* ಉಡುಪಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಅಶೋಕ್
* ಕಂದಾಯ ಇಲಾಖೆಯಿಂದ ಇಂದೂ ಕೂಡ ಹಲವು ಕಾರ್ಯಕ್ರಮಗಳು
* 'ಮನೆ ಬಾಗಿಲಿಗೆ ಬಂತು ದಾಖಲೆ ನೋಡಿ' ಯೋಜನೆ ಯಶಸ್ವಿ
ಉಡುಪಿ(ಫೆ.20): ಮೊರಾರ್ಜಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು(ಭಾನುವಾರ) ಬೆಳಿಗ್ಗೆ ವಿದ್ಯಾರ್ಥಿನಿಯರಿಗೆ ಉಪಹಾರ ಬಡಿಸಿದ್ದಾರೆ. ವಸತಿ ಶಾಲೆಯ ಭೋಜನಾಲಯದಲ್ಲಿ ಸಚಿವರು ಫುಲ್ ಬ್ಯೂಸಿಯಾಗಿದ್ದರು. ಕಂದಾಯ ಇಲಾಖೆಯಿಂದ ಇಂದೂ ಕೂಡ ಹಲವು ಕಾರ್ಯಕ್ರಮಗಳಿವೆ. ಶೀಘ್ರವೇ 10 ದಿನಗಳ ಕಡತ ಯಜ್ಞ ನಡೆಸಲು ಕಂದಾಯ ಇಲಾಖೆ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ತಿಂಗಳು 'ಮನೆ ಬಾಗಿಲಿಗೆ ಬಂತು ದಾಖಲೆ ನೋಡಿ' ಯೋಜನೆ ಯಶಸ್ವಿಯಾಗಿದೆ.
Bengaluru: ಭೂಕಬಳಿಕೆ ಮಾಡಿದ್ರಾ ಜಮೀರ್: ನ್ಯಾಯಾಂಗ ನಿಂದನೆಯಾದ್ರೂ ಕೇರ್ ಮಾಡಿಲ್ವಾ?