನ್ನಡದ ಸಂಗೀತ ನಿರ್ದೇಶಕ

ರಾಜು ಅನಂತಸ್ವಾಮಿ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಮೈಸೂರು ಅನಂತಸ್ವಾಮಿಯವರ ಮಗ. ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಯನ್ನು ಕೂಡ ಮಾಡಿದ್ದರು.

 ಏಪ್ರಿಲ್ 19, 1972. ಮೈಸೂರು ಅನಂತಸ್ವಾಮಿಗಳ ಮಗನಾಗಿ ರಾಜು ಅನಂತಸ್ವಾಮಿ ಜನಿಸಿದರು.  9ನೇ ವಯಸ್ಸಿನಲ್ಲೇ ತಮ್ಮ ತಂದೆಯವರ ಕಛೇರಿಗೆ ತಬಲಾ ನುಡಿಸಿದ ಈ ಹುಡುಗ, ಮುಂದೆ ಹಾರ್ಮೋನಿಯಂ ಹಿಡಿದು ಅನಂತಸ್ವಾಮಿಗಳಂತೆ ತಾನೂ ಹಾಡುತ್ತಾ, ಸಂಗೀತ ಸಂಯೋಜನೆ ಮಾಡುತ್ತಾ ಬೆಳೆದರು. 

ಫಯಾಜ್ ಸಾರಂಗಿ ಕಲಿತ ಕತೆ

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರ ಹೆಸರು ಎಂದಿಗೂ ಚಿರಸ್ಥಾಯಿ. ಈ ಸಂಗೀತ ಮಾಂತ್ರಿಕನ ಶಿಷ್ಯರಾಗಿ ಬೆಳೆದವರು ಅದೆಷ್ಟೋ ಗಾಯಕರು. ಅವರು ಹೊರತಂದ ಧ್ವನಿಮುದ್ರಿಕೆಗಳು ಇಂದಿಗೂ ಸಂಗೀತ ಇಂಪು ಹರಿಸುತ್ತಲೇ ಇವೆ.

ಕನ್ನಡ ಸಂಗೀತ ಲೋಕಕ್ಕೆ  ಜನವರಿ 17, 2009 ಕರಾಳ ದಿನ.  ರಾಜು ಅನಂತಸ್ವಾಮಿ ಕನ್ನಡ ಸಂಗೀತ ಲೋಕ ಅಗಲಿದ ದಿನ.   ಏನೇ ಆಗಲಿ..ಏನೇ ಹೋಗಲಿ... ರಾಜು ಅನಂತಸ್ವಾಮಿಯವರ ಸಂಯೋಜನೆ ಎಂದಿಗೂ ಶಾಶ್ವತ. ರಿಯಾಲಿಟಿ ಶೋಗಳಲ್ಲಿ ಸುಗಮ ಸಂಗೀತ ಲೋಕದಲ್ಲಿ ಅವರ ಸಂಯೋಜನೆ ಹಾಡಿಗೆ ಪ್ರತ್ಯೇಕ ಸ್ಥಾನವೇ ಇದೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
05:30ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!