ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಸಂಘರ್ಷ: ಕರಾವಳಿಗೂ ಹಬ್ಬಿದ ಮಹಿಷ ದಸರಾ ನಂಟು..!

ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಸಂಘರ್ಷ: ಕರಾವಳಿಗೂ ಹಬ್ಬಿದ ಮಹಿಷ ದಸರಾ ನಂಟು..!

Published : Oct 06, 2023, 10:48 AM IST

ಮೈಸೂರು ದಸರಾ ಎಷ್ಟೊಂದು ಸುಂದರ.. ಅದರಲ್ಲೂ ವಿಶ್ವವಿಖ್ಯಾತ ಜಂಬೂ ಸವಾರಿ ನೋಡೋಕೆ ಜನಸಾಗರವೆ ಹರಿದು ಬರುತ್ತೆ. ದಸರಾ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ. ಇದರ ಮಧ್ಯೆ ಮೈಸೂರು ದಸರಾ ಸಿದ್ಧತೆಗಿಂತಲೂ ಮಹಿಷ ದಸರಾ ಸದ್ದು ಮಾಡುತ್ತಿದೆ. ಪ್ರಗತಿಪರರ ಮೈಸೂರು ಮಹಿಷಾ ದಸರಾ ವಿರೋಧಿಸಿ ಬಿಜೆಪಿ ಚಾಮುಂಡಿ ಚಲೋಗೆ ಕರೆ ಕೊಟ್ಟಿದೆ. ಇದರ ಬೆನ್ನಲ್ಲೇ ಈಗ ಉಡುಪಿಯಲ್ಲೂ ಮಹಿಷ ದಸರಾ ದಂಗಲ್ ಶುರುವಾಗಿದೆ.

ಮೈಸೂರಿನ ಮಹಿಷ ದಸರಾ ಗದ್ದಲ ಈಗ ಕೃಷ್ಣನಗರಿ ಉಡುಪಿಯಲ್ಲಿಯೂ(Udupi) ಸದ್ದು ಮಾಡುತ್ತಿದೆ. ಉಡುಪಿಯ ಅಂಬೇಡ್ಕರ್ ಯುವಸೇನೆ ಉಡುಪಿಯಲ್ಲಿ ಮಹಿಷ ದಸರಾ(Mahisha dasara) ಆಯೋಜನೆಗೆ ಮುಂದಾಗಿದೆ. ಅಕ್ಟೋಬರ್ 15ಕ್ಕೆ ಉಡುಪಿಯಲ್ಲಿ ಮಹಿಷ ದಸರಾಗೆ ಯುವಸೇನೆ ಸಿದ್ಧತೆ ನಡೆಸಿದ್ದು, ಪ್ರಮುಖ ರಸ್ತೆಯಲ್ಲಿ ಟ್ಯಾಬ್ಲೋ(Tableau) ಮೂಲಕ ಮೆರವಣಿಗೆ ನಡೆಸಿ, ಬಳಿಕ  ವಿಚಾರ ಸಂಕಿರಣ ನಡೆಸಲು ಪ್ಲಾನ್ ಮಾಡಿದ್ದಾರೆ. ಪುರಾಣ ಮತ್ತು ಹಿಂದುತ್ವವನ್ನು ಮತ್ತು ಈಗ ನಡೆಯುವ ಆಚರಣೆಯನ್ನು ನಾವು ವಿರೋಧ ಮಾಡಲ್ಲ. ಆದ್ರೆ, ಇತಿಹಾಸಕಾರರು ಪಠ್ಯದಲ್ಲೂ ಕಥೆಯನ್ನು ತಿರುಚಿದ್ದಾರೆ. ಮಹಿಷ ಮಂಡಲದ ಪ್ರತಿಷ್ಠಿತ ದೊರೆಯನ್ನು ಖಳನಾಯಕನ ರೀತಿ ಚಿತ್ರಿಸಲಾಗಿದೆ ಅನ್ನೋದು ಮಹಿಷ ದಸರಾ ಪರ ನಿಂತವರ ವಾದ. ಅಕ್ಟೋಬರ್ 24ರಂದು ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಿಸಲು ಅರಮನೆ ನಗರಿ ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಪ್ರಗತಿಪರರ ಗುಂಪು ಮಹಿಷ ದಸರಾಕ್ಕೆ ಸಜ್ಜಾಗಿದ್ದು ಮೈಸೂರು ಮತ್ತು ಉಡುಪಿಯಲ್ಲಿ ಮತ್ತೊಂದು ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. 

ಇದನ್ನೂ ವೀಕ್ಷಿಸಿ:  ಹಿಂದಿ ಘೋಸ್ಟ್‌ ಟ್ರೈಲರ್‌ಗೆ ಕನ್ನಡಕ್ಕಿಂತ ಡಬಲ್, ತ್ರಿಬಲ್ ವೀಕ್ಷಣೆ! ಕನ್ಫ್ಯೂಸ್ ಆದ ಕನ್ನಡ ಪ್ರೇಕ್ಷಕ!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more