Sam Pitroda: ಮೋದಿ ಕೈಗೆ ಮಾತಿನ ಬ್ರಹ್ಮಾಸ್ತ್ರ ಕೊಡ್ತಾ ಇರೋದ್ಯಾರು..? ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಆಗಿದ್ದೇನೇನು..?

Sam Pitroda: ಮೋದಿ ಕೈಗೆ ಮಾತಿನ ಬ್ರಹ್ಮಾಸ್ತ್ರ ಕೊಡ್ತಾ ಇರೋದ್ಯಾರು..? ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಆಗಿದ್ದೇನೇನು..?

Published : Apr 26, 2024, 05:23 PM ISTUpdated : Apr 26, 2024, 05:24 PM IST

ಎದುರಾಳಿ ಮಾತನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡ ಮೋದಿ!
ರಾಜೀವ್ ಗಾಂಧಿ ಆಪ್ತ.. ರಾಹುಲ್ ಗಾಂಧಿ ಸಲಹೆಗಾರ!
ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದಾಗಿದ್ದು ಯಾಕಂತೆ ಗೊತ್ತಾ..?

ದೇಶದಲ್ಲೀಗ ಮತದಾನದ ಹಬ್ಬ ನಡೀತಿದೆ. ಮತದಾರರಿಗೆ ಇದೇನೋ ಹಬ್ಬ. ಆದ್ರೆ ಮತ ಹಾಕಿಸಿಕೊಳ್ಳೋ ರಾಜಕಾರಣಿಗಳಿಗೆ, ಇದು ಯುದ್ಧ. ಚುನಾವಣೇಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಗೆಲುವಿಗೋಸ್ಕರ ಸಮಾವೇಶ ನಡೆಸ್ತಾರೆ. ಭಾಷಣ ಮಾಡ್ತಾರೆ.ಆದ್ರೆ ಅದ್ಯಾಕೋ ಏನೋ, ಚುನಾವಣೆ ವಿಚಾರ ಅಂದ್ರೆ ಕಾಂಗ್ರೆಸ್(Congress) ಎದುರಾಳಿ ಪಾಳಯಕ್ಕೇ ಉಪಯೋಗವಾಗುವಂಥಾ ಆಯುಧ ಪ್ರಯೋಗ ಮಾಡುತ್ತೆ. ಕಳೆದ ಒಂದೂವರೆ ದಶಕಗಳಿಂದಲೂ ಇದನ್ನೇ ಮಾಡ್ಕೊಂಡ್ ಬಂದಿರೋ ಕಾಂಗ್ರೆಸ್, ಈಗಲೂ ಅದನ್ನೇ ಮಾಡಿದೆ. ಅದರ ಪ್ರಯೋಜನ ಮೋದಿ(Narendra Modi) ಪಡೀತಿದ್ದಾರೆ. ಕಾಂಗ್ರೆಸ್ ಏನಾದ್ರೂ ಸರ್ಕಾರ ರಚಿಸಿದ್ರೆ, ಇದ್ದವರ ಹತ್ರ ಜಾಸ್ತಿ ತೆರಿಗೆ ಪಡೆಯುತ್ತೆ. ಮರಣ ಹೊಂದಿದ ಮೇಲೆ ಸತ್ತವರ ಆಸ್ತಿ ಮೇಲೆ ತೆರಿಗೆ ಹಾಕುತ್ತೆ ಎಂದು ಸ್ಯಾಮ್‌ ಪಿತ್ರೋಡಾ(Sam Pitroda ) ಹೇಳಿದ್ದಾರೆ. ಒಟ್ಟಾರೆ, ಜನರನ್ನ ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ನೋ ಅರ್ಥದಲ್ಲಿ ಮೋದಿ ಭಾಷಣ ಮಾಡ್ತಾ ಇದಾರೆ. ಜನರ ಮಧ್ಯೆ ಇದೇ ವಿಚಾರವಾಗಿಯೇ ದೊಡ್ಡ ಚರ್ಚೆಯಾಗ್ತಾ ಇದೆ. ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಹಾಕ್ಬೇಕು ಅಂತ ಹೇಳಿಬಿಟ್ರು. ಅಷ್ಟು ಸಾಕಾಗಿತ್ತು, ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ದಾಳಿ ನಡೆಸೋಕೆ. ವೇದಿಕೆ ಮೇಲೆ ಮೋದಿ  ಅಬ್ಬರಿಸೋದಕ್ಕೆ. 

ಇದನ್ನೂ ವೀಕ್ಷಿಸಿ:  Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more