ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

Published : Dec 14, 2023, 02:27 PM ISTUpdated : Dec 14, 2023, 02:28 PM IST

ಪಾಸ್ ಪಡೆದು ಸಂಸತ್ಗೆ ಬಂದಿದ್ದರು ಆ ಇಬ್ಬರು!
ಪ್ರತಾಪ್ ಸಿಂಹ ಹೆಸರಲ್ಲಿ ನೀಡಲಾಗಿತ್ತು ಪಾಸ್!
ದೇಶವನ್ನೇ ಬೆಚ್ಚಿಬೀಳಿಸಿದೆ ಸಂಸತ್ ಭವನ ದಾಳಿ!

ಸಂಸತ್ತಿನ ಒಳಗೆ.. ಹೊರಗೆ..ಎರಡೂ ಕಡೆ  ನಡೆದಿತ್ತು ಭಾರೀ ಭದ್ರತಾ ಲೋಪ. ಖಲಿಸ್ತಾನಿ ಉಗ್ರ ಪನ್ನುನ್(Gurpatwant Pannun ) ಹೇಳಿದ ದಿನವೇ ಸಂಸತ್‌ನಲ್ಲಿ ಕೋಲಾಹಲ ನಡೆದಿತ್ತು. ಇದು ದೇಶವನ್ನೇ ಬೆಚ್ಚಿಬೀಳಿಸಿದ ಸಂಗತಿ. ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂಥಾ ಸಂಗತಿ. ಯಾಕಂದ್ರೆ, ಈ ಘಟನೆ ನಡೆದಿದ್ದು ಮತ್ತೆಲ್ಲೋ ಅಲ್ಲ, ದೇಶದ ಶಾಸನಗಳು ರೂಪುಗೊಳ್ಳೋ ಸಂಸತ್‌ನಲ್ಲಿ. ಕಲಾಪದಲ್ಲಿ ಜೀರೋ ಅವರ್ ನಡೆಯುತ್ತಿತ್ತು. ಅತಿಥಿ ಗ್ಯಾಲೆರಿಯಿಂದ ಇಬ್ಬರು ಧುಮುಕಿ ನೇರವಾಗಿ ಸ್ಪೀಕರ್ (Speaker) ಕುರ್ಚಿಯ ಕಡೆ ಧಾವಿಸಿದರು. ಅವರ ಕೈಯಲ್ಲಿ ಕ್ಯಾನಿಸ್ಟರ್(ಸಣ್ಣ ಸಿಲೆಂಡರ್ ಡಬ್ಬಿ ಇತ್ತು. ಅದರಿಂದ ಹಳದಿ ಸ್ಮೋಕ್ ಹೊಮ್ಮುವಂತೆ ಮಾಡಿದರು. ಇಬ್ಬರಲ್ಲೊಬ್ಬ ಸ್ಪೀಕರ್ ಕುರ್ಚಿಯ ಕಡೆ ಓಡಿದ. ಸಂಸದರ ಕೈಗೆ ಸಿಗದಂತೆ ಓಡಿದ. ಅವನು ಹಿಡಿದಿದ್ದ ಕ್ಯನಿಸ್ಟರ್ನಿಂದ ಹಳದಿ ಹೊಗೆ ಬರುತ್ತಿತ್ತು. ಅದರಲ್ಲಿ ಯಾವ ರಾಸಯನಿಕವಿತ್ತೋ ಗೊತ್ತಿಲ್ಲ. ಆದರೆ ವಿಸಿಟರ್ಸ್ ಗ್ಯಾಲರಿಯಿಂದ ಎಗರಿ ಬಂದ ಆ ಇಬ್ಬರು, ಕೈಲಿ ಕ್ಯಾನಿಸ್ಟರ್ ಇಟ್ಕೊಂಡು ಸಂಸತ್ ಒಳಗೆ ಬಂದಿದ್ದು ಭಾರೀ ಭದ್ರತಾ ಲೋಪ. ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಾ ಇತ್ತು.. ಅದರ ಅರಿವೂ ತಮ್ಮಗಿಲ್ಲದ ಹಾಗೆ, ಅಂದುಕೊಂಡಿದ್ದನ್ನ ಆ ಇಬ್ಬರು ಮಾಡಿಮುಗಿಸಿದ್ರು.. ಅಂತಿಮವಾಗಿ ಆ ಇಬ್ಬರನ್ನೂ ಸಹ ಪೊಲೀಸರು ವಶಕ್ಕೆ ಪಡೆದ್ರು.ಸದ್ಯದ ಮಾಹಿತಿ ಪ್ರಕಾರ ಆ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೊರಗಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಸಂಸತ್(Parliment) ಒಳಗೆ ಇಷ್ಟೆಲ್ಲಾ ಕೋಲಾಹಲ ನಡೆಸಿದ್ರಲ್ಲಾ ಆ ಇಬ್ಬರು, ಆ ಇಬ್ಬರಿಗೆ ಪಾಸ್ ಇಶ್ಯು ಆಗಿರೋದು ಸಂಸದ, ಪ್ರತಾಪ್ ಸಿಂಹ(Pratap Simha) ಅವರ ಹೆಸರಲ್ಲಿ.. ಅವರ ಹೆಸರು ಬಳಸ್ಕೊಂಡು ಒಳಗೆ ಬಂದೋರು, ಮಾಡಬಾರದ ಕೃತ್ಯ ಎಸಗಿದ್ದರು.. ಅವರು ಮಾಡಿದ ಘಟನೆಗೆ, ದೇಶವೇ ಭೀತಿಗೊಳಗಾಗೋ ಹಾಗಾಯ್ತು.

ಇದನ್ನೂ ವೀಕ್ಷಿಸಿ:  ಸಂಸತ್‌ ದಾಳಿ ಮಾಡಿದವರ ಉದ್ದೇಶ ಏನಾಗಿತ್ತು? ಖಲಿಸ್ತಾನಿ ಉಗ್ರನ ಬೆದರಿಕೆ ನಂತರವೂ ಭದ್ರತಾ ವೈಫಲ್ಯ !

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more