ಅತ್ತ ಮಳೆ ಇಲ್ಲ..ಇತ್ತ ಕಾಲುವೆ ನೀರು ಬಂದಿಲ್ಲ: ನೀರಿಲ್ಲದೆ ಕುರಿ, ಟ್ರ್ಯಾಕ್ಟರ್ ಬಿಟ್ಟು ಬೆಳೆನಾಶ !

ಅತ್ತ ಮಳೆ ಇಲ್ಲ..ಇತ್ತ ಕಾಲುವೆ ನೀರು ಬಂದಿಲ್ಲ: ನೀರಿಲ್ಲದೆ ಕುರಿ, ಟ್ರ್ಯಾಕ್ಟರ್ ಬಿಟ್ಟು ಬೆಳೆನಾಶ !

Published : Oct 04, 2023, 10:51 AM IST

ಆ ರೈತರು ಪ್ರತಿವರ್ಷದಂತೆ ಮಳೆ ಬರುತ್ತೆ, ಕಾಲುವೆ ನೀರು ಸಿಗುತ್ತೆ ಅಂತ ಭಾವಿಸಿ ಭತ್ತ ನಾಟಿ ಮಾಡಿದ್ರು. ಸಮಯಕ್ಕೆ ಸರಿಯಾಗಿ ಭತ್ತಕ್ಕೆ ಗೊಬ್ಬರ ಸಹ ಹಾಕಿದ್ರು. ಇನ್ನೇನು ಭತ್ತ ಕಾಯಿ ಕಟ್ಟುತ್ತೆ ಎನ್ನುವಷ್ಟರಲ್ಲಿಯೇ ಬೆಳೆ ಒಣಗಿ ಕೈ ತಪ್ತಿದೆ.. ಏಕೆ ಅಂತೀರಾ ಈ ವರದಿ ನೋಡಿ.

ಬಿಸಿಲನಾಡು ರಾಯಚೂರಲ್ಲಿ(Raichur) ಬರ ತಾಂಡವವಾಡ್ತಿದೆ. ಮುಂಗಾರು ಮಳೆ(Rain) ಕೈ ಕೊಟ್ಟಿದೆ, ಜುಲೈನಲ್ಲಿ ಸುರಿದ ಅಲ್ಪ ಮಳೆ ನಂಬಿ ಬೆಳೆ ಹಾಕಿದ ರೈತ ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಸಾಲ ಸೋಲ ಮಾಡಿ ಬೆಳೆದ(Crops) ಬೆಳೆ ಗದ್ದೆಯಲ್ಲೇ ಒಣಗ್ತಿದೆ. ಈ ವರ್ಷ ಕಾಲುವೆ ನೀರು ಸಹ ಬರದೇ ರೈತರ(farmer) ಗೋಳು ಹೇಳತೀರದಾಗಿದೆ. ರಾಯಚೂರು ತಾಲೂಕಿನ ಮಮದಾಪೂರ, ಕಸವಿಕ್ಯಾಂಪ್, ಅಮರೇಶ್ವರ ಕ್ಯಾಂಪ್ ಸೇರಿದಂತೆ 8ರಿಂದ 10 ಹಳ್ಳಿಯ ಸಾವಿರಾರು ಎಕರೆ ಭತ್ತದ ಗದ್ದೆಗಳು ಒಣಗಿ ನಿಂತಿವೆ. ಇದರಿಂದ ಬೇಸತ್ತ ಕೆಲ ರೈತರು ಭತ್ತದ ಗದ್ದೆಗಳಿಗೆ ಕುರಿ ಬಿಟ್ಟರೆ. ಮತ್ತೆ ಕೆಲವರು ಟ್ರಾಕ್ಟರ್ ಮುಖಾಂತರ ಭತ್ತನಾಶಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸರ್ಕಾರ ಬರ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಭತ್ತದ ನಾಟಿ, ಕಳೆ, ಗೊಬ್ಬರ, ಔಷಧಿ ಸಿಂಪಡನೆ ಎಲ್ಲ ಕೆಲಸವೂ ಪೂರ್ಣಗೊಂಡಿದೆ. ಎಕರೆಗೆ 15ರಿಂದ 20 ಸಾವಿರ ಖರ್ಚು ಮಾಡಲಾಗಿದೆ. ಆದ್ರೆ ಇಷ್ಟೆಲ್ಲಾ ಮಾಡಿದ್ರು ಬೆಳೆ ಮಾತ್ರ ಕೈಗೆ ಸಿಗದೆ ಒಣಗಿ ನೆಲ ಕಚ್ಚಿದೆ. ಸರ್ಕಾರ ಪರಿಹಾರ ನೀಡದಿದ್ರೆ ನಮಗೆ ಸಾವೇ ಗತಿ ಅಂತ ರೈತರು ಕಣ್ಣೀರಾಕ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಸುರತ್ಕಲ್‌ನಲ್ಲಿ ನಿರ್ಮಾಣ ಆಗುತ್ತಾ ಸಾವರ್ಕರ್ ಸರ್ಕಲ್? ಶಾಸಕ ಭರತ್ ಶೆಟ್ಟಿ ಆಸೆಗೆ ಬ್ರೇಕ್ ಹಾಕುತ್ತಾ ಸರ್ಕಾರ ?

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more