ಸರ್ಕಾರಿ ಸವಲತ್ತಿಗೆ ವಿಶೇಷಚೇತನರ ಪರದಾಟ: ಬಳ್ಳಾರಿ TO ಬೆಂಗಳೂರು ಪಾದಯಾತ್ರೆಗೆ ನಿರ್ಧಾರ

ಸರ್ಕಾರಿ ಸವಲತ್ತಿಗೆ ವಿಶೇಷಚೇತನರ ಪರದಾಟ: ಬಳ್ಳಾರಿ TO ಬೆಂಗಳೂರು ಪಾದಯಾತ್ರೆಗೆ ನಿರ್ಧಾರ

Published : Oct 20, 2023, 10:39 AM IST

ಕಟ್ಟೆ ಕಡೆಯ ವ್ಯಕ್ತಿಗೂ ಸೌಲಭ್ಯ ಮುಟ್ಟಬೇಕು ಅನ್ನೊಂದು ಸರ್ಕಾರದ ಮುುಖ್ಯ ಉದ್ದೇಶ..ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಹೋರಾಟ ಮಾಡಿಯೇ ಪಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ತಮ್ಮ ಸೌವಲತ್ತು ಪಡೆಯಲು ಬಳ್ಳಾರಿಯಿಂದ ಬೆಂಗಳೂರಿಗೆ ವಿಶೇಷಚೇತನರು ಪಾದಯಾತ್ರೆ ಮಾಡುತ್ತಿದ್ದಾರೆ.
 

ಇವರೆಲ್ಲ ಅಂಧರು.. ಕಣ್ಣು ಕಾಣುತ್ತಿಲ್ಲ.. ಹೆಜ್ಜೆ ಇಡಬೇಕು ಅಂದ್ರೂ ವಾಕಿಂಗ್ ಸ್ಟಿಕ್ ಬೇಕು. ಆದರೂ ಬಳ್ಳಾರಿಯ ಹೊಸಪೇಟೆಯಿಂದ ಇವರೆಲ್ಲ ಬೆಂಗಳೂರಿಗೆ ಪಾದಯಾತ್ರೆ(Padayatra) ಹೊರಟಿದ್ದಾರೆ. ವಿಶೇಷ ಚೇತನರಿಗೆ(Spacially abled people) ಸರ್ಕಾರದ ಹಲವು ಯೋಜನೆಗಳಿವೆ. ಅದರಲ್ಲೂ ಕಣ್ಣು ಕಾಣದವರಿಗೆ ಪಿಂಚಣಿ ಸೇರಿ ಹಲವು ಸೌವಲತ್ತನ್ನು ಸರ್ಕಾರ ನೀಡಿದೆ. ಅದ್ರೆ, ದೇವರು ವರಕೊಟ್ರೂ ಪೂಜಾರಿ ಕೊಡ್ತಿಲ್ಲ ಅನ್ನೋ ಹಾಗಾಗಿದೆ ಇವರ ಕತೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಚೇರಿಗಳಿಗೆ ಅಲೆದು ಅಲೆದು ಬೇಸತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಮ್ಮ ಸಮಸ್ಯೆ ಸರಿಪಡಿಸಿ ಅಂತಾ ಸರ್ಕಾರದ ಗಮನ ಸಳೆಯಲು ಹೊಸಪೇಟೆಯಿಂದ ಬೆಂಗಳೂರಿಗೆ(Bengaluru) ಪಾದಯಾತ್ರೆ ಆರಂಭಿಸಿದ್ದಾರೆ. ಸಾರಿಗೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹೋಂಗಾರ್ಡ್ ನೌಕರರ ಖಾಯಂ ಮಾಡುವುದು ಸೇರಿದಂತೆ ಧ್ವನಿ ಇಲ್ಲದ 9 ವರ್ಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಕಣ್ಣು ಕಾಣದವರ 350 ಕಿಲೋಮೀಟರ್ ಪಾದಯಾತ್ರೆಗೆ ಸಂಘಸಂಸ್ಥೆಗಳು ಬೆಂಬಲ ನೀಡಿವೆ. ಕಣ್ಣಿಲ್ಲದವರ ಬಾಳಲ್ಲಿ ಬೆಳಕು ಮೂಡಿಸಲೆಂದೇ ಸರ್ಕಾರ ವಿಶೇಷ ಯೋಜನೆಗಳನ್ನ ಜಾರಿಗೊಳಿಸುತ್ತೆ.. ಆದ್ರೆ, ಅದನ್ನ ಫಲಾನುಭವಿಗಳಿಗೆ ತಲುಪಿಸಬೇಕಿದ್ದ ದಪ್ಪ ಚರ್ಮದ ಅಧಿಕಾರಿಗಳಿಗೆ ಮಾತ್ರ ಇಂಥವರು ಕಾಣಿಸುತ್ತಲೇ ಇಲ್ಲ.. ಸರ್ಕಾರ ಈಗಲಾದ್ರೂ ಈ ವಿಶೇಷ ಚೇತನರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ. 

ಇದನ್ನೂ ವೀಕ್ಷಿಸಿ:  ಕೊಳಚೆ ನೀರಿನಲ್ಲಿ ಕೊಚ್ಚಿ ಹೋಯ್ತು 33 ಕೋಟಿ ಅನುದಾನ: ಹು-ಧಾ ಮಹಾನಗರ ಪಾಲಿಕೆಯಲ್ಲಿ ನೀರಿನ ಮಹಾ ಹಗರಣ..?

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more