Nitish Kumar : ಬಿಜೆಪಿ ಜೊತೆ ನಿತೀಶ್ ಹೊಸ ಆಟ..I.N.D.I.A ಕೂಟಕ್ಕೆ ಪ್ರಾಣಸಂಕಟ..!

Nitish Kumar : ಬಿಜೆಪಿ ಜೊತೆ ನಿತೀಶ್ ಹೊಸ ಆಟ..I.N.D.I.A ಕೂಟಕ್ಕೆ ಪ್ರಾಣಸಂಕಟ..!

Published : Jan 28, 2024, 03:01 PM IST

ಜಂಪಿಂಗ್ ಸ್ಟಾರ್ ನಿತೀಶ್ ಹಿಂದಿದೆ ಇಂಟ್ರೆಸ್ಟಿಂಗ್ ಟ್ರ್ಯಾಕ್ ರೆಕಾರ್ಡ್..!
"ಅಂದರ್ ಬಾಹರ್" ಆಟದ ನಿಸ್ಸೀಮನಿಂದ ಮತ್ತೊಂದು ಚದುರಂಗ..!
ಮೈತ್ರಿ ಆಟದ ನಿಸ್ಸೀಮ.. ದೋಸ್ತಿ ಬದಲಿಸಿದ್ದೇಕೆ “ಬಿಹಾರಿ ಬಾಬು”..? 
 

ರಾಜಕೀಯ ಕ್ಷಿಪ್ರಕ್ರಾಂತಿಯ ನೆಲ ಬಿಹಾರದ(Bihar) ರಾಜಕಾರಣದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಇದು ಬಿರುಗಾಳಿಯಷ್ಟೇ ಅಲ್ಲ, ಸುನಾಮಿ. I.N.D.I.A ಮೈತ್ರಿಕೂಟದ ಸೂತ್ರಧಾರ, ಪ್ರಧಾನಿ ಮೋದಿ ವಿರುದ್ಧ ದಂಡು ಕಟ್ಟಿ ಯುದ್ಧಕ್ಕೆ ನಿಂತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಇದ್ದಕ್ಕಿದ್ದಂತೆ ತಮ್ಮ ವರಸೆ ಬದಲಿಸಿದ್ದಾರೆ. ಬಿಹಾರದ ಜೆಡಿಯು ಲೀಡರ್ ನಿತೀಶ್ ಕುಮಾರ್ ಆ ಸಾಲಿಗೆ ಸೇರಿದವರು. ಮೀನಿನ ಹೆಜ್ಜೆ ಗುರುತನ್ನು ಬೇಕಾದ್ರೂ ಕಂಡು ಹಿಡಿಯಬಹುದು. ಆದ್ರೆ ನಿತೀಶ್ ಕುಮಾರ್ ಅವ್ರ ರಾಜಕೀಯ ನಡೆಗಳನ್ನು ಗುರುತಿಸೋದು ಕಷ್ಟ. ಕಳೆದ 10 ವರ್ಷಗಳಲ್ಲಿ ನಿತೀಶ್ ಕುಮಾರ್ ಆಡಿದ ರಾಜಕೀಯದಾಟಗಳನ್ನು ನೋಡಿದ್ರೆ, ಎಂಥವರಾದ್ರೂ ಒಂದು ಕ್ಷಣ ಬೆಚ್ಚಿ ಬೀಳ್ತಾರೆ, ಅಚ್ಚರಿ ಪಡ್ತಾರೆ. ಈಗ ನಿತೀಶ್ ಅಂಥದ್ದೇ ಆಟವನ್ನು ಆಡ್ತಾ ಇದ್ದಾರೆ. ಆರ್.ಜೆ.ಡಿ(RJD) ಮತ್ತು ಕಾಂಗ್ರೆಸ್(Congress) ಜೊತೆಗೂಡಿ ಮಹಾಘಟಬಂಧನ್ ಹೆಸರಿನ ಮೈತ್ರಿಕೂಟ ಕಟ್ಟಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್, ಈಗ ಮತ್ತೊಮ್ಮೆ ಚದುರಂಗದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ಬಿಜೆಪಿ(BJP) ಜೊತೆ ಸೇರಿ ಹೊಸ ಸರ್ಕಾರ ರಚಿಸೋದಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಇದೇ 29ರಂದು ಬಿಹಾರ ಪ್ರವೇಶಿಸ್ತಾ ಇದೆ. ಅದಕ್ಕೂ ಮೊದಲೇ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಗಾಳಿ ಎದ್ದಿದೆ. ಇಂಡಿಯಾ ಮೈತ್ರಿಕೂಟದ ರೂವಾರಿ ನಿತೀಶ್ ಕುಮಾರ್, ಮಹಾಮೈತ್ರಿಯಿಂದ ಹೊರ ನಡೆದು ಮತ್ತೆ NDA ಮೈತ್ರಿಕೂಟ ಸೇರಿದ್ದಾರೆ.

ಇದನ್ನೂ ವೀಕ್ಷಿಸಿ:  ಇಂಡಿಯಾ ಮೈತ್ರಿಕೂಟ ಛಿದ್ರವಾಗಿದೆ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ: ಬಿಎಸ್‌ವೈ

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more