ಬಜೆಟ್‌ನಲ್ಲಿ "ಆರ್ಥಿಕ ಶಿಸ್ತು" ಮೀರಿದ್ರಾ "ನೀತಿ"ರಾಮಯ್ಯ..?: ಬಿಜೆಪಿಯ 17 ಯೋಜನೆ, ಕಾಯ್ದೆಗಳಿಗೆ ಸಿದ್ದು ಬ್ರೇಕ್

ಬಜೆಟ್‌ನಲ್ಲಿ "ಆರ್ಥಿಕ ಶಿಸ್ತು" ಮೀರಿದ್ರಾ "ನೀತಿ"ರಾಮಯ್ಯ..?: ಬಿಜೆಪಿಯ 17 ಯೋಜನೆ, ಕಾಯ್ದೆಗಳಿಗೆ ಸಿದ್ದು ಬ್ರೇಕ್

Published : Jul 09, 2023, 12:33 PM IST

ಚರಿತ್ರೆ ಕಂಡು ಕೇಳರಿಯದ ಬಜೆಟ್‌ನಲ್ಲಿ ರೋಚಕ ಲೆಕ್ಕಾಚಾರ..!
ರಾಜ್ಯವನ್ನು ದಿವಾಳಿಯಾಗಲು ಬಿಡಲಾರೆ ಸಿದ್ದರಾಮಯ್ಯ ಶಪಥ..!
ಬಜೆಟ್ ಮಂಡಿಸಿದ ಮರುದಿನವೇ ಪ್ರತಿಜ್ಞೆ ಮಾಡಿದ ಸಿಎಂ ಸಿದ್ದು

ಕೊಂಕು ಮಾತನ್ನೇ ಚಾಲೆಂಜಾಗಿ ತೆಗೆದುಕೊಂಡಿದ್ದ ಸಿದ್ದರಾಮಯ್ಯನವರೀಗ(Siddaramaiah) ರಾಜ್ಯದಲ್ಲೇ ಅತ್ಯಂತ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ದಾಖಲೆವೀರ. ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರೋದು ದಾಖಲೆಯ 14ನೇ ಬಜೆಟ್. ಇಷ್ಟೊಂದು ಸಂಖ್ಯೆಯ ಬಜೆಟ್‌ಗಳನ್ನು( budget) ಮಂಡಿಸಿದ ಮತ್ತೊಬ್ಬ ಮಂತ್ರಿ, ಮುಖ್ಯಮಂತ್ರಿ ರಾಜ್ಯದಲ್ಲೇ ಇಲ್ಲ. ಸಿದ್ದರಾಮಯ್ಯ ಅಂದ್ರೆ ಲೆಕ್ಕ, ಲೆಕ್ಕ ಅಂದ್ರೆ ಸಿದ್ದರಾಮಯ್ಯ. ಕಬ್ಬಿಣದ ಕಡಲೆಗಳಂತಿರೋ ಅಂಕಿ ಅಂಶಗಳು ಸಿದ್ದರಾಮಯ್ಯನವರಿಗೆ ಸದಾ ಕರತಲಾಮಲಕ. ಹೀಗಾಗಿ ಅವರನ್ನು ಲೆಕ್ಕರಾಮಯ್ಯ, ನೀತಿರಾಮಯ್ಯ ಅಂತ ಕರೀತಾರೆ. ಕಳೆದ ಫೆಬ್ರವರಿಯಲ್ಲಿ ಆಗಿನ ಬಿಜೆಪಿ(BJP) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ₹3,09,182  ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ರೆ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರೋ ಸಿದ್ದರಾಮಯ್ಯ ₹3,27,747 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಅಂದ್ರೆ ನಾಲ್ಕೇ ತಿಂಗಳುಗಳ ಅಂತರದಲ್ಲಿ ಮಂಡನೆಯಾದ ರಾಜ್ಯ ಬಜೆಟ್ ಗಾತ್ರದಲ್ಲಿ ಏರಿಕೆಯಾಗಿರುವ ಮೊತ್ತ ₹18,565 ಕೋಟಿ ರೂ.ಆಗಿದೆ. ಅಷ್ಟೇ ಅಲ್ಲ ಕೈ ಸರ್ಕಾರದ 11 ಹಳೇ ಯೋಜನೆಗಳಿಗೆ ಮರುಜೀವ ಕೊಟ್ಟಿದ್ದಾರೆ. ಬಿಜೆಪಿಯ 17 ಯೋಜನೆಗಳಿಗೆ ಬ್ರೇಕ್‌ ಹಾಕಿದ್ದಾರೆ.  

ಇದನ್ನೂ ವೀಕ್ಷಿಸಿ: ಜೈನಮುನಿಗಳಿಗೆ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು: ಗುಣಧರನಂದಿ ಮಹಾರಾಜ್‌ ಸ್ವಾಮೀಜಿ

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more