ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ

ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ

Published : Jan 25, 2025, 08:20 PM IST

ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಕುಟುಂಬವೊಂದರಲ್ಲಿ ನಡೆದ ದುರಂತ ಘಟನೆಯನ್ನು ಈ ವರದಿ ವಿವರಿಸುತ್ತದೆ. ಕೆಲಸಕ್ಕೆಂದು ಹೋದ ಮಹಿಳೆ ವಾಪಸ್ ಬಾರದೇ ಇದ್ದಾಗ, ಆಕೆಯ ಡೆಡ್ ಬಾಡಿ ಪತ್ತೆಯಾಗುತ್ತದೆ. ಮತ್ತೊಂದು ಪ್ರಕರಣದಲ್ಲಿ, ಗಂಡ ಹೆಂಡತಿಯ ಜಗಳ ದುರಂತ ಅಂತ್ಯ ಕಾಣುತ್ತದೆ.

ಅದು ಬಾಂಗ್ಲಾದೇಶದ ಕುಟುಂಬ. ಅದೇಗೆ ಯಾವಾಗ ಭಾರತಕ್ಕೆ ಬಂತೋ ಗೊತ್ತಿಲ್ಲ ಆದ್ರೆ ಬೆಂಗಳೂರಿನಲ್ಲಿ ಒಂದು ಪುಟ್ಟ ಗೂಡು ಮಾಡಿಕೊಂಡು ನೆಲಸಿತ್ತು. ಗಂಡ ಬಿಬಿಎಂಪಿಯಲ್ಲಿ ಡಿ ದರ್ಜೆಯ ನೌಕರನ್ನಾಗಿದ್ರೆ. ಹೆಂಡತಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೂ ಅವರಿಗೆ ಇಬ್ಬರು ಮಕ್ಕಳು. ಕಡುಬಡತನವಿದ್ದರೂ ನೆಮ್ಮದಿಯ ಜೀವನ ಅವರದ್ದಾಗಿತ್ತು. ಆದ್ರೆ ಆವತ್ತೊಂದು ದಿನ ಹೆಂಡತಿ ಕೆಲಸಕ್ಕೆ ಅಂತ ಹೋದವಳು ವಾಪಸ್​ ಬರೋದೇ ಇಲ್ಲ. ಗಂಡ ಹುಡುಕಬಾರದ ಜಾಗವನ್ನೆಲ್ಲಾ ಹುಡುಕಿ ಪೊಲೀಸ್​ ಕಂಪ್ಲೆಂಟ್​​ ಅನ್ನೂ ಕೊಟ್ಟ. ಆದ್ರೆ ಕೇಸ್​​ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀರಿಗೆ ಆ ಮಹಿಳೆಯ ಡೆಡ್​​ ಬಾಡಿ ಸಿಗುತ್ತೆ. ಹಾಗಾದ್ರೆ ಆ ಹೆಣ್ಣು ಮಗಳಿಗೆ ಏನಾಯ್ತು? ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ ಬಾಂಗ್ಲಾ ಮಹಿಳೆಯ ಮರ್ಡರ್​​ ಕಹನಿಯೇ ಇವತ್ತಿನ ಎಫ್​.ಐ.ಆರ್​​. 

ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಒಬ್ಬ ಮಗ ಕೂಡ ಇದ್ದ. ಗಂಡ ಕ್ಯಾಬ್​​ ಡ್ರೈವರ್​​ ಆದ್ರೆ, ಹೆಂಡತಿ ಮಗನನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಎರಡು ವರ್ಷದಿಂದೇಚೆಗೆ ಗಂಡ ಹೆಂಡಿರ ನಡುವೆ ವೈಮನಸ್ಸು ಶುರುವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜಗಳ. ನೋಡೋವರೆಗೂ ನೋಡಿದ ಹೆಂಡತಿ ಸೀದಾ ತವರು ಮನೆಗೆ ಹೋಗಿ ಕೂತುಬಿಡ್ತಾಳೆ. ಗಂಡ ಕೂಡ ತಾಯಿ ಮನೆಯಲ್ಲೇ ಇರ್ತಾನೆ. ಆದ್ರೆ ಅವತ್ತು ಏನಾಯ್ತೋ ಏನೋ ಹೆಂಡತಿಯನ್ನ ಕರೆದುಕೊಂಡು ಬರಲೇ ಬೇಕು ಅಂತ ಆಕೆಯ ಮನೆಗೆ ಹೋಗಿದ್ದಾನೆ. ಆದ್ರೆ ಹೆಂಡತಿ ಮಾತ್ರ ಆತ ಎಷ್ಟೇ ಕರೆದರು ಬರೋದಿಲ್ಲ. ನೋಡೋವರೆಗೂ ನೋಡಿದ ಗಂಡ ಸೀದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡುಬಿಡ್ತಾನೆ. 
 
ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೂ ಅಂತಾರೆ. ಒಂದು ವೇಳೆ ಉಂಡು ಮಲಗಿದ ಮೇಲೆ ಮುಂದುವರೆದರೆ ಏನಾಗುತ್ತೆ ಅನ್ನೋದಕ್ಕೆ ಈ ಮಂಜುನಾಥನ ಕಥೆಯೇ ಸಾಕ್ಷಿ.

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more