ನಾನು ದರ್ಶನ್ ಸೇಫ್ ಮಾಡ್ತಿದ್ದೇನೆ ಅನ್ನೋದು ಸುಳ್ಳು, ಭೇಟಿಯಾಗೇ 3 ತಿಂಗಳು ಆಗಿದೆ: ಸತೀಶ್‌ ರೆಡ್ಡಿ

Jun 22, 2024, 1:38 PM IST

ನಟ ದರ್ಶನ್‌ರನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಬಚಾವ್‌  ಮಾಡಲು ಶಾಸಕ ಸತೀಶ್‌ ರೆಡ್ಡಿ(Satish Reddy) ಯತ್ನಿಸುತ್ತಿದ್ದಾರೆ ಎಂಬ ವದಂತಿ ಹರಿಡಿದೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ದರ್ಶನ್(Darshan) ಸೇಫ್ ಮಾಡ್ತಿರೋದು ಸುಳ್ಳು. ದರ್ಶನ್ ಭೇಟಿಯಾಗಿ 3 ತಿಂಗಳು ಆಗಿದೆ ಎಂದು ಹೇಳಿದ್ದಾರೆ. ದರ್ಶನ್ ಕೇಸ್‌ನಲ್ಲಿ ನನ್ನನ್ನು ತಣುಕು ಹಾಕ್ತಿರೋದು ಸರಿಯಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗ್ಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂದು ಶಾಸಕ ಸತೀಶ್‌ ರೆಡ್ಡಿ ಹೇಳಿದ್ದಾರೆ. ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ. ದರ್ಶನ್ ತಪ್ಪು ಮಾಡಿದ್ದಾರಾ? ಇಲ್ವಾ ಅನ್ನೋದು ನ್ಯಾಯಾಲಯದ ಮೆಟ್ಟಿಲಲ್ಲಿದೆ. ಮುಂದೆ ನೋಡೋಣ ಎಂದರು. 

ಇದನ್ನೂ ವೀಕ್ಷಿಸಿ:  ದರ್ಶನ್ ಬಚಾವ್‌ಗೆ ಯತ್ನಿಸಿದವರಿಗೆ ತನಿಖೆಯ ಬಿಸಿ! ನಟನ ಜತೆ ಮಾತಾಡಿದವರ ಮನೆಗೆ ಪೊಲೀಸ್ ನೋಟಿಸ್!