ಯೋಗವೇ ತಂದಿತ್ತು ಶುಭಯೋಗ! ಹೇಗಿತ್ತು ಸುರಂಗದಲ್ಲಿ..? 17 ದಿನಗಳಲ್ಲಿ ಏನೇನೆಲ್ಲಾ ಆಗೋಯ್ತು..?

ಯೋಗವೇ ತಂದಿತ್ತು ಶುಭಯೋಗ! ಹೇಗಿತ್ತು ಸುರಂಗದಲ್ಲಿ..? 17 ದಿನಗಳಲ್ಲಿ ಏನೇನೆಲ್ಲಾ ಆಗೋಯ್ತು..?

Published : Nov 30, 2023, 02:49 PM IST

ದೈವ ನಿರ್ಣಯದ ಬಗ್ಗೆ ಅರ್ನಾಲ್ಡ್ ಡಿಕ್ಸ್ ಹೇಳಿದ್ದೇನು..?
ಪ್ರಕೃತಿಯ ಚೆಲ್ಲಾಟದಲ್ಲೂ ಕಡೆಗೂ ಗೆದ್ದಿತ್ತು ಸತತ ಶ್ರಮ!
17 ದಿನ ನರಕಯಾತನೆ ಅನುಭವಿಸಿದವರು ಹೇಳಿದ್ದೇನು..?

ಉತ್ತರಕಾಶಿಯ ಸಿಲ್ಕ್ಯಾರದಲ್ಲಿ(Silkyara) ಏನಾಯ್ತು, ಹೇಗಾಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಇಡೀ ದೇಶವೇ ಸತತ 17 ದಿನಗಳಿಂದಲೂ ಕೌತುಕದ ಕಣ್ಣುಗಳಿಂದ ಸಿಲ್ಕ್ಯಾರಾನಾ ನೋಡ್ತಾ ಇತ್ತು. ಅಲ್ಲಿರೋ 41 ಮಂದಿ ಅದ್ಯಾವಾಗ ಕ್ಷೇಮವಾಗಿ ಆಚೆ ಬರ್ತಾರೋ, ಅದ್ಯಾವಾಗ ಅವರವರ ಕುಟುಂಬದವರು ಅವರನ್ನ ಭೇಟಿ ಮಾಡ್ತಾರೋ, ಅಂತ ನಾವೂ ನೀವೂ ಸೇರಿದಂತೆ ಪ್ರತಿಯೊಬ್ಬರೂ ಕಾಯ್ತಾ ಇದ್ರು. ಕಡೆಗೂ ಆ ಶುಭಗಳಿಗೆ ಬಂದೇ ಬಿಡ್ತು. ಮಂಗಳವಾರ ಅನ್ನೋದು ಆ 41 ಮಂದಿಗೆ ಶುಭಮಂಗಳವನ್ನೇ ತಂದಿತ್ತು. 17 ದಿನಗಳ ಹಿಂದೆ. ಅವತ್ತು ದೀಪಾವಳಿ(Diwali) ಹಬ್ಬ. ಇಡೀ ದೇಶವೇ ದೀಪ ಹೊತ್ತಿಸಿ, ಎಲ್ಲೆಲ್ಲೂ ಬೆಳಕು ಹರಡೋ ಹಾಗೆ ಮಾಡೋಕೆ ಸಿದ್ಧವಾಗ್ತಾ ಇದ್ರೆ, ಅದೇ ದಿನ, ಬೆಳ್ಳಂ ಬೆಳಗ್ಗೆ ಮೂರು-ಮೂರುವರೆ ವೇಳೆಗೆ, 41 ಮಂದಿಯ ಕಣ್ಣೆದುರು ಅಂಧಕಾರ ಬಂದು ನಿಂತಿತ್ತು. ಸಿಲ್ಕ್ಯಾರಾದಲ್ಲಿ ನಡೀತಿದ್ದ ಸುರಂಗ ನಿರ್ಮಾಣ ಕಾರ್ಯ ಮುಂದುವರೆಸೋಕೆ, ಅವತ್ತು 41 ಮಂದಿ ಒಳಹೊಕ್ಕಿದ್ದರು. ಮಾಡೋ ಕೆಲಸ ಮುಗಿಸಿ ಆಚೆ ಬರ್ಬೇಕು ಅಂತಿದ್ದಾಗಲೇ, ಆಗಬಾರದ ಅನಾಹುತ ಆಗಿಹೋಗಿತ್ತು. ನೋಡನೋಡುತ್ತಲೇ ಭೂಕುಸಿತವಾಗಿ ಸುರಂಗ(Tunnel) ಮುಚ್ಚಿ ಹೋಗಿತ್ತು. ಸುರಂಗದೊಳಗೆ ಸುಮಾರು 60 ಮೀಟರ್ ಒಳಗೆ ಹೋಗಿದ್ದ ಕಾರ್ಮಿಕರು ಅಲ್ಲಿ ಸಿಕ್ಕಾಕ್ಕೊಂಡ್ರು.ಇಂಥದ್ದೊಂದು ಅನಾಹುತ ಆಗಿದೆ ಅಂತ ಗೊತ್ತಾಗಿದ್ದೇ, ಆರೇಳು ಗಂಟೆಗಳ ಬಳಿಕ. ನವೆಂಬರ್ 12ರ ಬೆಳಗಿನ ಜಾವಕ್ಕೆ, ಅನಾಹುತ ನಡೆದಿದೆ ಅನ್ನೋದು ಗೊತ್ತಾಯ್ತು. ಗೊತ್ತಾದ ಮರುಕ್ಷಣದಿಂದಲೇ ರಕ್ಷಣಾಕಾರ್ಯ ಶುರುವಾಯ್ತು.. ಆದ್ರೆ, ಆಗ ಶುರುವಾದ ಕಾರ್ಯಾಚರಣೆ ಬರೋಬ್ಬರಿ 17 ಗಂಟೆಗಳ ಕಾಲ ನಡೆಯುತ್ತೆ ಅಂತ, ಯಾರೊಬ್ಬರೂ ಊಹಿಸಿರಲೇ ಇಲ್ಲ.

ಇದನ್ನೂ ವೀಕ್ಷಿಸಿ:  4 ಲಕ್ಷಕ್ಕೆ ಹೆಣ್ಣು, 8 ಲಕ್ಷಕ್ಕೆ ಗಂಡು ಮಗು..! ಡಾಕ್ಟರ್‌ಗಳೇ ದಂಧೆಕೋರರ ಇನ್ಫಾರ್ಮರ್ಸ್..!

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!