ಅರುಣ್ ಯೋಗಿರಾಜ್ ಊರಲ್ಲಿ ಈಗಲೇ ರಾಮೋತ್ಸವ! ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎದುರಾಗಿದ್ದ ಸವಾಲುಗಳೇನೇನು.?

ಅರುಣ್ ಯೋಗಿರಾಜ್ ಊರಲ್ಲಿ ಈಗಲೇ ರಾಮೋತ್ಸವ! ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎದುರಾಗಿದ್ದ ಸವಾಲುಗಳೇನೇನು.?

Published : Jan 03, 2024, 03:03 PM IST

ಹೇಗಿದ್ದಾನೆ ಗೊತ್ತಾ ಕನ್ನಡಿಗ ಕೆತ್ತಿದ ಬಾಲ ರಾಮ? 
ಹೇಗೆ ನಡೆದಿತ್ತು ರಾಮ ವಿಗ್ರಹದ ಆಯ್ಕೆ ಪ್ರಕ್ರಿಯೆ?
ರಾಮ ವಿಗ್ರಹಕ್ಕೆ ಬಳಕೆಯಾಗಿದ್ದು ಕರುನಾಡ ಶಿಲೆ!

ಅಯೋಧ್ಯೆಯ  ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಕನ್ನಡಿಗ ಕೆತ್ತಿದ ರಾಮ ವಿಗ್ರಹ. ವಿಶ್ವವೇ ಎದುರು ನೋಡ್ತಾ ಇದ್ದ ಅಯೋಧ್ಯೆ ರಾಮಮಂದಿರದಲ್ಲಿ, ಇದೇ ಜನವರಿ 22ರಂದು ರಾಮದೇವರ ಪ್ರಾಣ ಪತಿಷ್ಠಾಪನೆಯಾಗಲಿದೆ. ಕೋಟಿ ಕೋಟಿ ಭಕ್ತರು ಕಾಯ್ತಾ ಇರೋ ಆ ಪವಿತ್ರ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಒಂದೊಂದು ನಿಮಿಷ ಉರುಳಿದಂತೆಲ್ಲಾ ದೇಶದಲ್ಲಿ ಸಂಭ್ರಮ ನೂರ್ಮಡಿಯಾಗ್ತಾ ಇದೆ. ಇಂಥಾ ಹೊತ್ತಲ್ಲಿ, ಕನ್ನಡಿಗರ ಸಡಗರ ಹೆಚ್ಚಿಸೋ ಮತ್ತೊಂದು ಸಂಗತಿ ಸಂಭವಿಸಿದೆ. ಅದೇನು ಅಂದ್ರೆ, ಅಯೋಧ್ಯೆ ರಾಮಮಂದಿರಕ್ಕೆ ಕನ್ನಡಿಗ ಕೆತ್ತಿದ ಪ್ರಭು ಶ್ರೀರಾಮನ ಮೂರ್ತಿ ಆಯ್ಕೆಯಾಗಿದೆ. ಅರುಣ್ ಯೋಗಿರಾಜ್(Arun Yogiraj). ಇವತ್ತು ದೇಶದೆಲ್ಲೆಡೆ ಸದ್ದು ಮಾಡ್ತಾ ಇರೋ ಹೆಸರು. ಪರಿಶ್ರಮಕ್ಕೆ.. ಪರಮಾದ್ಭುತ ವಿಗ್ರಹ ನಿರ್ಮಾಣಕ್ಕೆ ಅರುಣ್ ಯೋಗಿರಾಜ್ ಕೇರ್ ಆಫ್ ಅಡ್ರಸ್.. ಅಂಥಾ ಅರುಣ್ ಅವರು ನಿರ್ಮಿಸಿದ ರಾಮಲಲ್ಲಾ ವಿಗ್ರಹವೇ(Ram Lalla idol), ಅಯೋಧ್ಯೆಯಲ್ಲಿ(Ayodhya) ಪ್ರತಿಷ್ಠಾಪನೆಗೊಳ್ಳೋಕೆ ಸಜ್ಜಾಗಿದೆ..ರಾಮಲಲ್ಲಾ ವಿಗ್ರಹ ನಿರ್ಮಾಣವಾಗಿರೋದು ಕೂಡ, ಕನ್ನಡ ನೆಲದ ಶಿಲೆಯಿಂದ.. ಮೈಸೂರಿನ ಎಚ್.ಡಿ ಕೋಟೆ ಹಾರೋಹಳ್ಳಿಯ ಶಿಲೆ ಅದು.. ರಾಮದಾಸ್ ಅನ್ನೋರ ಜಮೀನಿನಲ್ಲಿ 10 ಅಡಿ ಆಳದಲ್ಲಿ  ಕಪ್ಪು ಶಿಲೆಯೊಂದು ಅಡಗಿತ್ತು. ಅವತ್ತು ಸ್ಥಳದಲ್ಲಿಯೇ ಮಾನಯ್ಯ ಬಡಿಗೇರ್ ರಿಂದ ಆ ಕಲ್ಲಿನ ಪರೀಕ್ಷೆ ನಡೆದಿತ್ತು. ಸುಮಾರು 40 ಟನ್ ನಷ್ಟು ಕಲ್ಲಗಳನ್ನೂ ಅಯೋಧ್ಯೆಗೆ  ಅರುಣ್ ಅವರು ತಗೊಂಡ್ ಹೋಗಿದ್ರು. ಅಷ್ಟೇ ಅಲ್ಲ, ಇಂಥಾ ಶಿಲೆಗಳನ್ನ ಪರೀಕ್ಷೆ ಮಾಡೋ, IIRM ನಡೆಸಿದ ಎಲ್ಲಾ ಟೆಸ್ಟೂಗಳಲ್ಲೂ ಈ ಮೈಸೂರಿನ ಶಿಲೆ ಪಾಸಾಗಿತ್ತು.

ಇದನ್ನೂ ವೀಕ್ಷಿಸಿ:  Shivamogga: ಮುಚ್ಚಿಹೋಗಿದ್ದ ಕಂಪನಿ ಮತ್ತೆ ಬಂದಿರೋದ್ಯಾಕೆ..? ಹೊಸ ಹೋರಾಟಕ್ಕೆ ಸಜ್ಜಾಗುತ್ತಿದೆ ಶಿವಮೊಗ್ಗ..!

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
Read more