ಸುವರ್ಣ ಸೌಧದಲ್ಲಿ ನಡೆದ ಕೆಡಿಸಿ ಸಭೆಗೆ ಒಂದೇ ಕಾರಿನಲ್ಲಿ ಬಂದ ತಂದೆ ಮಗಳು!

Jul 12, 2024, 3:12 PM IST

ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಕೆಡಿಸಿ ಸಭೆಗೆ(KDC meeting)  ಸಚಿವ ಸತೀಶ ಜಾರಕಿಹೊಳಿ(Satish Jarakiholi) ಹಾಗೂ ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ (Priyanka Jarakiholi) ಒಂದೇ ಕಾರಿನಲ್ಲಿ ಒಟ್ಟಿಗೆ ಬಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜತೆ ಪ್ರಿಯಾಂಕಾ‌ ಜಾರಕಿಹೊಳಿ ಬಂದಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ(Chikkodi) ಸಂಸದೆಯಾಗಿದ್ದಾರೆ. ಕೆಡಿಪಿ ಸಭೆಯ‌ ವೇದಿಕೆಯ ಮೇಲೆ‌ ಕುಳಿತ ತಂದೆ ಸತೀಶ್‌ ಹಾಗೂ ಮಗಳು ಪ್ರಿಯಾಂಕಾ. ಸಂಸದೆಯಾದ ಬಳಿಕ ಮೊದಲ ಬಾರಿ ಕೆಡಿಸಿ ಸಭೆಗೆ ಪ್ರಿಯಾಂಕಾ ಜಾರಕಿಹೊಳಿ ಬಂದಿದ್ದಾರೆ. ಈ ವೇಳೆ ಸತೀಶ್‌ ಜಾರಕಿಹೊಳಿ ಮಾತನಾಡಿ, ವಾಲ್ಮೀಕಿ ನಿಮಗ ಹಗರಣ ಹಾಗೂ ಮುಡಾ ಬಗ್ಗೆ ಮಾತನಾಡಿದರು.

ಇದನ್ನೂ ವೀಕ್ಷಿಸಿ:  ಶಾಸಕರ ಕುರ್ಚಿ ಕಿತ್ತಾಟಕ್ಕೆ ಎಸ್‌ಪಿ, ಡಿಸಿ, ಸಿಇಓ ಹೈರಾಣು: ಕೆಡಿಪಿ ಸಭೆ ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ ಆಕ್ಷೇಪ