Dharwad: ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅಧಿಕಾರಿಗಳು?

Dharwad: ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅಧಿಕಾರಿಗಳು?

Suvarna News   | Asianet News
Published : Nov 25, 2021, 12:52 PM IST

*  ಫಲಾನುಭವಿಗಳಿಗೆ ಸಮರ್ಪಕವಾಗಿ ಹಂಚಿಕೆಯಾಗದ ಮೊಟ್ಟೆ
*  5 ತಿಂಗಳಲ್ಲಿ ಕೊಟ್ಟಿದ್ದು ಕೇವಲ ಎರಡೇ ತಿಂಗಳ ಮೊಟ್ಟೆ ಮಾತ್ರ
*  ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗಿರುವ ಯೋಜನೆ 
 

ಧಾರವಾಡ(ನ.25):  ಸರ್ಕಾರ ಮಕ್ಕಳಿಗೆ, ಮಹಿಳೆಯರಿಗೆ ಅಂತ ವಿಶೇಷ ಅನುದಾನದ ಮೂಲಕ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತೆ. ಆದ್ರೆ ಆ ಯೋಜನೆಗಳು ಮಾತ್ರ ಸರಿಯಾಗಿ ತಲುಪುತ್ತೋ ಇಲ್ಲವೋ ಅನ್ನೋದನ್ನ ಜನಪ್ರತಿನಿಧಿಗಳೇ ಗಮನಿಸಬೇಕು. ಇಲ್ಲದಿದ್ರೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಿಗುವ ಯಾವ ಸೌಲಭ್ಯವೂ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತೆ. 

ಹೌದು, ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಡುವ ಮೊಟ್ಟೆ ಸಹ ಸರಿಯಾಗಿ ಹಂಚಿಕೆಯಾಗಿಲ್ಲ. ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯಾದ್ಯಂತ ಅಂಗನವಾಡಿ ಮಕ್ಕಳು ಸೇರಿದಂತೆ, ಗರ್ಭಿಣಿಯರು, ಬಾಣಂತಿಯರಿಗೆ ತಿಂಗಳಿಗೆ 24 ಮೊಟ್ಟೆಗಳನ್ನ ನೀಡಲಾಗುತ್ತೆ. ಅದರಂತೆ ಮಕ್ಕಳಿಗೆ ವಾರದಲ್ಲಿ 3 ಬಾರಿ ಮೊಟ್ಟೆ ವಿತರಣೆಯಾಗುತ್ತೆ. ಆದ್ರೆ ಕಳೆದ 5 ತಿಂಗಳಲ್ಲಿ ಸರಿಯಾದ ಮೊಟ್ಟೆಗಳ ಹಂಚಿಕೆ ಆಗಿಯೇ ಇಲ್ಲ. ಇದರ ಬಗ್ಗೆ ಖುದ್ದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸಹ ದಾಸ್ತಾನು ಕೊಠಡಿಗೆ ಭೇಟಿ ನೀಡಿದಾಗ ಮೊಟ್ಟೆ ವಿತರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Karwar: ಕೈ ಮುಗಿತೀವಿ ಸೇತುವೆ ನಿರ್ಮಿಸಿಕೊಡಿ, ಸಚಿವ ಹೆಬ್ಬಾರ್‌ಗೆ ಬಾಲಕಿಯ ಮನವಿ

ಇನ್ನು ಕೋವಿಡ್ ಸಮಯದಲ್ಲಿ ನಮ್ಮನ್ನ ಯಾರು ಕೇಳೋರು ಅನ್ನೋ ಮಟ್ಟಕ್ಕೆ ತಲುಪಿದ್ದ ಕೆಲ ಅಧಿಕಾರಿಗಳು ಸರಿಯಾಗಿ ಮೊಟ್ಟೆ ವಿತರಣೆಯನ್ನೇ ಮಾಡಿಲ್ಲ. ಅದರಲ್ಲೂ ಗ್ರಾಮಾಂತರ ಭಾಗಗಳಲ್ಲಿ ಗರ್ಭಿಣಿಯರು ಮೊಟ್ಟೆ ಕೇಳಿದ್ರೆ ಸರಿಯಾಗಿ ವಿತರಣೆ ಸಹ ಆಗಿಲ್ಲ ಅನ್ನೋದು ಜನರು ಸಹ ಹೇಳಿಕೊಂಡಿದ್ದಾರೆ. ಪ್ರತಿ ಅಂಗನವಾಡಿಗೆ ಬಾಲ ವಿಕಾಸ ಸಮಿತಿ ರಚನೆ ಮಾಡಿ ಅದರ ಅಧ್ಯಕ್ಷ ಮತ್ತು ಅಂಗನವಾಡಿ ಶಿಕ್ಷಕಿಯ ಬ್ಯಾಂಕ್ ಖಾತೆಗೆ ಹಣ ಪ್ರತಿ ತಿಂಗಳು ಜಮವಾಣೆಯಾಗುತ್ತೆ. ಆದ್ರೆ ಕೊರೊನ ನಂತರ ಮೊಟ್ಟೆ ಹಣ ದುಬಾರಿಯಾಗಿದ್ದಕ್ಕೆ ಬಂದ ಹಣವನ್ನು ಸಹ ಹಾಗೆಯೇ ಇಟ್ಟುಕೊಂಡು, ಮೊಟ್ಟೆ ಖರೀದಿ ಸಹ ಮಾಡದೆ ಮಹಿಳೆಯರಿಗೆ ಮೊಟ್ಟೆಯನ್ನ ವಿತರಣೆ ಮಾಡಿಲ್ಲ.

ಒಟ್ಟಾರೆ ಮಕ್ಕಳಿಗೆ ಮಹಿಳೆಯರಿಗೆ ಆಗ ಸಿಗಬೇಕಿದ್ದ ಮೊಟ್ಟೆಯನ್ನ ಇದೀಗ ಕೊಡುವ ಪ್ರಯತ್ನ ಮಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಅಧಿಕಾರಿಗಳೇ ಮನವರಿಕೆ ಮಾಡಿಕೊಳ್ಳಬೇಕು. ದಣಿದಾಗ ನೀರು ಕೊಡದ ಅಧಿಕಾರಿಗಳು ದಣಿವಾರಿದ ಮೇಲೆ ಅನ್ನ ನೀಡೋಕೆ ಬಂದಂತಾಯಿತು ಅಧಿಕಾರಿಗಳ ಈ ಕಾರ್ಯ.
 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more