ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ

ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ

Published : Jan 25, 2025, 08:20 PM IST

ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಕುಟುಂಬವೊಂದರಲ್ಲಿ ನಡೆದ ದುರಂತ ಘಟನೆಯನ್ನು ಈ ವರದಿ ವಿವರಿಸುತ್ತದೆ. ಕೆಲಸಕ್ಕೆಂದು ಹೋದ ಮಹಿಳೆ ವಾಪಸ್ ಬಾರದೇ ಇದ್ದಾಗ, ಆಕೆಯ ಡೆಡ್ ಬಾಡಿ ಪತ್ತೆಯಾಗುತ್ತದೆ. ಮತ್ತೊಂದು ಪ್ರಕರಣದಲ್ಲಿ, ಗಂಡ ಹೆಂಡತಿಯ ಜಗಳ ದುರಂತ ಅಂತ್ಯ ಕಾಣುತ್ತದೆ.

ಅದು ಬಾಂಗ್ಲಾದೇಶದ ಕುಟುಂಬ. ಅದೇಗೆ ಯಾವಾಗ ಭಾರತಕ್ಕೆ ಬಂತೋ ಗೊತ್ತಿಲ್ಲ ಆದ್ರೆ ಬೆಂಗಳೂರಿನಲ್ಲಿ ಒಂದು ಪುಟ್ಟ ಗೂಡು ಮಾಡಿಕೊಂಡು ನೆಲಸಿತ್ತು. ಗಂಡ ಬಿಬಿಎಂಪಿಯಲ್ಲಿ ಡಿ ದರ್ಜೆಯ ನೌಕರನ್ನಾಗಿದ್ರೆ. ಹೆಂಡತಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೂ ಅವರಿಗೆ ಇಬ್ಬರು ಮಕ್ಕಳು. ಕಡುಬಡತನವಿದ್ದರೂ ನೆಮ್ಮದಿಯ ಜೀವನ ಅವರದ್ದಾಗಿತ್ತು. ಆದ್ರೆ ಆವತ್ತೊಂದು ದಿನ ಹೆಂಡತಿ ಕೆಲಸಕ್ಕೆ ಅಂತ ಹೋದವಳು ವಾಪಸ್​ ಬರೋದೇ ಇಲ್ಲ. ಗಂಡ ಹುಡುಕಬಾರದ ಜಾಗವನ್ನೆಲ್ಲಾ ಹುಡುಕಿ ಪೊಲೀಸ್​ ಕಂಪ್ಲೆಂಟ್​​ ಅನ್ನೂ ಕೊಟ್ಟ. ಆದ್ರೆ ಕೇಸ್​​ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀರಿಗೆ ಆ ಮಹಿಳೆಯ ಡೆಡ್​​ ಬಾಡಿ ಸಿಗುತ್ತೆ. ಹಾಗಾದ್ರೆ ಆ ಹೆಣ್ಣು ಮಗಳಿಗೆ ಏನಾಯ್ತು? ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ ಬಾಂಗ್ಲಾ ಮಹಿಳೆಯ ಮರ್ಡರ್​​ ಕಹನಿಯೇ ಇವತ್ತಿನ ಎಫ್​.ಐ.ಆರ್​​. 

ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಒಬ್ಬ ಮಗ ಕೂಡ ಇದ್ದ. ಗಂಡ ಕ್ಯಾಬ್​​ ಡ್ರೈವರ್​​ ಆದ್ರೆ, ಹೆಂಡತಿ ಮಗನನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಎರಡು ವರ್ಷದಿಂದೇಚೆಗೆ ಗಂಡ ಹೆಂಡಿರ ನಡುವೆ ವೈಮನಸ್ಸು ಶುರುವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜಗಳ. ನೋಡೋವರೆಗೂ ನೋಡಿದ ಹೆಂಡತಿ ಸೀದಾ ತವರು ಮನೆಗೆ ಹೋಗಿ ಕೂತುಬಿಡ್ತಾಳೆ. ಗಂಡ ಕೂಡ ತಾಯಿ ಮನೆಯಲ್ಲೇ ಇರ್ತಾನೆ. ಆದ್ರೆ ಅವತ್ತು ಏನಾಯ್ತೋ ಏನೋ ಹೆಂಡತಿಯನ್ನ ಕರೆದುಕೊಂಡು ಬರಲೇ ಬೇಕು ಅಂತ ಆಕೆಯ ಮನೆಗೆ ಹೋಗಿದ್ದಾನೆ. ಆದ್ರೆ ಹೆಂಡತಿ ಮಾತ್ರ ಆತ ಎಷ್ಟೇ ಕರೆದರು ಬರೋದಿಲ್ಲ. ನೋಡೋವರೆಗೂ ನೋಡಿದ ಗಂಡ ಸೀದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡುಬಿಡ್ತಾನೆ. 
 
ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೂ ಅಂತಾರೆ. ಒಂದು ವೇಳೆ ಉಂಡು ಮಲಗಿದ ಮೇಲೆ ಮುಂದುವರೆದರೆ ಏನಾಗುತ್ತೆ ಅನ್ನೋದಕ್ಕೆ ಈ ಮಂಜುನಾಥನ ಕಥೆಯೇ ಸಾಕ್ಷಿ.

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more