ದೇವರ ಮೂರ್ತಿ ಅಗೆದು ನಿಧಿಗಾಗಿ ಶೋಧ: ವಿಗ್ರಹ ಕೆಡವಿ ನಾಲ್ಕು ಅಡಿ ಗುಂಡಿ ತೋಡಿದ ಕಳ್ಳರ ಗ್ಯಾಂಗ್

ದೇವರ ಮೂರ್ತಿ ಅಗೆದು ನಿಧಿಗಾಗಿ ಶೋಧ: ವಿಗ್ರಹ ಕೆಡವಿ ನಾಲ್ಕು ಅಡಿ ಗುಂಡಿ ತೋಡಿದ ಕಳ್ಳರ ಗ್ಯಾಂಗ್

Published : Nov 19, 2023, 10:56 AM IST

ಆ ಗ್ರಾಮದಲ್ಲಿ ಜನರು ಭಯಭೀತರಾಗಿದ್ದಾರೆ. ಕಳ್ಳರ ಗ್ಯಾಂಗ್ವೊಂದು ನಿಧಿಗಾಗಿ ಹನುಮಂತ ದೇವರ ಮೂರ್ತಿಯನ್ನೇ ಕೆಡವಿ, ಮಣ್ಣು ಅಗೆದು ನಿಧಿಗಾಗಿ ಹುಡಿಕಾಡಿದ್ದಾರೆ.
 

ದೇವರು.. ದೇವಸ್ಥಾನ ಅಂದ್ರೆ ಮನುಷ್ಯನಿಗೆ ಭಯ ಭಕ್ತಿ ಇರುತ್ತೆ. ಆ ಪವಿತ್ರವಾದ ಸ್ಥಳದಲ್ಲಿ ಯಾವುದೇ ಕೆಟ್ಟ ಕೆಲಸಗಳನ್ನು ಮಾಡಲು ಹಿಂಜರಿಯುತ್ತಾರೆ. ಅಂತಹ ಸ್ಥಳದಲ್ಲೇ ಖದೀಮರು ನಿಧಿಗಾಗಿ ಶೋಧ(Treasure hunt) ನಡೆಸಿದ್ದಾರೆ. ದೇವರ ಮೂರ್ತಿಯನ್ನೇ ಕೆಡವಿ ನಾಲ್ಕು ಅಡಿಯಷ್ಟು ಗುಂಡಿ ತೋಡಿದ್ದಾರೆ. ಧಾರವಾಡದ(Dharwad) ದುಬ್ಬನಮರಡಿ ಗ್ರಾಮದ ಹ‌ನುಮಂತ ದೇವರ ದೇವಸ್ಥಾನದಲ್ಲಿ(Hanuman temple) ನಿಧಿ ಶೋಧ ನಡೆಸಲಾಗಿದೆ. ಕಳೆದ ಅಮವಾಸ್ಯೆ ದಿನ ಮಧ್ಯರಾತ್ರಿ ಆಂಜನೇಯ ಮೂರ್ತಿಯನ್ನು ಕೆಡವಿ ಗುಂಡಿ ಅಗೆದು ತೆಂಗಿನಕಾಯಿ ಮತ್ತು ನಿಂಬೆ ಹಣ್ಣು ಇಟ್ಟು ಪೂಜೆ ಮಾಡಿದ್ದಾರೆ. ಈ ನಿಧಿ ಕಳ್ಳರ ಗ್ಯಾಂಗ್ ಇದೇ ರೀತಿಯಾಗಿ ಊರಿನ ಹಲವು ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳನ್ನು ಕೆಡವಿ ಭೂಮಿಯನ್ನು ಅಗೆದು ನಿಧಿಗಾಗಿ ಶೋಧ ಮಾಡಿದ್ದಾರೆ.  ನಿಧಿಗಳ್ಳರ ಹಾವಳಿಗೆ ಗರಗ, ತಡಕೋಡ್ ಖಾನಾಪೂರ, ಹಂಗರಕಿ, ತೆಗೂರು, ದುಬ್ಬನಮರಡಿ ಸೇರಿದಂತೆ‌ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳ ಜನರು ಭಯ ಭೀತರಾಗಿದ್ದಾರೆ. ದೇವಸ್ಥಾನಕ್ಕೆ ಬರಲು ಭಕ್ತರು ಹಿಂಜರಿಯುತ್ತಿದ್ದಾರೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ ನಿಧಿಗಳ್ಳರ ಹಾವಳಿ ದಿನದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮದ ದೇವರ ಮೂರ್ತಿಗಳನ್ನೇ ಧ್ವಂಸ ಮಾಡಿ ನಿಧಿ ಶೋಧಕಾರ್ಯವನ್ನ ಮಾಡುತ್ತಿರೋದ್ರಿಂದ ದೇವರ ಶಾಪ ತಟ್ಟುತ್ತೆ ಅನ್ನೋ ಭಯದಲ್ಲಿದ್ದಾರೆ ಭಕ್ತರು. ಈ ಖತರ್ನಾಕ್ ನಿಧಿಗಳ್ಳರ ಗ್ಯಾಂಗನ್ನು ಪೊಲೀಸರು ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಿ ಸ್ಥಳೀಯರ ಆತಂಕ ದೂರ ಮಾಡಬೇಕಿದೆ. 

ಇದನ್ನೂ ವೀಕ್ಷಿಸಿ: Weekly horoscope: ಈ ವಾರ ತುಳಸಿ ಹಬ್ಬವಿದ್ದು, ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ?

24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
Read more