ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !

ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !

Published : Nov 04, 2023, 10:10 AM IST

ಕಲಾವಿದರ ಹಲವು ಅಪಸ್ವರಗಳ ನಡುವೆ ಆರಂಭವಾದ ಈ ಬಾರಿಯ ದಸರಾ ಮುಕ್ತಾಯವಾದರೂ ಕಲಾವಿದರ ತೊಂದರೆಗಳು ತಪ್ಪಿಲ್ಲ. ದಸರಾ ಸ್ಪರ್ಧೆಯಲ್ಲಿ ಗೆದ್ದ ತಪ್ಪಿಗೆ ಬಹುಮಾನವನ್ನೂ ಪಡೆಯದೆ ದಂಡ ಕಟ್ಟುವ ಪರಿಸ್ಥಿತಿ ಬಂದಿದೆ. 
 

2023 ರ ವಿಶ್ವವಿಖ್ಯಾತ ಮೈಸೂರು ದಸರಾ ಮುಕ್ತಾಯ ಆದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ದಸರಾ(Mysore dasara) ಆರಂಭದಲ್ಲೇ ಕಲಾವಿದರನ್ನು ಆಹ್ವಾನಿಸಲು ಅಧಿಕಾರಿಗಳು ಕಿಕ್‌ಬ್ಯಾಕ್ ಕೇಳಿದ ಆರೋಪಗಳು ಬಂದಿದ್ದವು. ಈಗ ದಸರಾ ಕಲಾವಿದರಿಗೆ(Artists) ನೀಡಿದ ಬಹುಮಾನದ ಚೆಕ್(Prize Check) ವಾಪಸ್ ಆಗಿದ್ದು, ಇದು ಸ್ಪರ್ಧೆಯಲ್ಲಿ ಗೆದ್ದ ಕಲಾವಿದನ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಹವ್ಯಾಸಿ ಛಾಯಚಿತ್ರಗಾರ ಎನ್.ಜಿ ಸುಧೀರ್ ದಸರಾ ಲಲಿತ ಕಲೆ ಹಾಗೂ ಕರಕುಶಲ ಉಪಸಮಿತಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದಿದ್ದರು. ಬಹುಮಾನವಾಗಿ 7 ಸಾವಿರ ರೂ ಚೆಕ್ ನೀಡಲಾಗಿತ್ತು‌. ಅಕ್ಟೋಬರ್ 26 ರಂದು ಚೆಕ್ ನೀಡಲಾಗಿದ್ದು, 27 ರಂದು ಸುಧೀರ್ ಬ್ಯಾಂಕ್ಗೆ ಚೆಕ್ನ್ನು ಹಾಜರುಪಡಿಸಿದ್ರು. ಆದ್ರೆ ಅದೇ ಚೆಕ್ ಅಕ್ಟೋಬರ್ 30 ರಂದು ವಾಪಸ್ ಆಗಿದೆ. ವಾಪಸ್ ಆಗುವ ವೇಳೆ ಸುಧೀರ್ ಅಕೌಂಟ್ ನಿಂದ 118 ರುಪಾಯಿ ಕಟ್ ಮಾಡಲಾಗಿದೆ. ಎಲ್ಲಾ ಬೆಳವಣಿಗೆಯನ್ನು ಸುಧೀರ ಅವರು ನಮ್ಮ ಪ್ರತಿನಿಧಿ ಮಧು ಬಳಿ ವಿವರವಾಗಿ ವಿವರಿಸಿದ್ದಾರೆ ಕೇಳಿ. ಇನ್ನು ಚೆಕ್ ವಾಪಸ್ಸಾದ ಪ್ರಕರಣದ ಬಗ್ಗೆ ಸ್ಪಷ್ಟನೆ ಕೇಳಲು ಲಲಿತ ಕಲೆ ಹಾಗೂ ಕರಕುಶಲ ಉಪ ಸಮಿತಿ ಕಾರ್ಯದರ್ಶಿಯನ್ನು ಸಂಪರ್ಕಿಸುವ ಪ್ರಯತ್ನವೂ ನಡೆಯಿತು. ಆದರೆ ಅಧಿಕಾರಿ ಸಂಪರ್ಕಕ್ಕೆ ಸಿಗಲೇ ಇಲ್ಲ. ಬಹುಮಾನ ಬಂದರೂ ಬಹುಮಾನದ ಮೊತ್ತ ಮಾತ್ರ ಸಿಗಲೇ ಇಲ್ಲ. 

ಇದನ್ನೂ ವೀಕ್ಷಿಸಿ:  ಕಮಲ್ ಹುಟ್ಟುಹಬ್ಬಕ್ಕೆ ಇಂಡಿಯನ್ 2 ಗ್ಲಿಂಪ್ಸ್ ಉಡುಗೊರೆ: ‘ಸಕಲಕಲಾವಲ್ಲಭ’ನ ಜೊತೆಗೆ ಕನ್ನಡಿಗ ಸುದೀಪ್..!

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!