ದೀಪಾವಳಿ ವಿಭಿನ್ನವಾಗಿ ಆಚರಿಸುವ ಗೌಳಿ ಸಮುದಾಯ: ಬಲಿಪಾಡ್ಯಮಿ ದಿನ ಎಮ್ಮೆ, ಕೋಣ ಸಿಂಗರಿಸಿ ಸಂಭ್ರಮ

ದೀಪಾವಳಿ ವಿಭಿನ್ನವಾಗಿ ಆಚರಿಸುವ ಗೌಳಿ ಸಮುದಾಯ: ಬಲಿಪಾಡ್ಯಮಿ ದಿನ ಎಮ್ಮೆ, ಕೋಣ ಸಿಂಗರಿಸಿ ಸಂಭ್ರಮ

Published : Nov 10, 2023, 12:19 PM IST

ಕುಂದಾನಗರಿ ಬೆಳಗಾವಿ ಬಹುಭಾಷಿಕರಿಗೆ ನೆಲೆ ಕೊಟ್ಟಿರುವ ಜಿಲ್ಲೆ. ಈ ಕಾರಣಕ್ಕೆ ಬೆಳಗಾವಿಯಲ್ಲಿ  ಬಹುಭಾಷಾ ಸಂಸ್ಕೃತಿಯನ್ನ ಕಾಣಬಹುದು. ಯಾವುದೇ ಹಬ್ಬ ಇದ್ದರೂ ವಿಭಿನ್ನವಾಗಿ ಆಚರಿಸಲಾಗುತ್ತೆ.

ಬೆಳಗಾವಿಯ(Belagavi) ಗೌಳಿ ಸಮುದಾಯ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತದೆ. ಪ್ರತಿ ವರ್ಷದ ಬಲಿಪಾಢ್ಯಮಿ(Balipadyami) ದಿನ ಎಮ್ಮೆ–ಕೋಣಗಳನ್ನು ಸಿಂಗರಿಸಿ ಸಂಭ್ರಮಿಸುವುದೇ ಇಲ್ಲಿನ ವಿಶಿಷ್ಟ ಆಚರಣೆ. ಬದುಕಿನ ಅವಿಭಾಜ್ಯ ಅಂಗವಾದ ಎಮ್ಮೆಗಳು ಜೀವನಪೂರ್ತಿ ತಮ್ಮನ್ನು ಸಾಕುತ್ವೆ. ಅವುಗಳಿಗೆ ಕೃತಜ್ಞತೆ ಸಲ್ಲಿಸಲು ಪಾಡ್ಯದಂದು ಈ ಹಬ್ಬ ಆಚರಿಸಲಾಗುತ್ತೆ. ಇಲ್ಲಿನ ಕ್ಯಾಂಪ್ ಪ್ರದೇಶ, ಟಿಳಕವಾಡಿ, ಮಂಗಳವಾರ ಪೇಟೆ, ಚವಾಟ ಗಲ್ಲಿ, ಸರ್ದಾರ್ ಮೈದಾನ ಸೇರಿ ಹಲವಡೆ ಎಮ್ಮೆಗಳ ಓಟದ ಸ್ಪರ್ಧೆಯನ್ನು ಆಚರಿಸ್ತಾರೆ. ಇನ್ನು ಬಲಿಪಾಡ್ಯಮಿ ದಿನ  ಮನೆಯ ಅಂಗಳದಲ್ಲಿ ಕಿಚ್ಚು ಹಾಯಿಸುವುದೇ ತಡ, ಯುವಕರು ಎಮ್ಮೆಗಳ ಮುಂದೆ ಓಡಲು ಶುರು ಮಾಡುತ್ತಾರೆ. ಅವರನ್ನು ಬೆನ್ನಟ್ಟಿ ಎಮ್ಮೆಗಳೂ ಓಡುತ್ವೆ. ಎಮ್ಮೆಗಳ ಕಾಲಿಗೆ ಕಟ್ಟಿದ ಗೆಜ್ಜೆ, ಕೊರಳಿಗೆ ಹಾಕಿದ ಕವಡೆಯ  ಶಬ್ಧ ಕೇಳುವುದೇ ಇಲ್ಲಿನ ಜನಕ್ಕೆ ಆನಂದ . ಸಿಳ್ಳೆ, ಚಪ್ಪಾಳೆ, ಕೇಕೆ ಹಾಕಿದಾಗ ಗೌಳಿಗರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುತ್ತೆ. ಬಹುಭಾಷಾ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಗುಜರಾತಿಗಳು, ಬಂಗಾಳಿಗಳು, ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದೀಪಾವಳಿಯಲ್ಲಿ ಸ್ಥಳೀಯ ಧಾರ್ಮಿಕ ಪದ್ಧತಿ ಅನುಸರಿಸುವ ಜತೆಗೆ, ತಮ್ಮ ನಾಡಿನ ಸಂಸ್ಕೃತಿಯನ್ನೂ ಅನಾವರಣಗೊಳಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯಾದ್ಯಂತ ಸಿದ್ಧತೆ: ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more