ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

Published : Dec 14, 2023, 02:27 PM ISTUpdated : Dec 14, 2023, 02:28 PM IST

ಪಾಸ್ ಪಡೆದು ಸಂಸತ್ಗೆ ಬಂದಿದ್ದರು ಆ ಇಬ್ಬರು!
ಪ್ರತಾಪ್ ಸಿಂಹ ಹೆಸರಲ್ಲಿ ನೀಡಲಾಗಿತ್ತು ಪಾಸ್!
ದೇಶವನ್ನೇ ಬೆಚ್ಚಿಬೀಳಿಸಿದೆ ಸಂಸತ್ ಭವನ ದಾಳಿ!

ಸಂಸತ್ತಿನ ಒಳಗೆ.. ಹೊರಗೆ..ಎರಡೂ ಕಡೆ  ನಡೆದಿತ್ತು ಭಾರೀ ಭದ್ರತಾ ಲೋಪ. ಖಲಿಸ್ತಾನಿ ಉಗ್ರ ಪನ್ನುನ್(Gurpatwant Pannun ) ಹೇಳಿದ ದಿನವೇ ಸಂಸತ್‌ನಲ್ಲಿ ಕೋಲಾಹಲ ನಡೆದಿತ್ತು. ಇದು ದೇಶವನ್ನೇ ಬೆಚ್ಚಿಬೀಳಿಸಿದ ಸಂಗತಿ. ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂಥಾ ಸಂಗತಿ. ಯಾಕಂದ್ರೆ, ಈ ಘಟನೆ ನಡೆದಿದ್ದು ಮತ್ತೆಲ್ಲೋ ಅಲ್ಲ, ದೇಶದ ಶಾಸನಗಳು ರೂಪುಗೊಳ್ಳೋ ಸಂಸತ್‌ನಲ್ಲಿ. ಕಲಾಪದಲ್ಲಿ ಜೀರೋ ಅವರ್ ನಡೆಯುತ್ತಿತ್ತು. ಅತಿಥಿ ಗ್ಯಾಲೆರಿಯಿಂದ ಇಬ್ಬರು ಧುಮುಕಿ ನೇರವಾಗಿ ಸ್ಪೀಕರ್ (Speaker) ಕುರ್ಚಿಯ ಕಡೆ ಧಾವಿಸಿದರು. ಅವರ ಕೈಯಲ್ಲಿ ಕ್ಯಾನಿಸ್ಟರ್(ಸಣ್ಣ ಸಿಲೆಂಡರ್ ಡಬ್ಬಿ ಇತ್ತು. ಅದರಿಂದ ಹಳದಿ ಸ್ಮೋಕ್ ಹೊಮ್ಮುವಂತೆ ಮಾಡಿದರು. ಇಬ್ಬರಲ್ಲೊಬ್ಬ ಸ್ಪೀಕರ್ ಕುರ್ಚಿಯ ಕಡೆ ಓಡಿದ. ಸಂಸದರ ಕೈಗೆ ಸಿಗದಂತೆ ಓಡಿದ. ಅವನು ಹಿಡಿದಿದ್ದ ಕ್ಯನಿಸ್ಟರ್ನಿಂದ ಹಳದಿ ಹೊಗೆ ಬರುತ್ತಿತ್ತು. ಅದರಲ್ಲಿ ಯಾವ ರಾಸಯನಿಕವಿತ್ತೋ ಗೊತ್ತಿಲ್ಲ. ಆದರೆ ವಿಸಿಟರ್ಸ್ ಗ್ಯಾಲರಿಯಿಂದ ಎಗರಿ ಬಂದ ಆ ಇಬ್ಬರು, ಕೈಲಿ ಕ್ಯಾನಿಸ್ಟರ್ ಇಟ್ಕೊಂಡು ಸಂಸತ್ ಒಳಗೆ ಬಂದಿದ್ದು ಭಾರೀ ಭದ್ರತಾ ಲೋಪ. ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಾ ಇತ್ತು.. ಅದರ ಅರಿವೂ ತಮ್ಮಗಿಲ್ಲದ ಹಾಗೆ, ಅಂದುಕೊಂಡಿದ್ದನ್ನ ಆ ಇಬ್ಬರು ಮಾಡಿಮುಗಿಸಿದ್ರು.. ಅಂತಿಮವಾಗಿ ಆ ಇಬ್ಬರನ್ನೂ ಸಹ ಪೊಲೀಸರು ವಶಕ್ಕೆ ಪಡೆದ್ರು.ಸದ್ಯದ ಮಾಹಿತಿ ಪ್ರಕಾರ ಆ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೊರಗಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಸಂಸತ್(Parliment) ಒಳಗೆ ಇಷ್ಟೆಲ್ಲಾ ಕೋಲಾಹಲ ನಡೆಸಿದ್ರಲ್ಲಾ ಆ ಇಬ್ಬರು, ಆ ಇಬ್ಬರಿಗೆ ಪಾಸ್ ಇಶ್ಯು ಆಗಿರೋದು ಸಂಸದ, ಪ್ರತಾಪ್ ಸಿಂಹ(Pratap Simha) ಅವರ ಹೆಸರಲ್ಲಿ.. ಅವರ ಹೆಸರು ಬಳಸ್ಕೊಂಡು ಒಳಗೆ ಬಂದೋರು, ಮಾಡಬಾರದ ಕೃತ್ಯ ಎಸಗಿದ್ದರು.. ಅವರು ಮಾಡಿದ ಘಟನೆಗೆ, ದೇಶವೇ ಭೀತಿಗೊಳಗಾಗೋ ಹಾಗಾಯ್ತು.

ಇದನ್ನೂ ವೀಕ್ಷಿಸಿ:  ಸಂಸತ್‌ ದಾಳಿ ಮಾಡಿದವರ ಉದ್ದೇಶ ಏನಾಗಿತ್ತು? ಖಲಿಸ್ತಾನಿ ಉಗ್ರನ ಬೆದರಿಕೆ ನಂತರವೂ ಭದ್ರತಾ ವೈಫಲ್ಯ !

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more