ಸನಾತನ ಧರ್ಮ ದ್ವೇಷವೇ ಆ ಪಕ್ಷದ ಪತನಕ್ಕೆ ಕಾರಣವಾಗುತ್ತಾ..? ಅಣ್ಣಾಮಲೈ ಹೇಳ್ತಾರೆ ತ.ಪಾಲಿಟಿಕ್ಸ್ ಬದಲಾದ ಕತೆ..!

ಸನಾತನ ಧರ್ಮ ದ್ವೇಷವೇ ಆ ಪಕ್ಷದ ಪತನಕ್ಕೆ ಕಾರಣವಾಗುತ್ತಾ..? ಅಣ್ಣಾಮಲೈ ಹೇಳ್ತಾರೆ ತ.ಪಾಲಿಟಿಕ್ಸ್ ಬದಲಾದ ಕತೆ..!

Published : Sep 09, 2023, 03:43 PM IST

ಅದೊಂದು ಹೇಳಿಕೆ ಸೃಷ್ಟಿಸಿತ್ತು ಕೋಲಾಹಲ!
ಅದೇ ಹೇಳಿಕೆಯೇ ಈಗ ತಿರುಗುಬಾಣವಾಯ್ತಾ..?
ಬದಲಾಯಿದೆಯಾ ತ.ನಾಡು ರಾಜಕಾರಣ..?

ತಮಿಳುನಾಡಿನ ಮುಖ್ಯಮಂತ್ರಿ ಮಗ, ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ(Sanatana Dharma) ಬಗ್ಗೆ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಪ್ಪನ ಕ್ಯಾಬಿನೆಟ್‌ನಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರೊ ಉದಯನಿಧಿ(Udayanidhi) ಈ ಮಾತು ಹೇಳಿದ್ದೇ ತಡ, ಅದು ದೇಶದಾದ್ಯಂತ ಬಿರುಗಾಳಿ ಎಬ್ಬಿಸಿಬಿಡ್ತು. ಯಾವಾಗ ಈ ಉದಯನಿಧಿ ವಿರುದ್ಧವಾಗಿಯೇ ಹೆಚ್ಚೆಚ್ಚು ಚರ್ಚೆ ಶುರುವಾಯ್ತೋ, ಆಗ ಉದಯನಿಧಿ ಜೊತೆ ನಿಲ್ಲೋಕೆ ಬಂದದ್ದು. ಡಿಎಂಕೆ ಸಚಿವ ಎ ರಾಜ(A Raja) ಡಿಎಂಕೆ ನಾಯಕರು ಸನಾತನ ಧರ್ಮದ ವಿರುದ್ಧ, ಎಲುಬಿಲ್ಲದ ನಾಲಿಗೆ ಅಂತ ಬಾಯಿಗೆ ಬಂದ್ ಹಾಗೆ ಮಾತಾಡ್ತಾ ಇದಾರೆ.. ಅವರ ಮಾತು ಕೇಳೋಕೆ ಹೋದ ಜನ, ಚಪ್ಪಾಳೆ ತಟ್ತಾ ಇದಾರೆ.. ಆದ್ರೆ ಅಸಲಿಗೆ, ಡಿಎಮ್ಕೆ ನಾಯಕರ ಕುಟುಂಬ ಹೇಗಿರತ್ತಂತೆ ಗೊತ್ತಾ.? ರಾಜಕೀಯದಾಚೆ ಈ ರಾಜಕಾರಣಿಗಳ ಮನೆಯೊಳಗೆ ಹೇಗಿರುತ್ತಂತೆ ಗೊತ್ತಾ..? ಅದನ್ನ ತಮಿಳುನಾಡಿನ(Tamilnadu) ಬಿಜೆಪಿ ನಾಯಕ, ಅಣ್ಣಾಮಲೈ ಅವರೇ ಹೇಳ್ತಾರೆ ಕೇಳಿ. ಹಣೆ ತುಂಬಾ ಕಾಸಗಲ ಕುಂಕುಮ ಇಟ್ಕೊಂಡು, ರೇಷ್ಮೆ ಸೀರೆತೊಟ್ಟು, ಮಲ್ಲಿಗೆ ಹೂ ಮುಡಿದು, ದೇವರ ಮುಂದೆ ಭಕ್ತಿಯಿಂದ ಕೈಮುಗಿದು ನಿಂತಿರೋ ಈಕೆ, ದುರ್ಗಾ ಸ್ಟಾಲಿನ್.. ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ, ಉದಯನಿಧಿ ಸ್ಟಾಲಿನ್ ಅವರ ಧರ್ಮ ಪತ್ನಿ.. ಆ ಕಡೆ ಅಪ್ಪ-ಮಗ ಹಿಂದೂ ಧರ್ಮದ ವಿರುದ್ಧ, ಸನಾತನ ಪರಂಪರೆಯ ವಿರುದ್ಧ ಮಾತಾಡ್ತಾ ಇದ್ರೆ, ಈಕೆ ಮಾತ್ರ, ಗುಡಿ-ದೇವಾಲಯಗಳಿಗೆ ಶ್ರದ್ಧೆಯಿಂದ ಹೋಗ್ತಾರೆ.. ಲಕ್ಷಗಟ್ಟಲೆ ಬೆಲೆ ಬಾಳೋ ಆಭರಣ ಕೊಟ್ಟು ಹರಕೆ ತೀರಿಸ್ತಾರೆ.

ಇದನ್ನೂ ವೀಕ್ಷಿಸಿ:  ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್