ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

Published : Dec 14, 2023, 02:27 PM ISTUpdated : Dec 14, 2023, 02:28 PM IST

ಪಾಸ್ ಪಡೆದು ಸಂಸತ್ಗೆ ಬಂದಿದ್ದರು ಆ ಇಬ್ಬರು!
ಪ್ರತಾಪ್ ಸಿಂಹ ಹೆಸರಲ್ಲಿ ನೀಡಲಾಗಿತ್ತು ಪಾಸ್!
ದೇಶವನ್ನೇ ಬೆಚ್ಚಿಬೀಳಿಸಿದೆ ಸಂಸತ್ ಭವನ ದಾಳಿ!

ಸಂಸತ್ತಿನ ಒಳಗೆ.. ಹೊರಗೆ..ಎರಡೂ ಕಡೆ  ನಡೆದಿತ್ತು ಭಾರೀ ಭದ್ರತಾ ಲೋಪ. ಖಲಿಸ್ತಾನಿ ಉಗ್ರ ಪನ್ನುನ್(Gurpatwant Pannun ) ಹೇಳಿದ ದಿನವೇ ಸಂಸತ್‌ನಲ್ಲಿ ಕೋಲಾಹಲ ನಡೆದಿತ್ತು. ಇದು ದೇಶವನ್ನೇ ಬೆಚ್ಚಿಬೀಳಿಸಿದ ಸಂಗತಿ. ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂಥಾ ಸಂಗತಿ. ಯಾಕಂದ್ರೆ, ಈ ಘಟನೆ ನಡೆದಿದ್ದು ಮತ್ತೆಲ್ಲೋ ಅಲ್ಲ, ದೇಶದ ಶಾಸನಗಳು ರೂಪುಗೊಳ್ಳೋ ಸಂಸತ್‌ನಲ್ಲಿ. ಕಲಾಪದಲ್ಲಿ ಜೀರೋ ಅವರ್ ನಡೆಯುತ್ತಿತ್ತು. ಅತಿಥಿ ಗ್ಯಾಲೆರಿಯಿಂದ ಇಬ್ಬರು ಧುಮುಕಿ ನೇರವಾಗಿ ಸ್ಪೀಕರ್ (Speaker) ಕುರ್ಚಿಯ ಕಡೆ ಧಾವಿಸಿದರು. ಅವರ ಕೈಯಲ್ಲಿ ಕ್ಯಾನಿಸ್ಟರ್(ಸಣ್ಣ ಸಿಲೆಂಡರ್ ಡಬ್ಬಿ ಇತ್ತು. ಅದರಿಂದ ಹಳದಿ ಸ್ಮೋಕ್ ಹೊಮ್ಮುವಂತೆ ಮಾಡಿದರು. ಇಬ್ಬರಲ್ಲೊಬ್ಬ ಸ್ಪೀಕರ್ ಕುರ್ಚಿಯ ಕಡೆ ಓಡಿದ. ಸಂಸದರ ಕೈಗೆ ಸಿಗದಂತೆ ಓಡಿದ. ಅವನು ಹಿಡಿದಿದ್ದ ಕ್ಯನಿಸ್ಟರ್ನಿಂದ ಹಳದಿ ಹೊಗೆ ಬರುತ್ತಿತ್ತು. ಅದರಲ್ಲಿ ಯಾವ ರಾಸಯನಿಕವಿತ್ತೋ ಗೊತ್ತಿಲ್ಲ. ಆದರೆ ವಿಸಿಟರ್ಸ್ ಗ್ಯಾಲರಿಯಿಂದ ಎಗರಿ ಬಂದ ಆ ಇಬ್ಬರು, ಕೈಲಿ ಕ್ಯಾನಿಸ್ಟರ್ ಇಟ್ಕೊಂಡು ಸಂಸತ್ ಒಳಗೆ ಬಂದಿದ್ದು ಭಾರೀ ಭದ್ರತಾ ಲೋಪ. ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಾ ಇತ್ತು.. ಅದರ ಅರಿವೂ ತಮ್ಮಗಿಲ್ಲದ ಹಾಗೆ, ಅಂದುಕೊಂಡಿದ್ದನ್ನ ಆ ಇಬ್ಬರು ಮಾಡಿಮುಗಿಸಿದ್ರು.. ಅಂತಿಮವಾಗಿ ಆ ಇಬ್ಬರನ್ನೂ ಸಹ ಪೊಲೀಸರು ವಶಕ್ಕೆ ಪಡೆದ್ರು.ಸದ್ಯದ ಮಾಹಿತಿ ಪ್ರಕಾರ ಆ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೊರಗಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಸಂಸತ್(Parliment) ಒಳಗೆ ಇಷ್ಟೆಲ್ಲಾ ಕೋಲಾಹಲ ನಡೆಸಿದ್ರಲ್ಲಾ ಆ ಇಬ್ಬರು, ಆ ಇಬ್ಬರಿಗೆ ಪಾಸ್ ಇಶ್ಯು ಆಗಿರೋದು ಸಂಸದ, ಪ್ರತಾಪ್ ಸಿಂಹ(Pratap Simha) ಅವರ ಹೆಸರಲ್ಲಿ.. ಅವರ ಹೆಸರು ಬಳಸ್ಕೊಂಡು ಒಳಗೆ ಬಂದೋರು, ಮಾಡಬಾರದ ಕೃತ್ಯ ಎಸಗಿದ್ದರು.. ಅವರು ಮಾಡಿದ ಘಟನೆಗೆ, ದೇಶವೇ ಭೀತಿಗೊಳಗಾಗೋ ಹಾಗಾಯ್ತು.

ಇದನ್ನೂ ವೀಕ್ಷಿಸಿ:  ಸಂಸತ್‌ ದಾಳಿ ಮಾಡಿದವರ ಉದ್ದೇಶ ಏನಾಗಿತ್ತು? ಖಲಿಸ್ತಾನಿ ಉಗ್ರನ ಬೆದರಿಕೆ ನಂತರವೂ ಭದ್ರತಾ ವೈಫಲ್ಯ !

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more