ಬಜೆಟ್‌ನಲ್ಲಿ "ಆರ್ಥಿಕ ಶಿಸ್ತು" ಮೀರಿದ್ರಾ "ನೀತಿ"ರಾಮಯ್ಯ..?: ಬಿಜೆಪಿಯ 17 ಯೋಜನೆ, ಕಾಯ್ದೆಗಳಿಗೆ ಸಿದ್ದು ಬ್ರೇಕ್

ಬಜೆಟ್‌ನಲ್ಲಿ "ಆರ್ಥಿಕ ಶಿಸ್ತು" ಮೀರಿದ್ರಾ "ನೀತಿ"ರಾಮಯ್ಯ..?: ಬಿಜೆಪಿಯ 17 ಯೋಜನೆ, ಕಾಯ್ದೆಗಳಿಗೆ ಸಿದ್ದು ಬ್ರೇಕ್

Published : Jul 09, 2023, 12:33 PM IST

ಚರಿತ್ರೆ ಕಂಡು ಕೇಳರಿಯದ ಬಜೆಟ್‌ನಲ್ಲಿ ರೋಚಕ ಲೆಕ್ಕಾಚಾರ..!
ರಾಜ್ಯವನ್ನು ದಿವಾಳಿಯಾಗಲು ಬಿಡಲಾರೆ ಸಿದ್ದರಾಮಯ್ಯ ಶಪಥ..!
ಬಜೆಟ್ ಮಂಡಿಸಿದ ಮರುದಿನವೇ ಪ್ರತಿಜ್ಞೆ ಮಾಡಿದ ಸಿಎಂ ಸಿದ್ದು

ಕೊಂಕು ಮಾತನ್ನೇ ಚಾಲೆಂಜಾಗಿ ತೆಗೆದುಕೊಂಡಿದ್ದ ಸಿದ್ದರಾಮಯ್ಯನವರೀಗ(Siddaramaiah) ರಾಜ್ಯದಲ್ಲೇ ಅತ್ಯಂತ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ದಾಖಲೆವೀರ. ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರೋದು ದಾಖಲೆಯ 14ನೇ ಬಜೆಟ್. ಇಷ್ಟೊಂದು ಸಂಖ್ಯೆಯ ಬಜೆಟ್‌ಗಳನ್ನು( budget) ಮಂಡಿಸಿದ ಮತ್ತೊಬ್ಬ ಮಂತ್ರಿ, ಮುಖ್ಯಮಂತ್ರಿ ರಾಜ್ಯದಲ್ಲೇ ಇಲ್ಲ. ಸಿದ್ದರಾಮಯ್ಯ ಅಂದ್ರೆ ಲೆಕ್ಕ, ಲೆಕ್ಕ ಅಂದ್ರೆ ಸಿದ್ದರಾಮಯ್ಯ. ಕಬ್ಬಿಣದ ಕಡಲೆಗಳಂತಿರೋ ಅಂಕಿ ಅಂಶಗಳು ಸಿದ್ದರಾಮಯ್ಯನವರಿಗೆ ಸದಾ ಕರತಲಾಮಲಕ. ಹೀಗಾಗಿ ಅವರನ್ನು ಲೆಕ್ಕರಾಮಯ್ಯ, ನೀತಿರಾಮಯ್ಯ ಅಂತ ಕರೀತಾರೆ. ಕಳೆದ ಫೆಬ್ರವರಿಯಲ್ಲಿ ಆಗಿನ ಬಿಜೆಪಿ(BJP) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ₹3,09,182  ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ರೆ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರೋ ಸಿದ್ದರಾಮಯ್ಯ ₹3,27,747 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಅಂದ್ರೆ ನಾಲ್ಕೇ ತಿಂಗಳುಗಳ ಅಂತರದಲ್ಲಿ ಮಂಡನೆಯಾದ ರಾಜ್ಯ ಬಜೆಟ್ ಗಾತ್ರದಲ್ಲಿ ಏರಿಕೆಯಾಗಿರುವ ಮೊತ್ತ ₹18,565 ಕೋಟಿ ರೂ.ಆಗಿದೆ. ಅಷ್ಟೇ ಅಲ್ಲ ಕೈ ಸರ್ಕಾರದ 11 ಹಳೇ ಯೋಜನೆಗಳಿಗೆ ಮರುಜೀವ ಕೊಟ್ಟಿದ್ದಾರೆ. ಬಿಜೆಪಿಯ 17 ಯೋಜನೆಗಳಿಗೆ ಬ್ರೇಕ್‌ ಹಾಕಿದ್ದಾರೆ.  

ಇದನ್ನೂ ವೀಕ್ಷಿಸಿ: ಜೈನಮುನಿಗಳಿಗೆ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು: ಗುಣಧರನಂದಿ ಮಹಾರಾಜ್‌ ಸ್ವಾಮೀಜಿ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more