ಅರುಣ್ ಯೋಗಿರಾಜ್ ಊರಲ್ಲಿ ಈಗಲೇ ರಾಮೋತ್ಸವ! ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎದುರಾಗಿದ್ದ ಸವಾಲುಗಳೇನೇನು.?

ಅರುಣ್ ಯೋಗಿರಾಜ್ ಊರಲ್ಲಿ ಈಗಲೇ ರಾಮೋತ್ಸವ! ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎದುರಾಗಿದ್ದ ಸವಾಲುಗಳೇನೇನು.?

Published : Jan 03, 2024, 03:03 PM IST

ಹೇಗಿದ್ದಾನೆ ಗೊತ್ತಾ ಕನ್ನಡಿಗ ಕೆತ್ತಿದ ಬಾಲ ರಾಮ? 
ಹೇಗೆ ನಡೆದಿತ್ತು ರಾಮ ವಿಗ್ರಹದ ಆಯ್ಕೆ ಪ್ರಕ್ರಿಯೆ?
ರಾಮ ವಿಗ್ರಹಕ್ಕೆ ಬಳಕೆಯಾಗಿದ್ದು ಕರುನಾಡ ಶಿಲೆ!

ಅಯೋಧ್ಯೆಯ  ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಕನ್ನಡಿಗ ಕೆತ್ತಿದ ರಾಮ ವಿಗ್ರಹ. ವಿಶ್ವವೇ ಎದುರು ನೋಡ್ತಾ ಇದ್ದ ಅಯೋಧ್ಯೆ ರಾಮಮಂದಿರದಲ್ಲಿ, ಇದೇ ಜನವರಿ 22ರಂದು ರಾಮದೇವರ ಪ್ರಾಣ ಪತಿಷ್ಠಾಪನೆಯಾಗಲಿದೆ. ಕೋಟಿ ಕೋಟಿ ಭಕ್ತರು ಕಾಯ್ತಾ ಇರೋ ಆ ಪವಿತ್ರ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಒಂದೊಂದು ನಿಮಿಷ ಉರುಳಿದಂತೆಲ್ಲಾ ದೇಶದಲ್ಲಿ ಸಂಭ್ರಮ ನೂರ್ಮಡಿಯಾಗ್ತಾ ಇದೆ. ಇಂಥಾ ಹೊತ್ತಲ್ಲಿ, ಕನ್ನಡಿಗರ ಸಡಗರ ಹೆಚ್ಚಿಸೋ ಮತ್ತೊಂದು ಸಂಗತಿ ಸಂಭವಿಸಿದೆ. ಅದೇನು ಅಂದ್ರೆ, ಅಯೋಧ್ಯೆ ರಾಮಮಂದಿರಕ್ಕೆ ಕನ್ನಡಿಗ ಕೆತ್ತಿದ ಪ್ರಭು ಶ್ರೀರಾಮನ ಮೂರ್ತಿ ಆಯ್ಕೆಯಾಗಿದೆ. ಅರುಣ್ ಯೋಗಿರಾಜ್(Arun Yogiraj). ಇವತ್ತು ದೇಶದೆಲ್ಲೆಡೆ ಸದ್ದು ಮಾಡ್ತಾ ಇರೋ ಹೆಸರು. ಪರಿಶ್ರಮಕ್ಕೆ.. ಪರಮಾದ್ಭುತ ವಿಗ್ರಹ ನಿರ್ಮಾಣಕ್ಕೆ ಅರುಣ್ ಯೋಗಿರಾಜ್ ಕೇರ್ ಆಫ್ ಅಡ್ರಸ್.. ಅಂಥಾ ಅರುಣ್ ಅವರು ನಿರ್ಮಿಸಿದ ರಾಮಲಲ್ಲಾ ವಿಗ್ರಹವೇ(Ram Lalla idol), ಅಯೋಧ್ಯೆಯಲ್ಲಿ(Ayodhya) ಪ್ರತಿಷ್ಠಾಪನೆಗೊಳ್ಳೋಕೆ ಸಜ್ಜಾಗಿದೆ..ರಾಮಲಲ್ಲಾ ವಿಗ್ರಹ ನಿರ್ಮಾಣವಾಗಿರೋದು ಕೂಡ, ಕನ್ನಡ ನೆಲದ ಶಿಲೆಯಿಂದ.. ಮೈಸೂರಿನ ಎಚ್.ಡಿ ಕೋಟೆ ಹಾರೋಹಳ್ಳಿಯ ಶಿಲೆ ಅದು.. ರಾಮದಾಸ್ ಅನ್ನೋರ ಜಮೀನಿನಲ್ಲಿ 10 ಅಡಿ ಆಳದಲ್ಲಿ  ಕಪ್ಪು ಶಿಲೆಯೊಂದು ಅಡಗಿತ್ತು. ಅವತ್ತು ಸ್ಥಳದಲ್ಲಿಯೇ ಮಾನಯ್ಯ ಬಡಿಗೇರ್ ರಿಂದ ಆ ಕಲ್ಲಿನ ಪರೀಕ್ಷೆ ನಡೆದಿತ್ತು. ಸುಮಾರು 40 ಟನ್ ನಷ್ಟು ಕಲ್ಲಗಳನ್ನೂ ಅಯೋಧ್ಯೆಗೆ  ಅರುಣ್ ಅವರು ತಗೊಂಡ್ ಹೋಗಿದ್ರು. ಅಷ್ಟೇ ಅಲ್ಲ, ಇಂಥಾ ಶಿಲೆಗಳನ್ನ ಪರೀಕ್ಷೆ ಮಾಡೋ, IIRM ನಡೆಸಿದ ಎಲ್ಲಾ ಟೆಸ್ಟೂಗಳಲ್ಲೂ ಈ ಮೈಸೂರಿನ ಶಿಲೆ ಪಾಸಾಗಿತ್ತು.

ಇದನ್ನೂ ವೀಕ್ಷಿಸಿ:  Shivamogga: ಮುಚ್ಚಿಹೋಗಿದ್ದ ಕಂಪನಿ ಮತ್ತೆ ಬಂದಿರೋದ್ಯಾಕೆ..? ಹೊಸ ಹೋರಾಟಕ್ಕೆ ಸಜ್ಜಾಗುತ್ತಿದೆ ಶಿವಮೊಗ್ಗ..!

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more