ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !

ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !

Published : Nov 04, 2023, 10:10 AM IST

ಕಲಾವಿದರ ಹಲವು ಅಪಸ್ವರಗಳ ನಡುವೆ ಆರಂಭವಾದ ಈ ಬಾರಿಯ ದಸರಾ ಮುಕ್ತಾಯವಾದರೂ ಕಲಾವಿದರ ತೊಂದರೆಗಳು ತಪ್ಪಿಲ್ಲ. ದಸರಾ ಸ್ಪರ್ಧೆಯಲ್ಲಿ ಗೆದ್ದ ತಪ್ಪಿಗೆ ಬಹುಮಾನವನ್ನೂ ಪಡೆಯದೆ ದಂಡ ಕಟ್ಟುವ ಪರಿಸ್ಥಿತಿ ಬಂದಿದೆ. 
 

2023 ರ ವಿಶ್ವವಿಖ್ಯಾತ ಮೈಸೂರು ದಸರಾ ಮುಕ್ತಾಯ ಆದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ದಸರಾ(Mysore dasara) ಆರಂಭದಲ್ಲೇ ಕಲಾವಿದರನ್ನು ಆಹ್ವಾನಿಸಲು ಅಧಿಕಾರಿಗಳು ಕಿಕ್‌ಬ್ಯಾಕ್ ಕೇಳಿದ ಆರೋಪಗಳು ಬಂದಿದ್ದವು. ಈಗ ದಸರಾ ಕಲಾವಿದರಿಗೆ(Artists) ನೀಡಿದ ಬಹುಮಾನದ ಚೆಕ್(Prize Check) ವಾಪಸ್ ಆಗಿದ್ದು, ಇದು ಸ್ಪರ್ಧೆಯಲ್ಲಿ ಗೆದ್ದ ಕಲಾವಿದನ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಹವ್ಯಾಸಿ ಛಾಯಚಿತ್ರಗಾರ ಎನ್.ಜಿ ಸುಧೀರ್ ದಸರಾ ಲಲಿತ ಕಲೆ ಹಾಗೂ ಕರಕುಶಲ ಉಪಸಮಿತಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದಿದ್ದರು. ಬಹುಮಾನವಾಗಿ 7 ಸಾವಿರ ರೂ ಚೆಕ್ ನೀಡಲಾಗಿತ್ತು‌. ಅಕ್ಟೋಬರ್ 26 ರಂದು ಚೆಕ್ ನೀಡಲಾಗಿದ್ದು, 27 ರಂದು ಸುಧೀರ್ ಬ್ಯಾಂಕ್ಗೆ ಚೆಕ್ನ್ನು ಹಾಜರುಪಡಿಸಿದ್ರು. ಆದ್ರೆ ಅದೇ ಚೆಕ್ ಅಕ್ಟೋಬರ್ 30 ರಂದು ವಾಪಸ್ ಆಗಿದೆ. ವಾಪಸ್ ಆಗುವ ವೇಳೆ ಸುಧೀರ್ ಅಕೌಂಟ್ ನಿಂದ 118 ರುಪಾಯಿ ಕಟ್ ಮಾಡಲಾಗಿದೆ. ಎಲ್ಲಾ ಬೆಳವಣಿಗೆಯನ್ನು ಸುಧೀರ ಅವರು ನಮ್ಮ ಪ್ರತಿನಿಧಿ ಮಧು ಬಳಿ ವಿವರವಾಗಿ ವಿವರಿಸಿದ್ದಾರೆ ಕೇಳಿ. ಇನ್ನು ಚೆಕ್ ವಾಪಸ್ಸಾದ ಪ್ರಕರಣದ ಬಗ್ಗೆ ಸ್ಪಷ್ಟನೆ ಕೇಳಲು ಲಲಿತ ಕಲೆ ಹಾಗೂ ಕರಕುಶಲ ಉಪ ಸಮಿತಿ ಕಾರ್ಯದರ್ಶಿಯನ್ನು ಸಂಪರ್ಕಿಸುವ ಪ್ರಯತ್ನವೂ ನಡೆಯಿತು. ಆದರೆ ಅಧಿಕಾರಿ ಸಂಪರ್ಕಕ್ಕೆ ಸಿಗಲೇ ಇಲ್ಲ. ಬಹುಮಾನ ಬಂದರೂ ಬಹುಮಾನದ ಮೊತ್ತ ಮಾತ್ರ ಸಿಗಲೇ ಇಲ್ಲ. 

ಇದನ್ನೂ ವೀಕ್ಷಿಸಿ:  ಕಮಲ್ ಹುಟ್ಟುಹಬ್ಬಕ್ಕೆ ಇಂಡಿಯನ್ 2 ಗ್ಲಿಂಪ್ಸ್ ಉಡುಗೊರೆ: ‘ಸಕಲಕಲಾವಲ್ಲಭ’ನ ಜೊತೆಗೆ ಕನ್ನಡಿಗ ಸುದೀಪ್..!

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ