ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

Published : Jan 24, 2025, 09:04 AM IST

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ.

ಬೆಂಗಳೂರು(ಜ.24):  ಚೋಟಾ ನವಾಬನಿಗೆ 15,000 ಕೋಟಿಯ ಆಸ್ತಿ ಕಂಟಕ..! ಭೋಪಾಲ್ ನವಾಬ.. ಪಟೌಡಿ ಖಾನ್ ಸಾಬ್.. ಪಾಕ್ ಲಿಂಕ್..! ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ..? ಏನಿದು ಶತ್ರು ಸಂಪತ್ತು..? ಏನದು 15,000 ಕೋಟಿ. ಆಸ್ತಿ ಚರಿತ್ರೆ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಶತ್ರು ಆಸ್ತಿಯ ಒಡೆಯ.

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಹಾಗಿದ್ರೆ ಮಧ್ಯಪ್ರದೇಶ್​ ಹೈಕೋರ್ಟ್​ ಕೊಟ್ಟ ಈ ಶಾಕ್​ ಹಿಂದಿನ ಕತೆ ಏನು? ಸೈಫ್​ ಅಲಿ ಖಾನ್​ ಹೆಸರಿನ ಅಷ್ಟೊಂದು ದೊಡ್ಡ ಮೊತ್ತದ ಆಸ್ತಿ ಕೈತಪ್ಪಿ ಹೋಗಲು ಸಾಧ್ಯವಿದೆಯಾ ಅನ್ನೋದರ ಕುರಿತು ವಿಶೇಷ ವರದಿಯೊಂದನ್ನು ಇಲ್ಲಿ ನೋಡೋಣ. 

ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!

ಕೇಂದ್ರ ಸರ್ಕಾರ 15 ಸಾವಿರ ಕೋಟಿ ಸಂಪತ್ತನ್ನು ಶತ್ರು ಸಂಪತ್ತು ಎಂದು ಘೋಷಿಸಿದೆ. ಹಾಗಿದ್ರೆ ಈ ಎಲ್ಲ ಸಂಪತ್ತು ಸೈಫ್​ ಅಲಿಖಾನ್​ ಕೈ ತಪ್ಪಿ ಕೇಂದ್ರ ಸರ್ಕಾರದ ವಶವಾಗುತ್ತಾ? ಅಥವಾ ಇದರಲ್ಲಿ ಏನಾದ್ರು ತೊಡಕುಗಳಿವೆಯಾ?. ಹಾಗಿದ್ರೆ ಪಟೌಡಿ ಕುಟುಂಬದ ಒಟ್ಟು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತಾ? ಇಷ್ಟೊಂದು ಮೌಲ್ಯದ ಆಸ್ತಿಯನ್ನು ಸೈಫ್​ ಅಲಿಖಾನ್​ ಬಿಟ್ಟು ಕೊಡ್ತಾರಾ ಅಥವಾ ಹೋರಾಟ ಮಾಡ್ತಾರಾ?. 
ಹಾಗಿದ್ರೆ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರರ್ಕಾರ ಉತ್ತರವೇನು? ಕೇಂದ್ರ ಸರ್ಕಾರದ ಬಳಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ. ಭೋಪಾಲ್​ ನವಾಬ್​​ನಾಗಿದ್ದ ಹಮೀದುಲ್ಲಾ ಸುಲ್ತಾನ್​​ ಹಿರಿ ಮಗಳು ಅಬಿದಾ ಸುಲ್ತಾನ್​ ಪಾಕಿಸ್ತಾನಕ್ಕೆ ಮದುವೆಯಾಗಿ ಹೋಗಿದ್ದು 1950ರಲ್ಲಿ ಆದ್ರೆ ಈ ಕಾನೂನು ಜಾರಿಗೆ ಬಂದಿದ್ದು 1968ರಲ್ಲಿ ಹೀಗಿದ್ಮೇಲೆ ಈಗ ಈ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪಟೌಡಿ ಫ್ಯಾಮಿಲಿ ಬೆಂಬಲಿಗರು ಕೇಳ್ತಿದ್ದಾರೆ. ಹಾಗಿದ್ರೆ ಈ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರವೇನು ಗೊತ್ತಾ? 

ಒಟ್ಟಿನಲ್ಲಿ ಈ ಪ್ರಕರಣ ಕುರಿತು ದೀರ್ಘ ಕಾಲದ ಕಾನೂನು ಹೋರಾಟ ನಡೆಯೋದಂತೂ ಪಕ್ಕಾ. ಆದ್ರೆ ಕಾನೂನು ಹೋರಾಟದ ಕೊನೆಯಲ್ಲಿ ಗೆಲುವು ಯಾರದ್ದು ಅನ್ನೋದನ್ನು ನೋಡಬೇಕಿದೆ. 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more