ಬುಡಕಟ್ಟು ಸಮುದಾಯದ ಯುವತಿಯಿಂದ ಧ್ವಜಾರೋಹಣ ಮಾಡಿಸಿದ ಎಸ್‌ಪಿ !

Aug 15, 2023, 12:33 PM IST

ಹಾಸನ: ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ತುಂಬಾ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು(Independence Day) ಆಚರಿಸಲಾಯಿತು. ಬುಡಕಟ್ಟು ಸಮುದಾಯದ ಯುವತಿಯಿಂದ ಧ್ವಜಾರೋಹಣವನ್ನು ಎಸ್ಪಿ ಹರಿರಾಮ್ ಶಂಕರ್(SP Hariram Shankar) ಮಾಡಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ತೆಗೆದುಕೊಂಡ ಯುವತಿಯಿಂದ ಧ್ವಜಾರೋಹಣ ಮಾಡಿಸಲಾಯಿತು. ಸಂಗೀತಾ ಎಂಬ ಯುವತಿಯಿಂದ ಧ್ವಜಾರೋಹಣ ಮಾಡಿಸಲಾಯಿತು. ಈಕೆ ಹಾಸನ(hassan) ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದವರು. ಎಸ್ಪಿ ಹರಿರಾಮ್ ಶಂಕರ್ ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ವೀಕ್ಷಿಸಿ: ಮಾನವೀಯತೆ, ಸಂವೇದನೆಯಿಂದ ಕೊರೊನಾವನ್ನು ನಾವು ಎದುರಿಸಿದ್ದೇವೆ: ಪ್ರಧಾನಿ ಮೋದಿ