Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

Published : Mar 07, 2024, 05:45 PM IST

ಮೂರು ಸಮೀಕ್ಷೆಗಳು ಹೇಳಿದ ಭವಿಷ್ಯವೇನು ಗೊತ್ತಾ..?
ಮೋದಿ ಪಾಲಿಗೆ ವರವಾದವರು ಆ ‘ಪಂಚ’ ಕಾರಣಗಳು!
ವಿಪಕ್ಷಗಳ ಟೆನ್ಷನ್ ಹೆಚ್ಚಿಸಿದ್ದೇಕೆ ಸಾಲು ಸಾಲು ಸಮೀಕ್ಷೆಗಳು?

ರಾಷ್ಟ್ರ ರಾಜಕಾರಣ ಈಗ ಮಿಂಚಿನ ವೇಗದಲ್ಲಿ ಬದಲಾಗ್ತಾ ಇದೆ. ಒಂದು ಕಡೆ ಮಹಾಚುನಾವಣೆಗೆ ಪಿಚ್ ರೆಡಿ ಆಗ್ತಾ ಇದ್ರೆ, ಇನ್ನೊಂದು ಕಡೆ ಸೆಂಚುರಿ ಸ್ಟಾರ್‌ಗಳೆಲ್ಲಾ ಶತಕ, ದ್ವಿಶತಕ, ತ್ರಿಶತಕ ಬಾರಿಸೋ ಕನಸು ಕಾಣ್ತಿದ್ದಾರೆ. ಆ ಪೈಕಿ ಪ್ರಧಾನಿ ಮೋದಿ(Narendra Modi), ಚತುರ್ ಶತಕ ಬಾರಿಸೋ ಅತಿ ದೊಡ್ಡ ಕನಸು ಕಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾವೂ ನೀವೆಲ್ಲರೂ ಮತ್ತೊಂದು ಮಹಾ ಚುನಾವಣಾ(Loksabha) ಸಂಗ್ರಾಮಕ್ಕೆ  ಸಾಕ್ಷಿಯಾಗಲಿದ್ದೇವೆ. ಆದ್ರೆ, ಈ ಸಂಗ್ರಾಮದಲ್ಲಿ ಗೆಲುವು ತನಗೇ ದಕ್ಕಲಿದೆ ಅನ್ನೋ ಗುಂಗಿನಲ್ಲಿ ಬಿಜೆಪಿ(BJP) ಇದೆ. 2014ರಲ್ಲಿ, 2019ರಲ್ಲಿ, ಎರಡು ಬಾರಿ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳ ಜೊತೆಗೆ, ಹೊಸ ದಾಖಲೆಯನ್ನೇ ಸೃಷ್ಟಿಸೋ ಮೂಲಕ, ಮೋದಿ ಪಟ್ಟವೇರಲಿದ್ದಾರೆ ಅನ್ನೋ ಮಾತು, ಮೋದಿ ಪಾಳಯದಿಂದ ಮಾರ್ದನಿಸ್ತಾ ಇದೆ. ಈ ಮಾತು ಸತ್ಯವಾಗೋ ಸಾಧ್ಯತೆ ದಟ್ಟವಾಗಿದೆ ಅಂತ ಸಮೀಕ್ಷೆಗಳು ಹೇಳ್ತಿದ್ದಾವೆ. ಮೋದಿ ಅವರಂತೂ ಈ ಬಾರಿ ಗೆದ್ದೇ ಗೆಲ್ಲುವ ಅಗಾಧ ವಿಶ್ವಾಸದಿಂದ್ದಾರೆ. ಕಳೆದ ಪಂಚರಾಜ್ಯ ಚುನಾವಣೆಗಳ ಫಲಿತಾಂಶದ ಬಳಿಕ, ಮೋದಿ ಪಡೆಗೆ ಇದ್ದ ಅಲ್ಪಸ್ವಲ್ಪ ಚಿಂತೆ ಕೂಡ ದೂರವಾಗಿತ್ತು.. ಕರ್ನಾಟಕ(Karnataka) ಕೈತಪ್ಪಿದಾಗಿನಿಂದಲೂ ಪರಿತಪಿಸುತ್ತಿದ್ದ ಕಮಲ ಪಡೆ, ಪಂಚರಾಜ್ಯಗಳನ್ನ ಗೆದ್ದ ಬಳಿಕ, ಮತ್ತಷ್ಟು ಪುಟಿದೆದ್ದಿತ್ತು.. ಅಲ್ಲಿಂದ ಮುಂದೆ ಮೋದಿ ಸೇನೆ ಹಿಂದಿರುಗಿ ನೋಡಿದ್ದೇ ಇಲ್ಲ.. ಅವರ ಕಣ್ಣಿದ್ದದ್ದು, ಮುಂದೆ ಇದ್ದ ಲೋಕಸಭೆಯ ಮೇಲೆ.

ಇದನ್ನೂ ವೀಕ್ಷಿಸಿ:  ಲವ್‌ನಲ್ಲಿ ಬಿದ್ದ ಫಸ್ಟ್ ರ‍್ಯಾಂಕ್ ಭೂಮಿಕಾ.. ಅವಳ ಕಥೆ ಮುಗಿಸಿ ರೈಲಿಗೆ ತಲೆ ಕೊಟ್ಟ ಪಾಗಲ್‌..!

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more