Award for Puneeth Rajkumar; ಅನುಭವ ಮಂಟಪದಲ್ಲಿ ಬಸವಶ್ರೀ ಪ್ರದಾನ

Nov 4, 2021, 5:48 PM IST

ಚಿತ್ರದುರ್ಗ (ನ . 04)  ಅಗಲಿದ (Sandalwood) ನಾಯಕ ನಟ  ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಪ್ರತಿಷ್ಠಿತ 'ಬಸವಶ್ರೀ' (Basavashri Award ) ಪುರಸ್ಕಾರ ಘೋಷಿಸಲಾಗಿದೆ.  ಚಿತ್ರದುರ್ಗ(Chitradurga) ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು  ವಿಚಾರ ತಿಳಿಸಿದ್ದು ಬಸವ ಜಯಂತಿ ದಿನ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೆಟ್ಟ ತೀರ್ಮಾನ ತೆಗೆದುಕೊಳ್ಳಬೇಡಿ; ಅಭಿಮಾನಿಗಳಿಗೆ ಮನವಿ

ಮುಂಬರುವ ಬಸವ ಜಯಂತಿಯಂದು ಮರಣೋತ್ತರವಾಗಿ ಪ್ರನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು . ಪುನೀತ್ ಪತ್ನಿ ಅಶ್ವಿನಿ ಅವರಿಗೆ ಆಹ್ವಾನ ನೀಡಲಾಗುತ್ತಿದೆ. ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.