ಸಾವಿನ ಟಿಟಿ ಬಗ್ಗೆ ಪ್ರತ್ಯಕ್ಷದರ್ಶಿ ಹೇಳೋದೇನು..? ಈ ಅಪಘಾತದ ಹಿಂದಿರೋ ಸತ್ಯಾಸತ್ಯತೆ ಏನು..?

ಸಾವಿನ ಟಿಟಿ ಬಗ್ಗೆ ಪ್ರತ್ಯಕ್ಷದರ್ಶಿ ಹೇಳೋದೇನು..? ಈ ಅಪಘಾತದ ಹಿಂದಿರೋ ಸತ್ಯಾಸತ್ಯತೆ ಏನು..?

Published : Jun 29, 2024, 08:56 AM IST

ಹೆಣಗಳ ಮಧ್ಯೆಯೇ ಬಾಲಕನ ನರಳಾಟ..! 
ಹೆದ್ದಾರಿಯಲ್ಲಿ ಜವರಾಯನ ಸಾವಿನ ಆಟ..!
ಜನರ ಪಾಲಿಗೆ ಆಗಿತ್ತು ಇದು ಸಾವಿನ ಟಿಟಿ..!

ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ(Accident) ಒಬ್ಬರು ಸೀಟಿನಡಿಯಲ್ಲಿ ಅಪ್ಪಚ್ಚಿಯಾಗಿ ಹೋಗಿದ್ರೆ, ಇನ್ನು ಕೆಲವರು ಕೂತ ಸೀಟಿನಲ್ಲೇ ಶವವಾಗಿ ಹೋಗಿದ್ದಾರೆ. ಮತ್ತೆ ಕೆಲವರು ಒಬ್ಬರ ಮೇಲೆ ಒಬ್ಬರು ಬಿದ್ದು ಅಲ್ಲೇ ಹೆಣವಾಗಿ ಹೋಗಿದ್ದಾರೆ. ಇವರ ಈ ಮೃತ ದೇಹವನ್ನ ಹೊರ ತೆಗೆಯುವುದೇ ದೊಡ್ಡ ಸಾಹಸದ ಕೆಲಸವಾಗಿತ್ತು. ಬೆಳ್ಳಂಬೆಳಿಗ್ಗೆ 5 ಗಂಟೆಗೆ ಪೊಲೀಸರು ಹಾಗೂ ಕೆಲ ರಕ್ಷಣಾದಳದವರು ತಕ್ಷಣವೇ ಘಟನಾ ಸ್ಥಳಕ್ಕೆ ಬಂದು, ಟಿಟಿಯಲ್ಲಿರುವವರ ದೇಹವನ್ನ ಹೊರ ತೆಗೆದಿದ್ದಾರೆ. ಕೊನೆಯುಸಿರು ಹಿಡಿದುಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದವರನ್ನ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ( Bengaluru-Pune National Highway) ಬೆಳ್ಳಂಬೆಳಿಗ್ಗೆ ನಡೆದ ದುರ್ಘಟನೆ ಇದು. ಈ ಘಟನೆಯ ಸ್ವರೂಪ ನೋಡ್ತಿದ್ರೆ, ಆ ಜವರಾಯನಿಗೆ ದಯೇಯೇ ಇಲ್ಲ ಅಂತ ಅನಿಸಿಬಿಡುತ್ತೆ. ಈಗ ಊರಲ್ಲಿರುವ ಇವರ ಸಂಬಂಧಿಕರು ಕಥೆ ಹೇಗಾಗಿರಬೇಡ. ಅದರಲ್ಲೂ ಒಮ್ಮಲೆ 13 ಜನರನ್ನ ಕಳೆದುಕೊಂಡು ಎಲ್ಲರೂ ಶಾಕ್‌ನಲ್ಲಿ ಇದ್ದಾರೆ. ಅಸಲಿಗೆ ಮೃತರ ಪೈಕಿ ಆದರ್ಶ್ ಅನ್ನುವವರು ಕಳೆದ ಒಂದುವರೆ ತಿಂಗಳ ಹಿಂದೆ ಹೊಸ ಟಿಟಿಯನ್ನ ಖರೀದಿ ಮಾಡಿದ್ದಾರೆ. ಅದರಲ್ಲಿ ತಮ್ಮ ಕುಟುಂಬದವರನ್ನ ಹಾಗೂ ಕೆಲ ಸ್ನೇಹಿತರನ್ನ ಕರೆದುಕೊಂಡು ದೇವರ ಪೂಜೆ ಸಲ್ಲಿಸಲೆಂದು ಪ್ರವಾಸಕ್ಕೆ ಹೊರಟಿದ್ದಾರೆ. ಸೋಮವಾರ ಸುಮಾರು 12 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇವಸ್ಥಾನವನ್ನ ತಲುಪಿದ್ದಾರೆ. ಅಲ್ಲಿ ವಾಹನ ಪೂಜೆ ಮಾಡಿಸಿ ಬಳಿಕ ತುಳಜಾಭವಾನಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದಿದ್ದಾರೆ. ಆ ನಂತರ ಕಲಬುರ್ಗಿಯ ಜಿಲ್ಲೆಯ ಚಿಂಚೋಳ್ಳಿ ಮಾಯಮ್ಮನ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರ್ಶ್ ಇದನ್ನು ತಮ್ಮ ವಾಟ್ಸ್ ಅಪ್ ಸ್ಟೇಟಸ್‌ನಲ್ಲಿ ಕೂಡ ಹಾಕಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಕರ್ಕಟಕ ರಾಶಿಗೆ ಬುಧನ ಪ್ರವೇಶವಾಗಲಿದ್ದು, ಇದರಿಂದ ದೊರೆಯುವ ಫಲವೇನು ಗೊತ್ತಾ ?

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
Read more