ಕೊರೋನಾ ಮಧ್ಯೆ ಶಾಕ್‌ ಕೊಟ್ಟ ವೈದ್ಯರು..?

May 17, 2021, 1:14 PM IST

ಶಿರಸಿ(ಮೇ.17): ಆಕ್ಸಿಜನ್‌, ಅಗತ್ಯ ಔಷಧಿಗಳು ಪೂರೈಕೆ ಅಗದಿರುವುದಕ್ಕೆ ಇಂದಿನಿಂದ(ಸೋಮವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಿಗೋದಿಲ್ಲ ಅಂತ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಈ ಘಟನೆ ನಡೆದಿರೋದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ. ಈ ಮೂಲಕ ಮಹಾಮಾರಿ ಕೊರೋನಾ ವೈರಸ್‌ ಹಾವಳಿಯ ಮಧ್ಯೆ ವೈದ್ಯರು ಶಾಕ್‌ ಕೊಟ್ಟಿದ್ದಾರೆ. ಹೊಸ ರೋಗಿಗಳಿಗೆ ಇಂದಿನಿಂದ ಚಿಕಿತ್ಸೆ ನೀಡುವುದಿಲ್ಲ ಅಂತ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮಾರಣಾಂತಿಕ ಬ್ಲಾಕ್ ಫಂಗಸ್ - ಸ್ಟಿರಾಯ್ಡ್ : ಮತ್ತೊಂದು ಮಹಾಮಾರಿ ಬಗ್ಗೆ ಎಚ್ಚರ..!

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona