Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!

Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!

Published : Dec 01, 2025, 07:37 PM ISTUpdated : Dec 01, 2025, 07:38 PM IST

ಹೈದರಾಬಾದ್‌ನ ಪೂರ್ಣಿಮಾ ಶಾಲೆಯಲ್ಲಿ, ಬಟ್ಟೆಯಲ್ಲಿ ಮೂತ್ರ ಮಾಡಿದ್ದಕ್ಕೆ ನರ್ಸರಿ ಬಾಲಕಿಯನ್ನು ಶಾಲೆಯ ಆಯಾ ಕ್ರೂರವಾಗಿ ಥಳಿಸಿದ್ದಾಳೆ. ಸ್ಥಳೀಯರು ಚಿತ್ರೀಕರಿಸಿದ ಈ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೈದರಾಬಾದ್‌ (ಡಿ.1):ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆಯೊಂದರಲ್ಲಿ, ಹೈದರಾಬಾದ್‌ನ ಶಾಪುರ್ ನಗರದ ಪೂರ್ಣಿಮಾ ಶಾಲೆಯ ನರ್ಸರಿ ಬಾಲಕಿಯನ್ನು ಶಾಲೆಯ ಆಯಾ, ಕ್ರೂರವಾಗಿ ಥಳಿಸಿ ನೆಲಕ್ಕೆ ತಳ್ಳಿದ ಘಟನೆ ನವೆಂಬರ್ 29 ರ ಶನಿವಾರ ನಡೆದಿದೆ. ನಂತರ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರೊಬ್ಬರು ಹಲ್ಲೆಯ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಒಂದು ಹೆಣ್ಣಾಗ್ಲಿ ಅಂತ ಪ್ರೆಗ್ನೆಂಟ್ ಆದ 3 ಗಂಡ್ಮಕ್ಕಳ ತಾಯಿಗೆ ಅಲ್ಟ್ರಾಸೌಂಡ್ ನಲ್ಲಿ ಶಾಕ್, ಈಗ ಹುಟ್ಟೋದು ಒಂದಲ್ಲ ಎರಡಲ್ಲ..!

ವರದಿಗಳ ಪ್ರಕಾರ, ಬಾಲಕಿ ಕ್ಲಾಸ್‌ನಲ್ಲಿ ತನ್ನ ಬಟ್ಟೆಯಲ್ಲಿಯೇ ಮೂತ್ರ ಮಾಡಿದ್ದಳು. ಈ ವೇಳೆ ಶಿಕ್ಷಕಿ ಶಾಲೆಯ ಆಯಾಳನ್ನು ಕರೆದು ಆಕೆಯ ಬಟ್ಟೆಯನ್ನು ಬದಲಾಯಿಸುವಂತೆ ಹೇಳಿದ್ದರು. ಆದರೆ, ಬಾಲಕಿಗೆ ಡ್ರೆಸ್‌ ಬದಲಾಯಿಸಲು ಸಹಾಯ ಮಾಡುವ ಬದಲು, ಮುಕ್ತ ಆವರಣದಲ್ಲಿ ಆಕೆಯನ್ನು ಹೊಡೆಯಲು ಆರಂಭಿಸಿದ್ದಳು.

ಅಂದಾಜು 4 ನಿಮಿಷದ ವಿಡಿಯೋ ಇದಾಗಿದ್ದು, ಶಾಲೆಯ ಆಯಾ ಅತ್ಯಂತ ಕ್ರೂರವಾಗಿ ಬಾಲಕಿಯ ಜೊತೆ ವರ್ತಿಸಿದ್ದಾರೆ. ಆಕೆಯನ್ನು ನೆಲಕ್ಕೆ ಬಡಿದಿದ್ದು ಮಾತ್ರವಲ್ಲದೆ, ನಿರಂತರವಾಗಿ ಆಕೆಯ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ಕೂದಲನ್ನು ಎಳೆದು ಹಿಂಸೆ ಮಾಡಿದ್ದಲ್ಲದೆ, ಆಕೆಯ ತಲೆಯನ್ನು ನೆಲಕ್ಕೆ ಬಡಿದಿದ್ದಾಳೆ. ಆಕೆಯ ಮೇಲೆ ಹಿಂಸೆ ಅತಿಯಾಗುತ್ತಿದ್ದಂತೆ ಮಗು ನಿರಂತರವಾಗಿ ಅಳುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
Read more