ಸರ್ಕಾರಿ ಸವಲತ್ತಿಗೆ ವಿಶೇಷಚೇತನರ ಪರದಾಟ: ಬಳ್ಳಾರಿ TO ಬೆಂಗಳೂರು ಪಾದಯಾತ್ರೆಗೆ ನಿರ್ಧಾರ

ಸರ್ಕಾರಿ ಸವಲತ್ತಿಗೆ ವಿಶೇಷಚೇತನರ ಪರದಾಟ: ಬಳ್ಳಾರಿ TO ಬೆಂಗಳೂರು ಪಾದಯಾತ್ರೆಗೆ ನಿರ್ಧಾರ

Published : Oct 20, 2023, 10:39 AM IST

ಕಟ್ಟೆ ಕಡೆಯ ವ್ಯಕ್ತಿಗೂ ಸೌಲಭ್ಯ ಮುಟ್ಟಬೇಕು ಅನ್ನೊಂದು ಸರ್ಕಾರದ ಮುುಖ್ಯ ಉದ್ದೇಶ..ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಹೋರಾಟ ಮಾಡಿಯೇ ಪಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ತಮ್ಮ ಸೌವಲತ್ತು ಪಡೆಯಲು ಬಳ್ಳಾರಿಯಿಂದ ಬೆಂಗಳೂರಿಗೆ ವಿಶೇಷಚೇತನರು ಪಾದಯಾತ್ರೆ ಮಾಡುತ್ತಿದ್ದಾರೆ.
 

ಇವರೆಲ್ಲ ಅಂಧರು.. ಕಣ್ಣು ಕಾಣುತ್ತಿಲ್ಲ.. ಹೆಜ್ಜೆ ಇಡಬೇಕು ಅಂದ್ರೂ ವಾಕಿಂಗ್ ಸ್ಟಿಕ್ ಬೇಕು. ಆದರೂ ಬಳ್ಳಾರಿಯ ಹೊಸಪೇಟೆಯಿಂದ ಇವರೆಲ್ಲ ಬೆಂಗಳೂರಿಗೆ ಪಾದಯಾತ್ರೆ(Padayatra) ಹೊರಟಿದ್ದಾರೆ. ವಿಶೇಷ ಚೇತನರಿಗೆ(Spacially abled people) ಸರ್ಕಾರದ ಹಲವು ಯೋಜನೆಗಳಿವೆ. ಅದರಲ್ಲೂ ಕಣ್ಣು ಕಾಣದವರಿಗೆ ಪಿಂಚಣಿ ಸೇರಿ ಹಲವು ಸೌವಲತ್ತನ್ನು ಸರ್ಕಾರ ನೀಡಿದೆ. ಅದ್ರೆ, ದೇವರು ವರಕೊಟ್ರೂ ಪೂಜಾರಿ ಕೊಡ್ತಿಲ್ಲ ಅನ್ನೋ ಹಾಗಾಗಿದೆ ಇವರ ಕತೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಚೇರಿಗಳಿಗೆ ಅಲೆದು ಅಲೆದು ಬೇಸತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಮ್ಮ ಸಮಸ್ಯೆ ಸರಿಪಡಿಸಿ ಅಂತಾ ಸರ್ಕಾರದ ಗಮನ ಸಳೆಯಲು ಹೊಸಪೇಟೆಯಿಂದ ಬೆಂಗಳೂರಿಗೆ(Bengaluru) ಪಾದಯಾತ್ರೆ ಆರಂಭಿಸಿದ್ದಾರೆ. ಸಾರಿಗೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹೋಂಗಾರ್ಡ್ ನೌಕರರ ಖಾಯಂ ಮಾಡುವುದು ಸೇರಿದಂತೆ ಧ್ವನಿ ಇಲ್ಲದ 9 ವರ್ಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಕಣ್ಣು ಕಾಣದವರ 350 ಕಿಲೋಮೀಟರ್ ಪಾದಯಾತ್ರೆಗೆ ಸಂಘಸಂಸ್ಥೆಗಳು ಬೆಂಬಲ ನೀಡಿವೆ. ಕಣ್ಣಿಲ್ಲದವರ ಬಾಳಲ್ಲಿ ಬೆಳಕು ಮೂಡಿಸಲೆಂದೇ ಸರ್ಕಾರ ವಿಶೇಷ ಯೋಜನೆಗಳನ್ನ ಜಾರಿಗೊಳಿಸುತ್ತೆ.. ಆದ್ರೆ, ಅದನ್ನ ಫಲಾನುಭವಿಗಳಿಗೆ ತಲುಪಿಸಬೇಕಿದ್ದ ದಪ್ಪ ಚರ್ಮದ ಅಧಿಕಾರಿಗಳಿಗೆ ಮಾತ್ರ ಇಂಥವರು ಕಾಣಿಸುತ್ತಲೇ ಇಲ್ಲ.. ಸರ್ಕಾರ ಈಗಲಾದ್ರೂ ಈ ವಿಶೇಷ ಚೇತನರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ. 

ಇದನ್ನೂ ವೀಕ್ಷಿಸಿ:  ಕೊಳಚೆ ನೀರಿನಲ್ಲಿ ಕೊಚ್ಚಿ ಹೋಯ್ತು 33 ಕೋಟಿ ಅನುದಾನ: ಹು-ಧಾ ಮಹಾನಗರ ಪಾಲಿಕೆಯಲ್ಲಿ ನೀರಿನ ಮಹಾ ಹಗರಣ..?

25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
Read more